ಬಜಾರ್ ಹೀರೋ ಧನ್ವೀರ್ ಗೆ ದರ್ಶನ್ ಅಂದ್ರೆ ಪ್ರಾಣ!
Team Udayavani, Jan 26, 2019, 7:17 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಡೀ ಕರ್ನಾಟಕದ ಸಕಲ ಭೂಭಾಗಗಳಲ್ಲಿಯೂ ಅಭಿಮಾನಿ ಪಡೆ ಹೊಂದಿರೋ ನಟ. ಅವರನ್ನೇ ಆರಾಧಿಸುವ, ತಮ್ಮ ಸಾಧನೆಯ ಹಾದಿಗೆ ಅವರ ಬದುಕನ್ನೇ ಸ್ಪೂರ್ತಿ ಅಂದುಕೊಂಡಿರುವವರು ದಂಡಿ ದಂಡಿಯಾಗಿ ಕಾಣಸಿಗುತ್ತಾರೆ. ಹೊರ ಜಗತ್ತಿನ ವಿಚಾರ ಬಿಡಿ, ಚಿತ್ರರಂಗದಲ್ಲಿಯೇ ಅಂಥವರ ಸಂಖ್ಯೆ ಸಾಕಷ್ಟಿದೆ. ಹೀಗೆ ದರ್ಶನ್ ಅವರನ್ನೇ ರೋಲ್ ಮಾಡೆಲ್ ಆಗಿಸಿಕೊಂಡು ಬಣ್ಣ ಹಚ್ಚಿದವರಲ್ಲಿ ಬಜಾರ್ ಚಿತ್ರದ ನಾಯಕಲ ಧನ್ವೀರ್ ಕೂಡಾ ಒಬ್ಬರು.
ಹಣವೊಂದಿದ್ದರೆ ಸಿನಿಮಾ ಮಾಡಿ ಬಿಡಬಹುದು, ಹೀರೋ ಕೂಡಾ ಆಗಬಹುದು ಅಂದುಕೊಂಡವರು ಅನೇಕರಿದ್ದಾರೆ. ಆದರೆ ಬಜಾರ್ ನಾಯಕ ಧನ್ವೀರ್ ಮಾತ್ರ ಕೊಂಚ ಡಿಫರೆಂಟು. ಮಾಮೂಲಿಯಾಗಿದ್ರೆ ಅವರೂ ಕೂಡಾ ಸಾಮಾನ್ಯ ಮೆಂಟಾಲಿಟಿಯನ್ನೇ ಹೊಂದಿರುತ್ತಿದ್ದರೇನೋ. ಆದರೆ ಖ್ಯಾತ ನಟನ ಮಗನಾಗಿದ್ದರೂ ಕಷ್ಟಪಟ್ಟು ಮೇಲೆ ಬಂದಿರೋ ಚಾಲೆಂಜಿಂಗ್ ಸ್ಟಾರ್ ಆರಂಭದಿಂದಲೂ ಧನ್ವೀರ್ ಪಾಲಿಗೆ ಸ್ಫೂರ್ತಿ .
ಈ ಕಾರಣದಿಂದಲೇ ನಿರ್ಮಾಪಕ ತಿಮ್ಮೇಗೌಡರ ಮಗನಾಗಿದ್ದರೂ ಕೂಡಾ ಧನ್ವೀರ್ ಕಷ್ಟಪಟ್ಟೇ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ಬಜಾರ್ ಕಥೆ ಕೇಳಿದ ನಂತರ ನಿರ್ದೇಶಕ ಸುನಿ ಬಳಿ ಈ ಪಾತ್ರಕ್ಕಾಗಿ ಏನೇನು ಕಸರತ್ತು ನಡೆಸಬೇಕೆಂದು ಧನ್ವೀರ್ ಮಾರ್ಗದರ್ಶನ ಪಡೆದುಕೊಂಡಿದ್ದರಂತೆ. ಅದಕ್ಕೆ ತಕ್ಕುದಾಗಿ ಎಲ್ಲದರಲ್ಲಿಯೂ ಧನ್ವೀರ್ ಪಳಗಿಕೊಂಡಿದ್ದಾರೆ. ಈ ಸಿನಿಮಾ ಹಾಡೊಂದಕ್ಕಾಗಿ ಅತೀ ಕಡಿಮೆ ಅವಧಿಯಲ್ಲಿ ಸಿಕ್ಸ್ ಪ್ಯಾಕ್ ರೂಪಿಸಿಕೊಂಡಿದ್ದಾರೆಂದರೆ ಧನ್ವೀರ್ ಗುಣ ಎಂಥಾದ್ದೆಂಬುದು ಯಾರಿಗಾದರೂ ಅರ್ಥವಾಗುತ್ತೆ. ಇಂಥಾ ಹಾರ್ಡ್ ವರ್ಕ್ ಗೆಲ್ಲ ದರ್ಶನ್ ಅವರೇ ಸ್ಫೂರ್ತಿ ಎಂಬುದು ಧನ್ವೀರ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ