ಇಂದಿನಿಂದ ಭಜರಂಗಿ-2 ಹವಾ ಶುರು: ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ ಹೊಸ ಲೋಕ


Team Udayavani, Oct 29, 2021, 9:03 AM IST

bhajarangi 2

ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳ ಕುತೂಹಲ ಹೆಚ್ಚುತ್ತಲೇ ಇದೆ. ಅದಕ್ಕೆ ಕಾರಣ “ಭಜರಂಗಿ-2′. ಶಿವರಾಜ್‌ ಕುಮಾರ್‌ ನಟನೆಯ “ಭಜರಂಗಿ-2′ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ದೊಡ್ಡ ಗ್ಯಾಪ್‌ನ ನಂತರ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿರುವುದರಿಂದ ಸಹಜವಾಗಿಯೇ ಶಿವಣ್ಣ ಫ್ಯಾನ್ಸ್‌ ಈ ಚಿತ್ರವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿದ್ದಾರೆ. ಈ ಮೂಲಕ ಕೋವಿಡ್‌ ಎರಡನೇ ಲಾಕ್‌ಡೌನ್‌ ನಂತರ ಬಿಡುಗಡೆಯಾಗುತ್ತಿರುವ ಅದ್ಧೂರಿ ಸಿನಿಮಾವಾಗಿ “ಭಜರಂಗಿ-2′ ಹೊರಹೊಮ್ಮುತ್ತಿದೆ. ಎ.ಹರ್ಷ ಅವರ ಕನಸಿಗೆ, ನಿರ್ಮಾಪಕ ಜಯಣ್ಣ ಸಾಥ್‌ ನೀಡುವ ಮೂಲಕ ಒಂದು ಫ್ಯಾಂಟಸಿ ಲೋಕವನ್ನು ಸೃಷ್ಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌, ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ.

“ಭಜರಂಗಿ-2′ ಚಿತ್ರದ ಕೆಲವು ಹೈಲೈಟ್ಸ್‌ಗಳು ಇಲ್ಲಿವೆ…

ಶಿವರಾಜ್‌ಕುಮಾರ್‌- ಹರ್ಷ ಕಾಂಬಿನೇಶನ್‌ನಲ್ಲಿ ಈ ಹಿಂದೆ “ಭಜರಂಗಿ-2′ ಚಿತ್ರ ಬಂದು, ಹಿಟ್‌ ಆಗಿತ್ತು. ಆದರೆ, “ಭಜರಂಗಿ-2′ ಅದರ ಮುಂದುವರೆದ ಭಾಗವಲ್ಲ. ಸಂಪೂರ್ಣ ಬೇರೆಯೇ ಕಥೆ. ಆ ಚಿತ್ರದ ನೋಡಿರದಂತಹ ಒಂದು ಹೊಸ ಲೋಕವನ್ನು ಇಲ್ಲಿ ಸೃಷ್ಟಿಸಲಾಗಿದೆ. ಚಿತ್ರದ ಟೈಟಲ್‌ ಅಷ್ಟೇ ಇಲ್ಲಿ ಮುಂದುವರೆದಿದೆಯೇ ಹೊರತು ಕಥೆಯಲ್ಲ.

* ಭಜರಂಗಿ-2 ಒಂದು ಫ್ಯಾಂಟಸಿ ಡ್ರಾಮಾ ಸಿನಿಮಾ. ನೀವಿದನ್ನು ಡಿವೋಶನಲ್‌ ಮಾಸ್‌ ಸಿನಿಮಾ ಎಂದು ಕರೆಯಬಹುದು. ಅದಕ್ಕೆ ಕಾರಣ ಚಿತ್ರದಲ್ಲಿ ಕೆಟ್ಟದು-ಒಳ್ಳೆಯದು, ದೇವರು- ರಾಕ್ಷಸರು ಈ ತರಹದ ಒಂದಷ್ಟು ಅಂಶಗಳು ಇರುವುದು. ಜೊತೆಗೆ ಹಾಲಿವುಡ್‌ ಸಿನಿಮಾಗಳಲ್ಲಿ ಕಾಣುವಂತಹ ವಿಚಿತ್ರ ಗೆಟಪ್‌ನ ಪಾತ್ರಗಳು ಈಚಿತ್ರದಲ್ಲಿದ್ದು, ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ರಂಜಿಸಲಿವೆ.

* ಚಿತ್ರದಲ್ಲಿ ವೈದ್ಯೋ ನಾರಾಯಣೋ ಹರಿ ಎಂಬ ಹಾಡಿದೆ. ಆ ಹಾಡಿಗೂ ಇಡೀ ಕಥೆಗೂ ಒಂದು ಲಿಂಕ್‌ ಇದೆ. ಚಿತ್ರದ ಟ್ರೇಲರ್‌ನ್ನು ಸೂಕ್ಷ್ಮವಾಗಿ ಗಮನಿಸಿದಾಗ “ವೈದ್ಯೋ ನಾರಾಯಣೋ ಹರಿ’ ಕಾನ್ಸೆಪ್ಟ್ನ ಕೆಲವು ದೃಶ್ಯಗಳು ಕಾಣಸಿಗುತ್ತವೆ.

* ಸಾಮಾನ್ಯವಾಗಿ ಚಿತ್ರದ ಟ್ರೇಲರ್‌ಗಳಲ್ಲಿ ಡೈಲಾಗ್‌ ಇರುತ್ತವೆ. ಆದರೆ, “ಭಜರಂಗಿ-2′ ಚಿತ್ರದ ಟ್ರೇಲರ್‌ನಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ. ಅದಕ್ಕೆ ಕಾರಣ, ಮಾತಿಗಿಂತ ಸನ್ನಿವೇಶ ಮುಖ್ಯ ಎಂಬುದು. ಇಡೀ ಚಿತ್ರದ ಮೇಕಿಂಗ್‌, ಹಿನ್ನೆಲೆ ಸಂಗೀತ, ಕಲಾವಿದರ ಮುಖಭಾವದಲ್ಲೇ ಕಥೆ ಹೇಳಬೇಕೆಂಬ ಕಾನ್ಸೆಪ್ಟ್ನಲ್ಲಿ ಈ ಟ್ರೇಲರ್‌ ಕಟ್ಟಿಕೊಡಲಾಗಿದೆ. ಅದರಂತೆ “ಭಜರಂಗಿ-2′ ಟ್ರೇಲರ್‌ ಹಿಟ್‌ ಆಗಿ, ಸಿನಿಮಾದ ಕುತೂಹಲವನ್ನು ಹೆಚ್ಚಿಸಿದೆ. ಜೊತೆಗೆ ಅರ್ಜುನ್‌ ಜನ್ಯಾ ಸಂಗೀತದ ಹಾಡುಗಳು ಈಗಾಗಲೇ ಹಿಟ್‌ಲಿಸ್ಟ್‌ ಸೇರಿ, ಭಜರಂಗಿಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಿದಿದೆ.

* ಈ ಸಿನಿಮಾದ ಹೈಲೈಟ್‌ಗಳಲ್ಲಿ ಸೆಟ್‌ ಕೂಡಾ ಒಂದು. ಸೆಟ್‌ಗಿಂತ ಗ್ರಾಫಿಕ್‌ ಮೊರೆ ಹೋಗುತ್ತಿರುವ ಈ ಸಮಯದಲ್ಲಿ “ಭಜರಂಗಿ-2′ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದೆ.

*ಒಮ್ಮೆ ಸುಟ್ಟುಹೋದ ಸೆಟ್‌ ಅನ್ನೇ ಚಿತ್ರತಂಡ ಅಷ್ಟೇ ಪ್ರೀತಿಯಿಂದ ಮರು ನಿರ್ಮಾಣ ಮಾಡಿದೆ. ಈ ಮೂಲಕ ತೆರೆಮೇಲೆ ಹೊಸ ಲೋಕವೊಂದು ತೆರೆದುಕೊಳ್ಳಲಿದೆ.

* ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಶಿವರಾಜ್‌ಕುಮಾರ್‌, ಭಾವನಾ, ಶ್ರುತಿ, ಶಿವರಾಜ್‌ ಕೆ.ಆರ್‌.ಪೇಟೆ… ಹೀಗೆ ಸಾಕಷ್ಟು ಮಂದಿ ನಟಿಸಿದ್ದಾರೆ. ಆದರೆ, ಇವರೆಲ್ಲರೂ ವಿಭಿನ್ನ ಪಾತ್ರ ಹಾಗೂ ಗೆಟಪ್‌ನಲ್ಲಿ ಕಾಣಿಸಿಕೊಂಡು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

* ದೇಶದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಈ ಮೂಲಕ ಎರಡನೇ ಲಾಕ್‌ಡೌನ್‌ ನಂತರ ಕನ್ನಡ ಚಿತ್ರರಂಗದಿಂದ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಹಾಗೂ ಅದ್ಧೂರಿ ಚಿತ್ರವಾಗಿ “ಭಜರಂಗಿ-2′ ಬಿಡುಗಡೆಯಾಗುತ್ತಿದೆ.

* ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಹಿಂದಿನ “ಭಜರಂಗಿ’ ಚಿತ್ರ ಇಂದಿನ “ಭಜರಂಗಿ’ ಚಿತ್ರ ಒಂದು ಫೀಲ್‌ ಕೊಟ್ಟರೆ, “ಭಜರಂಗಿ-2′ ಮತ್ತೂಂದು ಭಜರಂಗಿ-2′ ಮತ್ತೂಂದು ಫೀಲ್‌ ಕೊಡಲಿದೆ.

ಹೊಸದೊಂದು ಫ್ಯಾಂಟಸಿ ಹೊಸದೊಂದು ಫ್ಯಾಂಟಸಿ ಲೋಕವನ್ನು ಇಲ್ಲಿ ಸೃಷ್ಟಿಸಲಾ ಲೋಕವನ್ನು ಇಲ್ಲಿ ಸೃಷ್ಟಿಸಲಾಗಿದೆ. ಸಾಕಷ್ಟು ಅಡೆತಡೆ ದೆ. ಸಾಕಷ್ಟು ಅಡೆತಡೆ ಬಂದರೂ,  ನಿರ್ಮಾಪಕ ಜಯಣ್ಣ ಧೈರ್ಯವಾಗಿ ನಿಂತು ಚಿತ್ರವನ್ನು ಅದ್ಧೂರಿಯಾಗಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.. ನಿರ್ದೇಶಕ ‌ಹರ್ಷ ಶ್ರಮ ತೆರೆಮೇಲೆ ಕಾಣಲಿದೆ.- ಶಿವರಾಜ್‌ ಕುಮಾರ್‌

ರವಿ ಪ್ರಕಾಶ್ ರೈ

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.