ಇದೇ 18ರಿಂದ ಭರಾಟೆ ಅಬ್ಬರಕ್ಕೆ ಆರಂಭ!
Team Udayavani, Oct 12, 2019, 2:24 PM IST
ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಭರಾಟೆ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್ನ ಭರಾಟೆಯೇನು ಸಾಮಾನ್ಯದಲ್ಲ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಚಿತ್ರಗಳೆಂದರೇನೇ ಮಾಸ್ ಕಥನ ಹೊಂದಿರುತ್ತವೆಂಬ ಭಾವನೆ ಪ್ರೇಕ್ಷಕರಲ್ಲಿದೆ. ರೋರಿಂಗ್ ಸ್ಟಾರ್ ಅಭಿಮಾನಿಗಳೂ ಕೂಡಾ ಅಂಥಾ ಇಮೇಜಿನಲ್ಲಿಯೇ ತಮ್ಮಿಷ್ಟದ ನಟನನ್ನು ಕಣ್ತುಂಬಿಕೊಳ್ಳಲು ಕಾತರದಿಂದಿರುತ್ತಾರೆ. ಭರಾಟೆಯಲ್ಲಿಯಂತೂ ಅಂಥಾ ಕಾತರ ತಣಿಯುವಂಥಾ ಮಾಸ್ ಸನ್ನಿವೇಶಗಳಿವೆ. ಅದರ ಜೊತೆಯಲ್ಲಿಯೇ ಶ್ರೀ ಮುರುಳಿ ಈ ಹಿಂದೆಂದೂ ಕಾಣಿಸಿಕೊಂಡಿರದಂಥಾ ಪಾತ್ರಕ್ಕೂ ಜೀವ ತುಂಬಿದ್ದಾರೆ. ಇಂಥಾ ಹಲವಾರು ವಿಶೇಷತೆಗಳೊಂದಿಗೇ ಈ ಚಿತ್ರ ಇದೇ 18ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಸುಪ್ರೀತ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಅದ್ದೂರಿ ಚಿತ್ರ ಭರಾಟೆ. ಯುವ ನಿರ್ಮಾಪಕರಾದ ಸುಪ್ರೀತ್ ಅದೆಷ್ಟು ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆಂಬುದು ಈಗಾಗಲೇ ಸ್ಪಷ್ಟವಾಗಿಯೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಭರಾಟೆ ಈ ಪಾಟಿ ಭರಾಟೆಯ ಒಡ್ಡೋಲಗದಲ್ಲಿ ಬಿಡುಗಡೆಯ ಹೊಸ್ತಿಲು ತಲುಪಿಕೊಂಡಿರೋದರ ಹಿಂದೆಯೂ ಅದ್ದೂರಿ ನಿರ್ಮಾಣದ ಪಾತ್ರ ಪ್ರಧಾನವಾಗಿದೆ. ಇಂಥಾ ನಿರ್ಮಾಣದ ಸಾಥ್ನೊಂದಿಗೆ ಚೇತನ್ ಕುಮಾರ್ ಮಜವಾದ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಮಾಸ್ ಲುಕ್ಕಿನಲ್ಲಿ ಕಂಗೊಳಿಸೋದು ಹೊಸತೇನಲ್ಲ. ಆದರೆ ಈ ಚಿತ್ರದಲ್ಲಿ ಅವರು ಮತ್ತೊಂದು ಭಿನ್ನವಾದ ಶೇಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಭರಾಟೆ ಎಂಬುದು ಮಾಮೂಲಿ ಮೆಥೆಡಿನ ಚಿತ್ರವಲ್ಲ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಇಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿಯ ಮಾಸ್ ಇಮೇಜ್ ಮತ್ತಷ್ಟು ಮಿರುಗಿದೆ. ಅದರ ಜೊತೆ ಜೊತೆಗೇ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಪಾತ್ರದಲ್ಲಿಯೂ ಅವರು ನಟಿಸಿದ್ದಾರೆ. ಈ ಮೂಲಕ ಶ್ರೀ ಮುರುಳಿ ಮತ್ತೊಂದು ಬಗೆಯಲ್ಲಿಯೂ ಪ್ರೇಕ್ಷಕರನ್ನು ತಲುಪಿ, ಅಭಿಮಾನಿಗಳನ್ನು ಖುಷಿಗೊಳಿಸಲು ತಯಾರಾಗಿದ್ದಾರೆ. ಇದೆಲ್ಲ ವಿಶೇಷತೆಗಳೂ ಕೂಡಾ ಇದೇ ತಿಂಗಳ 18ರಂದು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ