ಗೋವಾದಲ್ಲಿ ಭಾವನಾ ಫೋಟೋ ಶೂಟ್
Team Udayavani, Jul 22, 2018, 3:22 PM IST
ಅಪ್ಪಟ ಕನ್ನಡದ ಹುಡುಗಿ ಮತ್ತು ಬೆಲ್ಜಿಯಂ ದೇಶದ ವ್ಯಕ್ತಿ ನಡುವೆ ಮುಗಳ್ನಗೆ, ಆಮೇಲೆ ಮಾತುಕತೆ, ಹಾಗೊಂದು ನೋಟ ಮತ್ತು ಬ್ಯೂಟಿಫುಲ್ ಫೋಟೋ!
– ಇದನ್ನು ಸ್ವಲ್ಪ ಬಿಡಿಸಿ ಹೇಳುವುದಾದರೆ, ಕನ್ನಡದ ನಟಿ ಭಾವನಾ ರಾವ್ ಅವರು ಸುಮ್ಮನೆ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅದು ದೂರದ ಗೋವಾದಲ್ಲಿ. ಹಾಗಂತ ಅವರಾಗಿಯೇ ಮಾಡಿಸಿಕೊಂಡ ಫೋಟೋ ಶೂಟ್ ಅದಲ್ಲ. ಅವರನ್ನು ನೋಡಿದ ಬೆಲ್ಜಿಯಂ ದೇಶದ ಫೋಟೋಗ್ರಾಫರ್ ಕರೆದು, ನಿಲ್ಲಿಸಿ ತೆಗೆದ ಗ್ಲಾಮರಸ್ ಫೋಟೋಗಳು. ಹಾಗೆ ತೆಗೆದ ಫೋಟೋಗಳನ್ನು ಭಾವನಾ ರಾವ್ ಈಗ ಹರಿಬಿಟ್ಟಿದ್ದಾರೆ.
ಇಷ್ಟಕ್ಕೂ ಭಾವನಾರಾವ್ ಅವರು ಗೋವಾಗೆ ಹೋಗಿದ್ದೇಕೆ, ಅವರನ್ನು ನೋಡಿದ ಬೆಲ್ಜಿಯಂ ಫೋಟೋಗ್ರಾಫರ್ ಕ್ಯಾಮೆರಾ ಹಿಡಿದು ಪಟಪಟನೆ ಫೋಟೋ ತೆಗೆದಿದ್ದು ಯಾಕೆ ಎಂಬ ಬಗ್ಗೆ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಒಂದು
ಜಾಹೀರಾತು. ಹೌದು, ಭಾವನಾ ರಾವ್ ಅವರು ಒಂದು ಜಾಹೀರಾತು ಚಿತ್ರೀಕರಣಕ್ಕಾಗಿ ಗೋವಾಗೆ ಹೋಗಿದ್ದ ಸಂದರ್ಭದಲ್ಲಿ, ಆ ಜಾಹೀರಾತು ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಿದ್ದ ಬೆಲ್ಜಿಯಂ ದೇಶದ ಫೋಟೋಗ್ರಾಫರ್ ಫ್ರಾನ್ಸ್ಕೋ ಮ್ಯಾಥೀಸ್ ಎಂಬುವವರು, ಭಾವನಾ ರಾವ್ ಅವರನ್ನು ನೋಡಿದ ಕೂಡಲೇ, ಫೋಟೋಶೂಟ್
ಮಾಡುವ ಆಸೆ ಚಿಗುರಿದೆ. ಭಾವನಾ ರಾವ್ ಬಳಿ ಬಂದವರೇ, “ನಾನು ಇದುವರೆಗೆ ಇಂಡಿಯನ್ಸ್ ಫೋಟೋಶೂಟ್ ಮಾಡಿಲ್ಲ.
ನೀವು ಯೆಸ್ ಅಂದರೆ, ನಿಮ್ಮದ್ದೊಂದು ಫೋಟೋಶೂಟ್ ಮಾಡ್ತೀನಿ’ ಅಂದಿದ್ದಾರೆ. ಒಬ್ಬ ಅಂತಾರಾಷ್ಟ್ರೀಯ ಖ್ಯಾತಿಯ ಫೋಟೋಗ್ರಾಫರ್ ಹಾಗೆ ಬಂದು ಹೇಳುತ್ತಾರೆ ಅಂದರೆ, ಸಿಕ್ಕ ಅವಕಾಶ ಬಿಟ್ಟರುಂಟೇ? ಭಾವನಾ ಹಿಂದೆ
ಮುಂದೆ ನೋಡದೆ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ.
ಗೋವಾದಲ್ಲೇ ಶಾಪಿಂಗ್ ನಡೆಸಿ, ಕಾಸ್ಟೂéಮ್ಸ್ ಖರೀದಿಸಿ, ಫ್ರಾನ್ಸ್ಕೋ ಮ್ಯಾಥೀಸ್ ಕ್ಯಾಮೆರಾಗೆ ತರಹೇವಾರಿ ಫೋಸ್ ಕೊಟ್ಟಿದ್ದಾರೆ. ಫ್ರಾನ್ಸ್ಕೋ ಮ್ಯಾಥೀಸ್ ತೆಗೆದಿರುವ ಫೊಟೋಗಳನ್ನು ನೋಡಿ ಖುಷಿಗೊಂಡ ಭಾವನಾ, ಫ್ರಾನ್ಸ್ಕೋ ಅವರ ವರ್ಕ್ಸ್ಟೈಲ್, ಸ್ಟಾಂಡರ್ಡ್ ನೋಡಿ ಇನ್ನಷ್ಟು ಉತ್ಸಾಹಗೊಂಡಿದ್ದಾರೆ. ಅಷ್ಟೊಂದು ಗ್ಲಾಮರಸ್ ಆಗಿ ಕಾಣಿ¤àನಾ ಅಂತ ಸ್ವತಃ ಭಾವನಾ ಅವರಿಗೇ ಪ್ರಶ್ನೆ ಎದುರಾಗಿದೆ. ಅದನ್ನು ಹೇಳಿ ಅವರೇ ಜೋರು
ನಗೆ ಬೀರುತ್ತಲೇ ಸುಮ್ಮನಾಗುತ್ತಾರೆ. ಅಂದಹಾಗೆ, ಸದ್ಯಕ್ಕೆ ಭಾವನಾ “ಗಾಂಧಿಗಿರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಹೊಸಬರ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಈ ನಡುವೆ ತೆಲುಗಿನಿಂದಲೂ ಅವಕಾಶ
ಬರುತ್ತಿದೆ. ಒಳ್ಳೆಯ ಕಥೆ, ಪಾತ್ರ ನೋಡಿಕೊಂಡು ಸಿನಿಮಾ ಒಪ್ಪಿಕೊಳ್ಳುವ ಯೋಚನೆಯಲ್ಲಿದ್ದಾರೆ. ಇನ್ನು, ಅವರ ಡ್ಯಾನ್ಸ್ ಕ್ಲಾಸ್ನಲ್ಲೀಗ ಬರೋಬ್ಬರಿ 100 ಮಂದಿ ತುಂಬಿದ್ದಾರೆ. ಅಲ್ಲಿ ಬ್ಯಾಲೆ, ಬಾಲಿವುಡ್ ಸ್ಟೆಪ್ಸ್ ಹೇಳಿಕೊಡುವುದರ ಜೊತೆಗೆ μಟ್ನೆಸ್ ತರಬೇತಿ ಸಹ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!