ಬಿಡುಗಡೆಗೆ ಸಿದ್ದವಾದ ಭೂತಃಕಾಲ
Team Udayavani, Jan 21, 2019, 6:01 AM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ ‘ಭೂತಃಕಾಲ’ (ಕಳೆದುಹೋದ ಕಾಲದ ಸುತ್ತ) ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಮುಂಬರುವ ಫೆಬ್ರವರಿ 1 ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ. ದಿಂಡುದ ಮಹಾಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಹಂಸ ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಿಗೂಢ ಸ್ಥಳವೊಂದರಲ್ಲಿ, ಭಯಾನಕ ಘಟನೆಗಳ ಸುತ್ತ ನಡೆಯುವ ಹಾರರ್-ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರಕ್ಕೆ ಸಚಿನ್ ಬಾಡಾ ನಿರ್ದೇಶನವಿದೆ. ಈ ಚಿತ್ರಕ್ಕೆ ಪ್ರಮೋದ್ ಸೂರ್ಯ ಸಂಗೀತವಿದ್ದು, ಚಿತ್ರದಲ್ಲಿ ಆನಂದ್ ಗಣೇಶ್, ರಕ್ಷಿತ, ಅನನ್ಯ ಭಟ್, ಟೆನ್ನಿಸ್ ಕೃಷ್ಣ, ಶ್ರೀನಿವಾಸ ಪ್ರಭು, ಅರುಣಾ ಬಾಲರಾಜ್, ಕಿರಣ್ ಕುಮಾರ್, ತರಂಗ ವಿಶ್ವ, ಬೇಬಿ ವೈಭವಿ, ಹರೀಶ್, ರಮೇಶ್, ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.