ಸ್ವಾಭಿಮಾನ ಜನರ ಆಶೀರ್ವಾದ
ಮುಂದಿನ ಎಲ್ಲಾ ಚಿತ್ರಗಳ ಟೈಟಲ್ ಕಾರ್ಡ್ನಲ್ಲಿ ಈ ಹೆಸರು ಫಿಕ್ಸ್
Team Udayavani, Jun 10, 2019, 3:00 AM IST
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಶ್ರಮಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೀಗೊಂದು ನಿರ್ಧಾರ ಮಾಡಿದ್ದಾರೆ. ಆ ನಿರ್ಧಾರ ಏನಪ್ಪಾ ಅಂದರೆ, “ಮಂಡ್ಯ ಜಿಲ್ಲೆಯ ಸ್ವಾಭಿಮಾನ ಜನರ ಆಶೀರ್ವಾದ’!
ಹೀಗೆಂದರೆ, ಸ್ವಲ್ಪ ಗೊಂದಲ ಆಗಬಹುದು. ವಿಷಯವಿಷ್ಟೇ ರಾಕ್ಲೈನ್ ವೆಂಕಟೇಶ್ ಅವರು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುವ ಯಾವುದೇ ಚಿತ್ರಗಳಿರಲಿ, ಆ ಚಿತ್ರದ ಟೈಟಲ್ ಕಾರ್ಡ್ ಮತ್ತು ಪೋಸ್ಟರ್ನಲ್ಲಿ “ಮಂಡ್ಯ ಜಿಲ್ಲೆಯ ಸ್ವಾಭಿಮಾನ ಜನರ ಆಶೀರ್ವಾದ’ ಎಂದು ಹಾಕಿಸುವ ಮೂಲಕ ವಿಶೇಷ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಂಡ “ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಅವರು ವಿಶೇಷವಾಗಿ ಮಂಡ್ಯ ಲೋಕಸಭೆ ಕ್ಷೇತ್ರದ ಜನರಿಗೆ ಥ್ಯಾಂಕ್ಸ್ ಹೇಳುವುದರೊಂದಿಗೆ, ಅವರ ಋಣವನ್ನು ಎಂದೂ ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ನನ್ನ ನಿರ್ಮಾಣದ ಎಲ್ಲಾ ಚಿತ್ರಗಳಲ್ಲು “ಮಂಡ್ಯ ಜಿಲ್ಲೆಯ ಸ್ವಾಭಿಮಾನ ಜನರ ಆಶೀರ್ವಾದ ‘ ಎಂಬ ಹೆಸರು ಇದ್ದೇ ಇರುತ್ತೆ. ಎಂದರು.
ಸುಮಲತಾ ಅಂಬರೀಶ್ ಅವರ ಗೆಲುವಿನಲ್ಲಿ ದರ್ಶನ್, ಯಶ್ ಮತ್ತು ರಾಕ್ಲೈನ್ ವೆಂಕಟೇಶ್ ಕೂಡ ಪಾಲುದಾರರು. ಹಾಗಾಗಿ, ರಾಕ್ಲೈನ್ ವೆಂಕಟೇಶ್ ತುಂಬ ಪ್ರೀತಿಯಿಂದಲೇ ಈ ನಿರ್ಧಾರ ಪ್ರಕಟಿಸುವ ಮೂಲಕ ಮಂಡ್ಯ ಜನರ ಅಭಿಮಾನವನ್ನು ಕೊಂಡಾಡಿದರು.