ಭಟ್ಟರ ಮುಖದಲ್ಲಿ ನಗು ತಂದ…ಬ್ಯಾಡ ಹೋಗು ಅಂದ್ಬುಟ್ಳು!
Team Udayavani, Mar 14, 2019, 12:54 PM IST
ಯೋಗರಾಜ್ ಭಟ್ಟರ ಸಿನಿಮಾಗಳೆಂದರೆ, ಅವು ಮೊದಲು ಸದ್ದು ಮಾಡುವುದೇ ತಮ್ಮ ಹಾಡುಗಳ ಮೂಲಕ. ಬಹುಶಃ ಅದೇ ಕಾರಣಕ್ಕೋ, ಏನೂ.., ಭಟ್ಟರು ಕೂಡ ಸಾಕಷ್ಟು ಅಳೆದು, ತೂಗಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ಹಾಡುಗಳನ್ನೇ ಚಿತ್ರದಲ್ಲಿ ಪೋಣಿಸಿ, ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಭಟ್ಟರ ಇದೇ ತಂತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿರುವ “ಪಂಚತಂತ್ರ’ದಲ್ಲೂ ಮುಂದುವರೆದಿದೆ.
ಹೌದು, ಯೋಗರಾಜ್ ಭಟ್ಟರ ಮತ್ತೂಂದು ಬಹು ನಿರೀಕ್ಷಿತ ಚಿತ್ರ “ಪಂಚತಂತ್ರ’ ಇದೇ ಮಾರ್ಚ್ 29ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇನ್ನು “ಪಂಚತಂತ್ರ’ವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರ ತೆಗೆದುಕೊಂಡು ಹೋಗುವ ಸಲುವಾಗಿ ಯೋಗರಾಜ್ ಭಟ್ ಆ್ಯಂಡ್ ಟೀಮ್
ರಾಜ್ಯಾದ್ಯಂತ ಓಡಾಟ ಮಾಡುತ್ತಾ ಭರ್ಜರಿಯಾಗಿ ಪ್ರಮೋಷನ್ ಕೆಲಸಗಳನ್ನು ನಡೆಸುತ್ತಿದೆ. ಭಟ್ಟರು ಕೂಡ ತಮ್ಮ ಹಿಂದಿನ ಚಿತ್ರಗಳಿಗಿಂತ ಕೊಂಚ ಹೆಚ್ಚಾಗಿಯೇ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ರೌಂಡ್ಸ್ ಹಾಕುತ್ತಿದ್ದಾರೆ.
ಇದೇ ವೇಳೆ ಚಿತ್ರದ ಪ್ರಮೋಶನ್ ಭಾಗವಾಗಿ ಚಿತ್ರತಂಡ “ಪಂಚತಂತ್ರ’ದ “ಬ್ಯಾಡ ಹೋಗು ಅಂದ್ಬುಟ್ಳು.’ ಅನ್ನೋ ಹಾಡನ್ನು ಬಿಡುಗಡೆ ಮಾಡಿದೆ. ವಿ. ಹರಿಕೃಷ್ಣ ಸಂಯೋಜನೆಯ ಈ ಹಾಡಿಗೆ ವಾಸುಕಿ ವೈಭವ್ ಧ್ವನಿಯಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ, ರ್ಯಾಪ್ ಮತ್ತು ಟಪ್ಪಾಂಗುಚ್ಚಿ ಸ್ಟೈಲ್ನಲ್ಲಿರುವ ಈ ಹಾಡು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು,
ಭರ್ಜರಿಯಾಗಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಈ ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ಯೋಗರಾಜ್ ಭಟ್, “ನಮ್ಮ ಹುಡುಗರ ಮನಸ್ಥಿತಿಯನ್ನು ಬಿಂಬಿಸುವಂತ ಹಾಡಿದು. ಅನೇಕ ಯುವಕರಿಗೆ ಈ ಹಾಡು ಬಹುಬೇಗ ಕನೆಕ್ಟ್ ಆಗುವುದರಿಂದ, ಹಾಡಿಗೆ ಇಷ್ಟು ದೊಡ್ಡ ರೆಸ್ಪಾನ್ಸ್ ಸಿಗುತ್ತಿದೆ. ಈ ಹಾಡು
ಚಿತ್ರವನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ.
ಈಗಾಗಲೇ ಬಿಡುಗಡೆಯಾಗಿರುವ “ಪಂಚತಂತ್ರ’ ಚಿತ್ರದ “ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ…’, “ಈ ವಯಸ್ಸಲ್ಲಿ…’ ಹಾಡುಗಳನ್ನು ಸಂಗೀತ ಪ್ರಿಯರು ಇನ್ನು ಗುನುಗುತ್ತಿರುವಾಗಲೇ ಭಟ್ಟರು ಜೋಶ್ ಹೆಚ್ಚಿಸುವಂತ ಮತ್ತೂಂದು ಹಾಡನ್ನು ಕೇಳುಗರ ಮುಂದಿಟ್ಟಿದ್ದಾರೆ.
ಒಟ್ಟಾರೆ “ಪಂಚತಂತ್ರ’ ಬಿಡುಗಡೆಗೂ ಮೊದಲೇ ಹಾಡುಗಳ ಮೂಲಕ ಕುತೂಹಲ ಕೆರಳಿಸಲು ಯಶಸ್ವಿಯಾಗಿರುವ ಯೋಗರಾಜ್ ಭಟ್, ಚಿತ್ರದಲ್ಲಿ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದ್ದಾರೆ ಅನ್ನೋದು ಈ ತಿಂಗಳ ಅಂತ್ಯಕ್ಕೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು