ದಶಕ ಬಳಿಕ ಬಂದವರು…
Team Udayavani, Aug 9, 2017, 10:50 AM IST
ಸಿನಿಮಾ ರಂಗವೇ ಹಾಗೆ. ಇಲ್ಲಿ ಒಮ್ಮೆ ಬಣ್ಣ ಹಚ್ಚಿದವರಿಗೆ ಸದಾ ನಟಿಸುವ ತುಡಿತ ಹೆಚ್ಚುತ್ತಲೇ ಇರುತ್ತೆ. ಕಳೆದ ಹಲವು ವರ್ಷಗಳಿಂದಲೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿದ್ದ ಡಾ. ವಿಜಯ್ಕುಮಾರ್ ಈಗ ಪುನಃ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಒಂದು ದಶಕದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿರುವ ಅವರೀಗ ನಾಯಕರಾಗಿ ನಟಿಸುವುದರ ಜತೆಗೆ ನಿರ್ಮಾಣ ಮತ್ತು ನಿರ್ದೇಶನವನ್ನೂ ಮಾಡುತ್ತಿದ್ದಾರೆ.
ಅಂದಹಾಗೆ, ವಿಜಯಕುಮಾರ್ ನಟಿಸಿ-ನಿರ್ಮಿಸಿ-ನಿರ್ದೇಶಿಸುತ್ತಿರುವ ಚಿತ್ರಕ್ಕೆ “ಪುನಾರಾರಂಭ’ ಎಂದು ಹೆಸರಿಡಲಾಗಿದೆ. ಇದೊಂದು ಮನರಂಜನೆಯ ಸಿನಿಮಾ. ವ್ಯವಹಾರದಿಂದ ನಷ್ಟ ಅನುಭವಿಸಿ ಅನೇಕ ಸಮಸ್ಯೆಗಳನ್ನು ಎದುರಿಸಿದ ನಾಯಕನ ಜೀವನದಲ್ಲಿ ಪುನಃ ಅದೃಷ್ಟದ ಬಾಗಿಲು ತೆರೆಯುತ್ತದೆ. ಅನಾಮಧೇಯ ಹಣ ಸಿಕ್ಕ ನಂತರ ಅದರಿಂದ ಏನೆಲ್ಲಾ ಆಗುತ್ತೆ ಅನ್ನೋದು ಚಿತ್ರದ ಕಥೆ.
ಆಗಸ್ಟ್ 16 ರಂದು ಚಿತ್ರಕ್ಕೆ ಮಹೂರ್ತ ನಡೆಯಲಿದೆ. ವಿಜಯಕುಮಾರ್ಗೆ ನಾಯಕಿಯಾಗಿ ಐಶ್ವರ್ಯ ದಿನೇಶ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಕೆ. ಗಣೇಶ್ರಾವ್ ಸಹ ನಿರ್ದೇಶಕರಾಗಿದ್ದಾರೆ. ವಿಭಿನ್ನ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಡಾ.ರೂಪ ಕುಮಾರ್ ನಿರ್ಮಾಣವಿರುವ ಈ ಚಿತ್ರಕ್ಕೆ ಎಂ. ಮುತ್ತುರಾಜ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಂಗೀತವಿದೆ. ಜಯಂತ್ ಕಾಯ್ಕಿಣಿ ಹಾಗೂ ನಾಗೇಂದ್ರ ಪ್ರಸಾದ್ ಗೀತೆಗಳನ್ನು ರಚಿಸುತ್ತಿದ್ದಾರೆ.
ರಾಮು ನೃತ್ಯ ನಿರ್ದೇಶನ ಮಾಡಿದರೆ, ಸೂರ್ಯ ಪ್ರಕಾಶ್ ಸಾಹಸವಿದೆ. “ಪುನಾರಾರಂಭ’ ಚಿತ್ರದಲ್ಲಿ ಶೋಭರಾಜ್, ಶಂಕರ್ ಅಶ್ವಥ್, ಗಣೇಶ್ರಾವ್, ರಿಚರ್ಡ್ ಲೂಯಿಸ್, ಲಯೇಂದ್ರ, ವೈಷ್ಣವಿ, ಶ್ವೇತಾಗೌಡ, ಪ್ರೀತು ಪೂಜಾ, ಸುರೇಖಾ, ಮಾಸ್ಟರ್ ಸಂಜಿತ್, ಮಾಸ್ಟರ್ ಕಶ್ಯಪ್ ನಂಜಪ್ಪ, ಗುರುರಾಜ್, ರಾಜೀವ್ ಇತರರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ