ಚೆಕ್ ಬೌನ್ಸ್:ನಿರ್ಮಾಪಕನ ವಿರುದ್ಧ ಯೋಗ್ರಾಜ್ ಭಟ್ ದೂರು
Team Udayavani, Nov 22, 2017, 12:17 PM IST
ಬೆಂಗಳೂರು: ಚೆಕ್ ಬೌನ್ಸ್ ಆದ ಕಾರಣ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಖ್ಯಾತ ನಿರ್ದೇಶಕ ಯೋಗ್ರಾಜ್ ಭಟ್ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ.
ದನಕಾಯೋನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕನಕಪುರ ಶ್ರೀನಿವಾಸ್ ನೀಡಿದ 26 ಲಕ್ಷ ರೂಪಾಯಿ ಚೆಕ್ ಬೌನ್ಸ್ ಆದ ಕಾರಣ ದೂರು ಸಲ್ಲಿಸಿದ್ದಾರೆಎಂದು ತಿಳಿದು ಬಂದಿದೆ.
ದುನಿಯಾ ವಿಜಯ್, ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ದನ ಕಾಯೋನು ಚಿತ್ರಕ್ಕೆ ಯೋಗ್ರಾಜ್ ಭಟ್ ನಿರ್ದೇಶನ ಮಾಡಿದ್ದರು.