ರಂಗಿನ ನಗರ ಈಗ ಫುಲ್ ಡಲ್
Team Udayavani, Apr 22, 2020, 10:24 AM IST
ಗಾಂಧಿನಗರ ಅಂದರೆ, ಅದೊಂದು ಸಂಭ್ರಮ. ಮನರಂಜನೆಯ ತಾಣ ಎಂದೇ ಗುರುತಿಸಿಕೊಂಡಿದೆ. ಸದಾ ಜನಜಂಗುಳಿಯಿಂದಲೇ ಗಿಜಿಗಿಡುತ್ತಿದ್ದ ಗಾಂಧಿನಗರ ಈಗ ಅಕ್ಷರಶಃ ಶಾಂತವಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಕೋವಿಡ್ 19 ಎಂಬ ಹೆಮ್ಮಾರಿ.
ಹೌದು, ಗಾಂಧಿನಗರದಲ್ಲಿ ಎಲ್ಲಾ ಬಗೆಯ ಜನರು ಇದ್ದಾರೆ. ಎಲ್ಲಾ ವರ್ಗದವರೂ ಅಡ್ಡಾಡುತ್ತಾರೆ. ಹೆಚ್ಚಾಗಿ ಗಾಂಧಿನಗರ ಗುರುತಿಸಿಕೊಂಡಿರೋದೇ ಸಿನಿಮಾ ಚಟುವಟಿಕೆಗಳಿಂದ. ಕನ್ನಡ ಚಿತ್ರರಂಗದ ಹೃದಯ ಎಂದೇ ಕರೆಯಲ್ಪಡುವ ಈ ಗಾಂಧಿನಗರದಲ್ಲೀಗ ನೀರವ ಮೌನ. ನಿಜ ಹೇಳಬೇಕೆಂದರೆ, ಇಲ್ಲಿ ಸದಾ ಒಂದಿಲ್ಲೊಂದು ಚಿತ್ರರಂಗದ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಸಿನಿಮಾದ ವ್ಯಾಪಾರ ವಹಿವಾಟು ಬಹುತೇಕ ಗಾಂಧಿನಗರದಲ್ಲೇ ಇದೆ. ದಿನಕ್ಕೆ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದ್ದ ಗಾಂಧಿನಗರದಲ್ಲಿ ಈಗಂತೂ ಒಂದು ರುಪಾಯಿಯ ಮಾತೂ ಇಲ್ಲ. ಇಲ್ಲಿ ಚಿತ್ರಮಂದಿರಗಳಿಗಿಂತಲೂ ಹೆಚ್ಚು ವಿತರಕರ ಕಚೇರಿಗಳು, ನಿರ್ಮಾಪಕರ ಕಚೇರಿಗಳು, ಪ್ರದರ್ಶಕರ ಕಚೇರಿಗಳು, ಪೋಸ್ಟರ್ ಹಂಚುವವರ ಸಂಘದ ಕಚೇರಿಗಳೇ ಹೆಚ್ಚು. ಇವುಗಳೊಂದಿಗೆ ಸಿನಿಮಾ ಪೋಸ್ಟರ್ ವಿನ್ಯಾಸಗೊಳಿಸುವ,ಜಾಹಿರಾತು ವಿನ್ಯಾಸ ಮಾಡುವ ತಂತ್ರಜ್ಞರ ಕಚೇರಿಗಳೂ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಇವೆ. ಸದಾ ಸಿನಿಮಾ ಮಂದಿಯಿಂದ ತುಂಬಿ ತುಳುಕುತ್ತಿದ್ದ ಈ ಕಚೇರಿಗಳೀಗ ಬೀಗ ಹಾಕಿವೆ. ಇನ್ನು, ಶುಕ್ರವಾರ ಬಂತೆಂದರೆ, ಸಿನಿಪ್ರೇಮಿಗಳ ಮೊಗದಲ್ಲಿ ಮಂದಹಾಸ. ಕಾರಣ, ಅಂದು ಹೊಸ ಸಿನಿಮಾಗಳ ಬಿಡುಗಡೆ. ಹಾಗಾಗಿ ಅದೊಂದು ಹಬ್ಬದ ವಾತಾವರಣವೇ ತುಂಬಿರುತ್ತಿತ್ತು. ದೊಡ್ಡ ದೊಡ್ಡ ಹಾರಗಳು, ಬಿಡಿ ಹೂಗಳ ಹಾರಾಟವೇ ಕಾಣಸಿಗುತ್ತಿತ್ತು. ಹೂವಿನ ವ್ಯಾಪಾರಿಗಳಿಗಂತೂ ಶುಕ್ರವಾರ ಬೇಡಿಕೆ ಹೆಚ್ಚುತ್ತಿತ್ತು. ಅದೀಗ ಕಳೆದ ಒಂದುವರೆ ತಿಂಗಳಿನಿಂದಲೂ ಆ ಸಂಭ್ರಮವೇ ಅಲ್ಲಿಲ್ಲ.
ಇನ್ನು, ಚಿತ್ರಮಂದಿರಗಳ ಮುಂದೆ ಬ್ಲಾಕ್ ಟಿಕೆಟ್ ಮಾಡುವವರ ದಂಡೇ ಇರುತ್ತಿತ್ತು. ಬ್ಲಾಕ್ ಟಿಕೆಟ್ ಮಾರಿ ಬದುಕು ಸವೆಸುತ್ತಿದ್ದ ಅದೆಷ್ಟೋ ಮಂದಿ ಬದುಕು ಈಗ ಮೂರಾಬಟ್ಟೆಯಾಗಿದೆ. ಚಿತ್ರಮಂದಿರಗಳ ಗೇಟ್ ಮುಂದೆ ಅಲೆದಾಡುತ್ತಿರುವ ಹೂವು ಮಾರುವವರು, ಬ್ಲಾಕ್ಟಿಕೆಟ್ ಮಾರುವವರು, ತಮಟೆ ಹಿಡಿದು ಬಾರಿಸುವವವರು ಸೇರಿದಂತೆ ಇತರೆ ವಿಭಾಗದ ಹಲವರು, ಯಾವಾಗ ಕೋವಿಡ್ 19 ಕಾಟ ತಪ್ಪುತ್ತೋ, ನಾವು ಯಾವಾಗ ಪುನಃ ಸಿನಿಮಾ ಕಟೌಟ್ಗೆ ಹಾರ ಮಾಡಿಕೊಡುತ್ತೇವೋ, ಪಟಾಕಿ ಸಿಡಿಸಿ ಡ್ಯಾನ್ಸ್ ಮಾಡಿ ಹಣ ಪಡೆಯುತ್ತೇವೋ, ತಮಟೆ ಹಿಡಿದು ಬಾರಿಸಿ ಕೂಲಿ ಪಡೆಯುತ್ತೇವೋ ಎಂಬ ಗೊಂದಲದಲ್ಲೇ ಇದ್ದಾರೆ. ಬಹುತೇಕ ಸಣ್ಣಪುಟ್ಟ ಅಂಗಡಿ ಮುಗ್ಗಟ್ಟು ಮಾಲೀಕರು ಕೂಡ ಈ ಸಿನಿಮಾ ನಂಬಿಯೇ ಬದುಕು ಕಟ್ಟಿಕೊಂಡಿದ್ದವರೂ ಇದ್ದಾರೆ. ಗೂಡಂಗಡಿಗಳಲ್ಲಿ ಸಿನಿಮಾ ನೋಡಲು ಬರುವ ಬಹುತೇಕರು ಚಹಾ, ಸಿಗರೇಟ್ ಇತ್ಯಾದಿ ಖರೀದಿಸುವ ಮೂಲಕ ಅವರ ಮೊಗದಲ್ಲು ಮಂದಹಾಸ ಮೂಡಿಸುತ್ತಿದ್ದರು. ಆದರೆ, ಈ ಕೋವಿಡ್ 19 ಆವರಿಸಿ ಎಲ್ಲರ ಬದುಕನ್ನೇ ಕತ್ತಲು ಮಾಡಿಬಿಟ್ಟಿದೆ.
ಸದಾ ಜನಜಂಗುಳಿ ನಡುವೆ ಸದ್ದು-ಗದ್ದಲದಿಂದ ತುಂಬಿಕೊಂಡಿರುತ್ತಿದ್ದ ಗಾಂಧಿನಗರ ಈಗ ಶಾಂತವಾಗಿದೆ. ಮೊದಲ ಸ್ವರೂಪ ಪಡೆಯೋಕೆ ಇನ್ನೆಷ್ಟು ದಿನ ಕಾಯಬೇಕೋ? ಎಂಬ ಪ್ರಶ್ನೆಯಲ್ಲೇ ಸಿನಿಮಾ ಮಂದಿ ದಿನದೂಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ