ಬೇತಾಳ ಎಂಬ ಕಾಮಿಡಿ ದೆವ್ವ!
Team Udayavani, Nov 28, 2017, 11:07 AM IST
ಕನ್ನಡದಲ್ಲಿ ಹಾರರ್ ಚಿತ್ರಗಳಿಗೇನೂ ಬರವಿಲ್ಲ. ಅದರಲ್ಲೂ ನಗಿಸೋ ದೆವ್ವ, ಹೆದರಿಸೋ ದೆವ್ವಗಳ ಕುರಿತಾದ ಸಿನಿಮಾಗಳದ್ದೇ ಕಾರುಬಾರು. ಅವುಗಳ ಸಾಲಿಗೆ ಈಗ “ಬೇತಾಳ’ ಹೊಸ ಸೇರ್ಪಡೆ. ಶಿವಕುಮಾರ್ ನಿರ್ಮಾಣದ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಶ್ರೀಧರ್, ಸ್ಮೈಲ್ಶಿವು ಹಾಗು ಸೋಮಗೌಡ ಅಭಿನಯದ ಮೊದಲ ದೃಶ್ಯ ಚಿತ್ರೀಕರಿಸಿಕೊಳ್ಳಲಾಯಿತು.
ಕಥೆ, ಚಿತ್ರಕಥೆ ಬರೆದು ಜಗನ್ನಾಥ್ ಕಸ್ತೂರು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮಡಿಕೇರಿ ಹಾಗೂ ಬಿಜಾಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಹೊಸ ಮನೆಗೆ ಬಾಡಿಗೆಗೆ ಬಂದ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ಗೆ ಅಲ್ಲಿನ ದೆವ್ವವೊಂದು ಯಾವರೀತಿ ಕಾಟ ಕೊಡುತ್ತದೆ, ಕೊನೆಗೆ ಆತ ಹೇಗೆ ಹೊರಗೆ ಬರುತ್ತಾನೆ ಎಂಬುದು “ಬೇತಾಳ’ದ ಕಥೆ.
ಶ್ಯಾಮ್ ಸಿಂಧನೂರು ಕ್ಯಾಮೆರಾ ಹಿಡಿದರೆ, ರಾಜ್ಕಿಶೋರ್ ಸಂಗೀತವಿದೆ. ಕಿಟ್ಟಿ ಮತ್ತು ಕಪಿಲ್ ನೃತ್ಯ ನಿರ್ದೇಶನವಿದೆ. ಅಶೋಕ್ ಸಂಕಲನ ಮಾಡಿದರೆ, ನಿರ್ಮಾಣದಲ್ಲಿ ಉಪೇಂದ್ರ ಗೌಡ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಸೋನುಗೌಡ, ಉಪೇಂದ್ರ, ಬ್ಯಾಂಕ್ ಜನಾರ್ಧನ್, ಮೋಹನ್ ಜುನೇಜ, ರಾಣಿ, ಕಿಲ್ಲರ್ ವೆಂಕಟೇಶ್, ಉಮೇಶ್, ಅನುಮಪ, ಸ್ಮಿತಾ, ಕಾಜಲ್, ಹರ್ಷಿತ, ಸಂತೋಷ್, ಅರ್ಜುನ್, ಹರೀಶ್ ಇತರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ