ಕ್ರೇಜಿ ಸೆಂಟಿಮೆಂಟ್‌

ಮಗಳಿಗಾಗಿ ಭಾವುಕ ಹಾಡು ರಚಿಸಿದ ರವಿಚಂದ್ರನ್‌

Team Udayavani, Apr 16, 2019, 3:00 AM IST

Ravichandran

ಸಂಬಂಧಗಳೇ ಹಾಗೆ. ತುಂಬಾನೇ ಕಾಡುತ್ತವೆ. ತುಂಬಾ ವರ್ಷಗಳಿಂದ ಹತ್ತಿರವಿದ್ದವರು ದೂರ ಹೋಗುತ್ತಾರೆಂದರೆ ಮನಸ್ಸು ಭಾರವಾಗುತ್ತದೆ, ಸಣ್ಣದೊಂದು ಚಡಪಡಿಕೆ ಶುರುವಾಗುತ್ತದೆ. ಅದರಲ್ಲೂ ತಂದೆ-ಮಗಳ ಸಂಬಂಧದಲ್ಲಿ ಈ ತರಹದ ಭಾರ ಹೃದಯ, ಚಡಪಡಿಕೆ ಸ್ವಲ್ಪ ಹೆಚ್ಚೇ. ಮಗಳಿಗೆ ತನ್ನ ತಂದೆಯೇ ಹೀರೋ.

ತಂದೆಯೂ ಅಷ್ಟೇ, ಯಾರಿಗೆ ಹೆದರದಿದ್ದರೂ, ಯಾರ ಮಾತಿಗೆ ತಲೆಬಾಗದಿದ್ದರೂ ತನ್ನ ಮಗಳ ಮಾತಿಗೆ ಹೆದರುತ್ತಾನೆ, ತಲೆಬಾಗುತ್ತಾನೆ. ಇಂತಹ ಮಗಳನ್ನು ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸುವ ಸಮಯ ಬಂದಾಗ ಪ್ರತಿಯೊಬ್ಬ ತಂದೆಯ ಗಂಟಲು ಬಿಗಿಯಾಗುತ್ತದೆ, ತನ್ನ ಮಗಳು ಇನ್ನು ದಿನಾ ನನ್ನ ಕಣ್ಣ ಮುಂದೆ ಇರೋದಿಲ್ಲವಲ್ಲಾ ಎಂಬ ಭಾವನೆ ಕಾಡುತ್ತದೆ.

ಈಗ ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡಾ ಅಂತಹ ಒಂದು ಭಾವನೆಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಅವರ ಮಗಳ ಮದುವೆ. ರವಿಚಂದ್ರನ್‌ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿದೆ. ಮುಂದಿನ ತಿಂಗಳ ಕೊನೆಯ ವಾರದಲ್ಲಿ ಮದುವೆ. ಮದುವೆಯಾಗಿ ಗಂಡನ ಮನೆ ಸೇರಲಿರುವ ಮಗಳನ್ನು ರವಿಚಂದ್ರನ್‌ ತುಂಬಾನೇ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ.

ಮಗಳ ಬಗೆಗಿನ ಪ್ರೀತಿ, ಆಕೆಯನ್ನು ಮಿಸ್‌ ಮಾಡಿಕೊಳ್ಳುತ್ತಿರುವ ರೀತಿಯನ್ನು ರವಿಚಂದ್ರನ್‌ ಹಾಡೊಂದರ ಮೂಲಕ ಕಟ್ಟಿಕೊಟ್ಟಿದ್ದಾರೆ. ತಾವೇ ಸಾಹಿತ್ಯ ಬರೆದು, ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ತನ್ನ ಮಗಳ ಬಗೆಗಿನ ಪ್ರೀತಿ, ಕಾಳಜಿಯನ್ನು ರವಿಚಂದ್ರನ್‌ ವ್ಯಕ್ತಪಡಿಸಿದ್ದಾರೆ.

“ಮಗುವಂತೆ ನೀನು… ಬೆಳೆದ ಮೇಲೆ ಮಗುವಾದೆ ನಾನು …’ ಸೇರಿದಂತೆ ಹಲವು ಭಾವನಾತ್ಮಕ ಸಾಲುಗಳೊಂದಿಗೆ ಈ ಹಾಡನ್ನು ಕಟ್ಟಿಕೊಟ್ಟಿದ್ದಾರೆ ರವಿಚಂದ್ರನ್‌. ತಾನು ಮಗಳನ್ನು ತುಂಬಾನೇ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳುವ ರವಿಚಂದ್ರನ್‌, “ನಾನು ಬೆಳಿಗ್ಗೆ ಎದ್ದ ಕೂಡಲೇ “ಅಂಜು’ ಎಂದು ಕೂಗುತ್ತೇನೆ.

ಆಕೆ ಆ ಕಡೆಯಿಂದ “ಹಾಂ ಡ್ಯಾಡಿ’ ಎನ್ನುತ್ತಾಳೆ. ಅಲ್ಲಿಗೆ ಮನಸ್ಸಿಗೆ ಸಮಾಧಾನ. ನಾನು ನನ್ನ ಜೀವನದಲ್ಲಿ ಹೆದರಿರೋದು ಅಂದರೆ ಅದು ನನ್ನ ತಂದೆಗೆ ಬಿಟ್ಟರೆ ನನ್ನ ಮಗಳಿಗೆ’ ಎನ್ನುವ ರವಿಚಂದ್ರನ್‌, “ಸುಮಾರು 15 ದಿನಗಳಿಂದ ನಾನು ಮನೆಬಿಟ್ಟು ಎಲ್ಲೂ ಹೋಗಿಲ್ಲ.

ಮನೆಯಲ್ಲೇ ಕೂತು, ನನ್ನ ಮಗಳ ಆಚೀಚೆ ಓಡಾಡುವುದನ್ನು, ಆಕೆಯ ಚಟುವಟಿಕೆಯನ್ನೇ ಗಮನಿಸುತ್ತಿದ್ದೇನೆ. ಇನ್ನೇನು ಮುಂದಿನ ತಿಂಗಳು ಮದುವೆ. ಆ ನಂತರ ಆಕೆ ಮತ್ತೂಂದು ಮನೆಗೆ ಹೋಗುತ್ತಾಳೆ’ ಎಂದು ಮಗಳ ಬಗ್ಗೆ ಹೇಳುತ್ತಾರೆ ರವಿಚಂದ್ರನ್‌. ಅಂದಹಾಗೆ, ರವಿಚಂದ್ರನ್‌ ತಮ್ಮ ಮಗಳ ಬಗೆಗಿನ ಮಾತುಗಳನ್ನು ಆಡಿದ್ದು, ಕಲರ್ ವಾಹಿನಿಯ ರಿಯಾಲಿಟಿ ಶೋನಲ್ಲಿ.

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.