ಯೋಧನಾದ ಕ್ರೇಜಿ ಸ್ಟಾರ್
Team Udayavani, Nov 30, 2020, 12:39 PM IST
ಕ್ರೇಜಿಸ್ಟಾರ್ ರವಿಚಂದ್ರನ್ ಯೋಧನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು “ಕನ್ನಡಿಗ’ ಚಿತ್ರಕ್ಕಾಗಿ. ಗಿರಿರಾಜ್ ನಿರ್ಮಾಣದ “ಕನ್ನಡಿಗ’ ಚಿತ್ರದಲ್ಲಿಕನ್ನಡ ಲಿಪಿಕಾರ ಗುಣಭದ್ರ ಪಾತ್ರದಲ್ಲಿಕಾಣಿಸಿಕೊಳ್ಳುವ ಜೊತೆಗೆ ರಾಣಿ ಚೆನ್ನಭೈರಾದೇವಿ ಸೇನೆಯ ಯೋಧನಾಗಿಯೂ ರವಿಚಂದ್ರನ್ಕಾಣಿಸಿಕೊಂಡಿದ್ದಾರಂತೆ. ಸದ್ಯ ಅವರ ಗೆಟಪ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪನ್ನಗ ಪುತ್ರನ ವಿಡಿಯೋ :ನಿರ್ದೇಶಕ ಪನ್ನಗಾಭರಣ ಪುತ್ರ ವೇದ್, ಮೇಘನಾ ರಾಜ್ ಅವರಲ್ಲಿ “ಮನೆಗೆ ಬರೋದಾ’ ಎಂದುಕೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತುಂಬಾ ಕ್ಯೂಟ್ ಆಗಿರುವ ಈ ವಿಡಿಯೋ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ನನಗೆ ಬಾಕ್ಸ್ ನ ನೋಡಬೇಕು, ಮನೆಗೆ ಬರೋದಾ? ಚಿರು ಬೇಬಿನೂ ನೋಡಬೇಕು’ ಎಂದು ಮೇಘನಾ ಅವರನ್ನುಕೇಳಿದ್ದಾರೆ. ಈ ವಿಡಿಯೋವನ್ನು ಮೇಘನಾ ರಾಜ್ ತಮ್ಮ ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು, ಮೇಘನಾ ರಾಜ್ ಅವರ ಪತಿ ದಿ.ಚಿರಂಜೀವಿ ಸರ್ಜಾ ಅವರ ಸಮಾಧಿ ನಿರ್ಮಾಣಕ್ಕೆ ಇತ್ತೀಚೆಗೆ ಪೂಜೆ ನಡೆದಿದೆ.
ಇದನ್ನೂ ಓದಿ : ಐತಿಹಾಸಿಕ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ
ಥಿಯೇಟರ್ನಲ್ಲಿ ಆಶಿಕಾ : ಲಾಕ್ಡೌನ್ ಸಡಿಲವಾಗಿ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ, ಮೊದಲ ಬಾರಿಗೆ ನಟಿ ಆಶಿಕಾ ರಂಗನಾಥ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಕಳೆದ ವಾರ ಬಿಡುಗಡೆಯಾದ “ಆಕ್ಟ್-1978′ ಸಿನಿಮಾ ವೀಕ್ಷಿಸಿದ ಆಶಿಕಾ ರಂಗನಾಥ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಲಾಕ್ಡೌನ್ ನಂತರ ಒಂದು ಒಳ್ಳೆಯ ಕಂಟೆಂಟ್ ಇರುವ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿಖುಷಿಯಾಯ್ತು. ದಯವಿಟ್ಟು ಥಿಯೇಟರ್ಗಳಲ್ಲಿ ಸಿನಿಮಾ ನೋಡುವುದನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ. ಇಂಥದ್ದೇ ಸುಂದರವಾದ ಸಿನಿಮಾಗಳ ಮೂಲಕ ಮತ್ತೆ ಥಿಯೇಟರ್ಗಳಿಗೆ ಬರುತ್ತಿರೋಣ’ ಎಂದಿದ್ದಾರೆ.
ಪವರ್ ಪ್ರೋಮೋ ವೈರಲ್ : ನೀತ್ ರಾಜ್ಕುಮಾರ್ ಅಭಿನಯದ “ಯುವರತ್ನ’ ಸಿನಿಮಾದ “ಪವರ್ ಆಫ್ ಯೂತ್’ ಹಾಡು ಡಿಸೆಂಬರ್ ಎರಡರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಮೊದಲಹಂತವಾಗಿ ಈ ಹಾಡಿನ ಪ್ರೋಮೋವನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಿದ್ದು, ಇದು ವೈರಲ್ ಆಗಿದೆ. ಪುನೀತ್ ರಾಜ್ಕುಮಾರ್ ಈ ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿನಮತ್ತೂಂದು ವಿಶೇಷವೆಂದರೆ ನಿರ್ದೇಶಕ ಸಂತೋಷ್ ಆನಂದರಾಮ್ಕೂಡಾ ಹಾಡಿನಲ್ಲಿ ಸ್ಟೆಪ್ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ