ಕೀರ್ತನೆ ಟ್ರೇಲರ್ಗೆ ಜೈ ಎಂದ ಸಿನಿಮಂದಿ
Team Udayavani, May 9, 2022, 1:56 PM IST
“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದ ಸಕ್ಸಸ್ ಬಳಿಕ ನಿರ್ದೇಶಕ ಕುಮಾರ್ ಎಲ್, ಈ ಬಾರಿ “ಕ್ರಿಟಿಕಲ್ ಕೀರ್ತನೆಗಳು’ ಎಂಬ ಅಂಥದ್ದೇ ಮತ್ತೂಂದು ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.
ಇದೇ ಮೇ. 13ರಂದು “ಕ್ರಿಟಿಕಲ್ ಕೀರ್ತನೆಗಳು’ ಬಿಡುಗಡೆಯಾಗುತ್ತಿದ್ದು, ಸದ್ಯ ನಿರ್ದೇಶಕ ಕುಮಾರ್ ಮತ್ತು ಚಿತ್ರತಂಡ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ “ಕ್ರಿಟಿಕಲ್ ಕೀರ್ತನೆಗಳು’ ಟೀಸರ್, ಸಾಂಗ್ಸ್ ಮತ್ತು ಟ್ರೇಲರ್ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸ್ಯಾಂಡಲ್ವುಡ್ನ ಅನೇಕ ತಾರೆಯರು, ನಿರ್ಮಾಪಕರು, ನಿರ್ದೇಶಕರು ಕೂಡ “ಕ್ರಿಟಿಕಲ್ ಕೀರ್ತನೆಗಳು’ ಟ್ರೇಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇನ್ನು “ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾದ ಬಿಡುಗಡೆಗೂ ಮೊದಲೇ ಪ್ರೇಕ್ಷಕರು ಮತ್ತು ಸಿನಿಮಾ ಮಂದಿಯಿಂದ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ನಿರ್ದೇಶಕ ಕುಮಾರ್, “ಈಗಾಗಲೇ ಸಿನಿಮಾದ ಟ್ರೇಲರ್ ಮಿಲಿಯನ್ಗೂ ಹೆಚ್ಚು ವೀವ್ಸ್ ಆಗಿದೆ. ಚಿತ್ರರಂಗದಲ್ಲೂ ಅನೇಕ ಸ್ಟಾರ್ ಟ್ರೇಲರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಥ್ರಿಲ್ ನೀಡೋ ಮಹಲ್! : ಈ ವಾರ ಕಸ್ತೂರಿ ಮಹಲ್ ತೆರೆಗೆ
ನಟರಾದ ಶರಣ್, ಪ್ರಜ್ವಲ್ ದೇವರಾಜ್, ಸತೀಶ್ ನೀನಾಸಂ, ಶ್ರೀನಗರ ಕಿಟ್ಟಿ, ವಸಿಷ್ಠ ಸಿಂಹ, ರಿಷಿ, ಅಜೇಯ್ ರಾವ್, ರ್ಯಾಪರ್ ಚಂದನ್ ಶೆಟ್ಟಿ, ನಾಯಕಿಯರಾದ ಆಶಿಕಾ ರಂಗನಾಥ್, ಸಂಜನಾ ಆನಂದ್, ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಎಸ್. ನಾರಾಯಣ್, ಜೋಗಿ ಪ್ರೇಮ್, ನಿರ್ದೇಶಕರಾದ ಆರ್. ಚಂದ್ರು, ಸಿಂಪಲ್ ಸುನಿ, ತರುಣ್ ಸುಧೀರ್, ಶಶಾಂಕ್, ಎ.ಪಿ ಅರ್ಜುನ್, ಬಹದ್ಧೂರ್ ಚೇತನ್, ಮಹೇಶ್ ಕುಮಾರ್, ನಿರ್ಮಾಪಕರಾದ ಕೆ. ಮಂಜು, ಉದಯ್ ಮೆಹ್ತಾ ಹೀಗೆ ಚಿತ್ರರಂಗದ ಅನೇಕರು ಟ್ರೇಲರ್ ಮೆಚ್ಚಿ, ಮುಕ್ತಕಂಠದಿಂದ ಹೊಗಳಿದ್ದಾರೆ’ ಎನ್ನುತ್ತಾರೆ.
“ಕ್ರಿಟಿಕಲ್ ಕೀರ್ತನೆಗಳು’ ಚಿತ್ರದಲ್ಲಿ ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್, ಧರ್ಮ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ