ದಂಡುಪಾಳ್ಯ ಶ್ರೀನಿವಾಸ್ರಾಜ್ ಮತ್ತೆ ಬಂದ್ರು!
ಮೂರು ಸಿನ್ಮಾ, ಒಂದು ವೆಬ್ಸೀರಿಸ್ಗೆ ತಯಾರಿ
Team Udayavani, Feb 19, 2020, 7:02 AM IST
ಕನ್ನಡದಲ್ಲಿ “ದಂಡುಪಾಳ್ಯ’ ಸಿನಿಮಾ ಮೂಲಕ ಹೊಸದೊಂದು ಕ್ರೈಮ್ ಕಥೆಯನ್ನು ಕಟ್ಟಿಕೊಟ್ಟಿದ್ದ ನಿರ್ದೇಶಕ ಶ್ರೀನಿವಾಸ್ ರಾಜು “ದಂಡುಪಾಳ್ಯ 3′ ಸಿನಿಮಾ ಬಳಿಕ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ. ಯಾವ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇರಲಿಲ್ಲ. ಈಗ ಶ್ರೀನಿವಾಸ್ ರಾಜು ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಈ ಬಾರಿ ಶ್ರೀನಿವಾಸ್ ರಾಜ್ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳಿಗೆ ಕೈ ಹಾಕಿದ್ದಾರೆ. ಮೂರು ಸಿನಿಮಾಗಳ ನಿರ್ದೇಶನದ ಜೊತೆಯಲ್ಲಿ ಅವರು ವೆಬ್ಸೀರಿಸ್ವೊಂದಕ್ಕೂ ಚಾಲನೆ ಕೊಡುವ ಯೋಚನೆಯಲ್ಲಿದ್ದಾರೆ. ಹೌದು, ಶ್ರೀನಿವಾಸ್ರಾಜ್, “ದಂಡುಪಾಳ್ಯ 3′ ಸಿನಿಮಾ ಬಳಿಕ ಎಲ್ಲೂ ಸುದ್ದಿಯಾಗಿರಲಿಲ್ಲ.
ಸದ್ದಿಲ್ಲದೆಯೇ ಅವರು ಒಂದಷ್ಟು ಚಿತ್ರಗಳ ಕಥೆಗೆ ಸಮಯ ಮೀಸಲಿಟ್ಟಿದ್ದರು. ಈಗ ಮೂರು ಸಿನಿಮಾಗಳನ್ನು ಈ ವರ್ಷ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಅಂಡರ್ವರ್ಲ್ಡ್ ಬ್ಯಾಕ್ ಡ್ರಾಪ್ ಕಥೆಯ ಸಿನಿಮಾ ಒಂದಾದರೆ, ಇನ್ನೊಂದು ಹಾರರ್ ಜಾನರ್ ಸಿನಿಮಾ.
ಮತ್ತೊಂದು ಲವ್ ಕಮ್ ಥ್ರಿಲ್ಲರ್ ಜಾನರ್ ಕಥೆ ಹೊಂದಿರುವ ಸಿನಿಮಾ ಮಾಡಲು ಉತ್ಸಾಹದಲ್ಲಿದ್ದಾರೆ. ಇವುಗಳ ಜೊತೆಯಲ್ಲಿ ವೆಬ್ಸೀರಿಸ್ಗೂ ಕೈ ಹಾಕಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಈ ವರ್ಷ ಮೂರು ಸಿನಿಮಾಗಳನ್ನು ಕನ್ನಡಿಗರ ಮುಂದಿಡಲು ತಯಾರಾಗುತ್ತಿದ್ದಾರೆ. ವಿಶೇಷವೆಂದರೆ, ಆ ಮೂರು ಸಿನಿಮಾಗಳು ಹಾಗು ವೆಬ್ಸೀರಿಸ್ ಈ ವರ್ಷವೇ ಬಿಡುಗಡೆಯಾಗಲಿವೆ.
ಅಂದಹಾಗೆ, ಚಿತ್ರಕ್ಕೆ ಯಾರು ನಿರ್ಮಾಪಕರು. ಯಾವ ಚಿತ್ರಗಳಿಗೆ ಯಾರು ಹೀರೋ, ಅವರಿಗೆ ನಾಯಕಿ ಯಾರು, ಯಾರೆಲ್ಲಾ ಕಲಾವಿದರು ಇರುತ್ತಾರೆ. ತಂತ್ರಜ್ಞರು ಯಾರ್ಯಾರು ಎಂಬಿತ್ಯಾದಿ ವಿಷಯಗಳಿಗೆ ಇಷ್ಟರಲ್ಲೇ ಉತ್ತರ ಕೊಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್