“ಲವ್ ಮಿ ಆರ್ ಹೇಟ್ ಮಿ” ಗೆ ಟೈಟಲ್ ಪ್ರಾಬ್ಲಂ: ಒಂದೇ ಶೀರ್ಷಿಕೆ ಎರಡು ಕಡೆ
Team Udayavani, May 31, 2021, 10:14 AM IST
ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ಅಭಿನಯದ ಹೊಸಚಿತ್ರಕ್ಕೆ “ಲವ್ ಮಿ… ಆರ್ ಹೇಟ್ ಮಿ…’ ಎಂದು ಹೆಸರಿಟ್ಟಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ಟೈಟಲ್ ಸಮಸ್ಯೆ ಎದುರಾಗಿದೆ. ಮತ್ತೂಬ್ಬ ನಿರ್ದೇಶಕ ಕೂಡಾ “ಲವ್ ಮಿ… ಆರ್ ಹೇಟ್ ಮಿ’ ಎಂಬ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಒಂದೇ ಟೈಟಲ್ ಅನ್ನು ಇಬ್ಬರಿಗೆ ಕೊಡಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಒಂದು ಟೈಟಲ್, ಎರಡು ಫಿಲಂ ಚೇಂಬರ್.
ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ಅಭಿನಯದ “ಲವ್ ಮೀ ಆರ್ ಹೇಟ್ ಮೀ’ ಚಿತ್ರವನ್ನು ನಿರ್ದೇಶಿಸುತ್ತಿರುವ ದೀಪಕ್ ಗಂಗಾಧರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾವಣಿ ಮಾಡಿದ್ದಾರೆ. ಅದೇ ಟೈಟಲ್ ಅನ್ನು ಮತ್ತೂಬ್ಬ ನಿರ್ದೇಶಕ ವಿ.ದೇವದತ್ತ ಹಾಗೂ ನಿರ್ಮಾಪಕ ರವಿಕಿರಣ್ ಬಿ.ಕೆ. ಇತ್ತೀಚಿನ ವರ್ಷದಲ್ಲಿ ಹುಟ್ಟಿಕೊಂಡಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.
ಹಾಗಾಗಿ, ಎರಡು ಫಿಲಂ ಚೇಂಬರ್ಗಳಲ್ಲಿ ಒಂದೇ ಟೈಟಲ್ ಇಬ್ಬರ ಹೆಸರಿಗೆ ನೋಂದಾವಣಿಯಾಗಿದೆ. ಇತ್ತೀಚೆಗೆ ದೀಪಕ್ ಗಂಗಾಧರ್ ಅವರು ತಮ್ಮ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ ಬೆನ್ನಲ್ಲೇ ನಿರ್ದೇಶಕ ದೇವದತ್ತ, ತಾನೂ ಅದೇ ಟೈಟಲ್ ನಲ್ಲಿ ಸಿನಿಮಾ ಮಾಡಲು ಮುಂದಾಗಿರುವುದಾಗಿ ಹೇಳಿದ್ದಾರೆ.
ಹಾಗಾಗಿ, ಈಗ ಟೈಟಲ್ ಯಾರ ಪಾಲಾಗಲಿದೆ ಎಂಬ ಕುತೂಹಲ ಎದ್ದಿದೆ. ಈ ಬಗ್ಗೆ ಮಾತನಾಡುವ ದೀಪಕ್, “ನಮಗೂ “ಲವ್ ಮಿ… ಆರ್ ಹೇಟ್ ಮಿ’ ಟೈಟಲ್ ಮತ್ತೂಂದು ಫಿಲಂ ಚೇಂಬರ್ ನಲ್ಲಿ ನೋಂದಣಿಯಾಗಿರೋದು ನಾವು ಟೈಟಲ್ ಅನೌನ್ಸ್ ಮಾಡಿದ ಮೇಲಷ್ಟೇ ಗೊತ್ತಾಯಿತು. ಮುಂದೆ ಏನು ಮಾಡೋದೆಂದು ನಮ್ಮ ತಂಡದಲ್ಲಿ ಚರ್ಚಿಸಿ ನಿರ್ಧರಿಸುತ್ತೇನೆ’ ಎನ್ನುತ್ತಾರೆ.
ದೀಪಕ್ ಅವರ “ಲವ್ ಮಿ… ಆರ್ ಹೇಟ್ ಮಿ…’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಕೋವಿಡ್ ಲಾಕ್ಡೌನ್ ಮುಗಿದು ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ, ಶೂಟಿಂಗ್ಗೆ ಹೊರಡುವ ಯೋಚನೆಯಲ್ಲಿದೆ. ಬೆಂಗಳೂರು ಮತ್ತು ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ