ದರ್ಶನ್‌ ಪ್ರಶಸ್ತಿ ಗೊಂದಲಕ್ಕೆ ತೆರೆ


Team Udayavani, Oct 31, 2017, 10:35 AM IST

darshan-award.jpg

ಇತ್ತೀಚೆಗೆ ದರ್ಶನ್‌ ಲಂಡನ್‌ಗೆ ತೆರಳಿ ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ “ಗ್ಲೋಬಲ್‌ ಇಂಟಿರ್ಗಿಟಿ’ ಪ್ರಶಸ್ತಿ ಸ್ವೀಕರಿಸಿ ಬಂದಿರೋದು ನಿಮಗೆ ಗೊತ್ತೇ ಇದೆ. ದರ್ಶನ್‌ಗೆ ಪ್ರಶಸ್ತಿ ಬಂದಿದ್ದರಿಂದ ಖುಷಿಯಾದ ಅಭಿಮಾನಿಗಳು, ಅಮಿತಾಬ್‌ ಬಚ್ಚನ್‌, ಸಲ್ಮಾನ್‌ ಖಾನ್‌ ನಂತರ ಬ್ರಿಟಿಷ್‌ ಪಾರ್ಲಿಮೆಂಟ್‌ ದರ್ಶನ್‌ಗೆ ಪ್ರಶಸ್ತಿ ಕೊಡುತ್ತಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದರು. ಇದರ ಜೊತೆಗೆ ಈ ಪ್ರಶಸ್ತಿ ಬಗ್ಗೆ ಸಾಕಷ್ಟು ಗೊಂದಲಗಳು ಕೂಡಾ ಹುಟ್ಟಿಕೊಂಡವು.

ದರ್ಶನ್‌ಗೆ ಕೊಟ್ಟಿರುವ ಪ್ರಶಸ್ತಿಗೂ ಅಮಿತಾಬ್‌, ಸಲ್ಮಾನ್‌ಗೆ ಕೊಟ್ಟಿರುವ ಪ್ರಶಸ್ತಿಗೂ ಸಂಬಂಧವಿಲ್ಲ, ಜೊತೆಗೆ ಇದು ಬ್ರಿಟಿಷ್‌ ಪಾರ್ಲಿಮೆಂಟ್‌ ಕೊಡುವ ಪ್ರಶಸ್ತಿಯೂ ಅಲ್ಲ ಎಂಬ ಮಾತುಗಳು ಜೋರಾಗಿ ಕೇಳಿಬಂದವು. ಸೋಶಿಯಲ್‌ ಮೀಡಿಯಾಗಳಲ್ಲಂತೂ ಈ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಈಗ ಅದಕ್ಕೆ ಲಂಡನ್‌ನ ಯುಕೆ ಕರ್ನಾಟಕ ಬಿಝಿನೆಸ್‌ ಚೇಂಬರ್‌ನ ಚೇರ್‌ಮ್ಯಾನ್‌ ಮಂಜುನಾಥ್‌ ವಿಶ್ವಕರ್ಮ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ದರ್ಶನ್‌ಗೆ ಕೊಟ್ಟಿರೋದು ಗ್ಲೋಬಲ್‌ ಇಂಟಿರ್ಗಿಟಿ ಪ್ರಶಸ್ತಿಯೇ ಹೊರತು ಗ್ಲೋಬಲ್‌ ಡೈವರ್ಸಿಟಿ ಪ್ರಶಸ್ತಿಯಲ್ಲ. ಜೊತೆಗೆ ಇದು ಬ್ರಿಟಿಷ್‌ ಪಾರ್ಲಿಮೆಂಟ್‌ ಕೊಡುವ ಪ್ರಶಸ್ತಿಯೂ ಅಲ್ಲ, ಬದಲಿಗೆ ಯುಕೆ ಕರ್ನಾಟಕ ಬಿಝಿನೆಸ್‌ ಚೇಂಬರ್‌ ಕೊಡುವ ಪ್ರಶಸ್ತಿ ಎಂದು ಮಂಜುನಾಥ್‌ ವಿಶ್ವಕರ್ಮ ಸ್ಪಷ್ಟಪಡಿಸಿದ್ದಾರೆ. “ದರ್ಶನ್‌ಗೆ ಕೊಟ್ಟಿರೋದು ಗ್ಲೋಬಲ್‌ ಡೈವರ್ಸಿಟಿ ಅವಾರ್ಡ್‌ ಅಲ್ಲ, ಅದು ಗ್ಲೋಬಲ್‌ ಇಂಟಿರ್ಗಿಟಿ ಪ್ರಶಸ್ತಿ.

ಜೊತೆಗೆ ನಾವು ಎಲ್ಲೂ ಇದು ಬ್ರಿಟಿಷ್‌ ಪಾರ್ಲಿಮೆಂಟ್‌ ಕೊಡುವ ಪ್ರಶಸ್ತಿ ಎಂದು ಹೇಳಿಲ್ಲ. ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ಕೊಡಲಾಗುತ್ತದೆ ಎಂದಷ್ಟೇ ಹೇಳಿದ್ದೆವು. ಗ್ಲೋಬಲ್‌ ಡೈವರ್ಸಿಟಿ ಪ್ರಶಸ್ತಿಯನ್ನು ಕೀಟ್‌ ವಾಗ್‌ ಎಂಬ ಎಂಪಿ ಕೊಡುತ್ತಾ ಬಂದಿದ್ದಾರೆ. ಅವರು ಈಗಾಗಲೇ ಆ ಪ್ರಶಸ್ತಿಯಲ್ಲಿ ಅನೇಕರನ್ನು ಸನ್ಮಾನಿಸಿದ್ದಾರೆ. ಆದರೆ, ಗ್ಲೋಬಲ್‌ ಇಂಟಿರ್ಗಿಟಿ ಪ್ರಶಸ್ತಿಯನ್ನು ವೀರೇಂದ್ರ ಶರ್ಮಾ ಎಂಬ ಮತ್ತೂಬ್ಬ ಎಂಪಿ ಕೊಡುತ್ತಿರೋದು.

ಪಾರ್ಲಿಮೆಂಟ್‌ನಲ್ಲಿ ಜಾಗ ತಗೊಂಡು ಕೊಡುತ್ತಿದ್ದಾರೆ. ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಮಂಜುನಾಥ್‌ ಹೇಳಿದರು. ಯುಕೆ ಕರ್ನಾಟಕ ಬಿಝಿನೆಸ್‌ ಚೇಂಬರ್‌ ಬಗ್ಗೆ ಮಾತನಾಡುವ ಅವರು, ಇಲ್ಲಿನ ಸಂಸ್ಕೃತಿಯನ್ನು ಅಲ್ಲಿ ಬಿಂಬಿಸುವ ಸಲುವಾಗಿ ಹಾಗೂ ಅಲ್ಲಿನ ಬಿಝಿನೆಸ್‌ ಅನ್ನು ಇಲ್ಲಿ ಪ್ರಮೋಟ್‌ ಮಾಡುವ ಸಲುವಾಗಿ ಈ ಸಂಸ್ಥೆ ಹುಟ್ಟಿಕೊಂಡಿದೆ.

ವೀರೇಂದ್ರ ಶರ್ಮಾ ಅವರು ಕೂಡಾ ಈ ಸಂಸ್ಥೆಯ ಮಾರ್ಗದರ್ಶಕರು. ಸಂಸ್ಥೆಯನ್ನು ಜನಪ್ರಿಯ ಮಾಡುವ ಜೊತೆಗೆ ಸಾಧನೆ ಮಾಡಿದ ಕನ್ನಡಿಗನಿಗೆ ಪ್ರಶಸ್ತಿ ಕೊಡುವುದನ್ನು ರೂಢಿಸುತ್ತಾ ಬಂದೆವು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರನ್ನು ಸನ್ಮಾನಿಸಲಾಗಿದೆ. ಅದರಂತೆ ದರ್ಶನ್‌ ಅವರ ಸಾಧನೆಯನ್ನು ಪರಿಗಣಿಸಿ ಈ ಬಾರಿ ಅವರನ್ನು ಸನ್ಮಾನಿಸಿದ್ದೇವೆ ಎಂದರು. 

ದರ್ಶನ್‌ ಜೊತೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಲಂಡನ್‌ಗೆ ತೆರಳಿದ್ದ ದರ್ಶನ್‌ ಆಪ್ತ ಮಲ್ಲಿಕಾರ್ಜುನ್‌ ಮಾತನಾಡಿ, ಪ್ರಶಸ್ತಿ ಸ್ವೀಕರಿಸಿ ಬರುವವರೆಗೂ ಇದನ್ನು ಸುದ್ದಿ ಮಾಡಬಾರದೆಂದ್ದೆವು. ಆದರೆ, ಆಗಲೇ ಸೋಶಿಯಲ್‌ ಮೀಡಿಯಾದಲ್ಲಿ ಹಬ್ಬಿತ್ತು. ನಾವು ಪ್ರಶಸ್ತಿ ವಿಚಾರದಲ್ಲಿ ದಾರಿ ತಪ್ಪಿಸಿಲ್ಲ, ಸುಳ್ಳು ಹೇಳಿಲ್ಲ. ಇದು ಗ್ಲೋಬಲ್‌ ಇಂಟಿರ್ಗಿಟಿ ಅವಾರ್ಡ್‌. ಪ್ರಶಸ್ತಿ ಯಾವುದೇ ಆದರೂ ಕನ್ನಡಿಗನಿಗೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು ಎಂದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.