ಅಭಿಮಾನಿಗಳಿಗಾಗಿ ಬ್ಯಾಟ್ ಹಿಡಿದ್ರು ದರ್ಶನ್
Team Udayavani, Apr 17, 2018, 11:04 AM IST
ಇತ್ತೀಚೆಗೆ ನಡೆದ ಕನ್ನಡ ಚಲನಚಿತ್ರ ಕ್ರಿಕೆಟ್ (ಕೆಸಿಸಿ) ಕಪ್ನಲ್ಲಿ ದರ್ಶನ್ ಆಡಲಿಲ್ಲ ಎಂಬ ಅವರ ಅಭಿಮಾನಿಗಳ ಕೊರಗನ್ನು ದರ್ಶನ್ ಕೊನೆಗೂ ತಣಿಸಿದ್ದಾರೆ. ಇತ್ತೀಚೆಗೆ ನಡೆದ ಡಿಪಿಎಲ್ನಲ್ಲಿ ದರ್ಶನ್ ಅವರು ಬ್ಯಾಟ್ ಹಿಡಿದು, ಕ್ರಿಕೆಟ್ ಆಡಿ ಅವರ ಅಭಿಮಾನಿಗಳ ಮನರಂಜಿಸಿದ್ದಾರೆ.
ದರ್ಶನ್ ಅವರ ಅಭಿಮಾನಿ ಬಳಗವಾದ “ಡಿ ಕಂಪೆನಿ’, ಮೊನ್ನೆ ಶನಿವಾರ ಮತ್ತು ಭಾನುವಾರದಂದು ಡಿಪಿಎಲ್ ಎಂಬ ಕ್ರಿಕೆಟ್ ಟೂರ್ನಿ ಆಯೋಜಿಸಿತ್ತು. ಡಿಪಿಎಲ್ ಎಂದರೇನು ಗೊತ್ತಾ? ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಅಂತ. ಇಲ್ಲಿ ಡಿ ಬ್ರದರ್ಸ್ ಎಂದರೆ ದರ್ಶನ್ ಮತ್ತು ಅವರ ಸಹೋದರ ದಿನಕರ್ ಎಂದರ್ಥ.
ದರ್ಶನ್ ಮತ್ತು ದಿನಕರ್ ಅವರ ಹೆಸರಿನಲ್ಲಿ ನಡೆದ ಈ ಟೂರ್ನಿಯಲ್ಲಿ, ರಾಜ್ಯಾದ್ಯಂತ ಇರುವ ದರ್ಶನ್ ಅವರ ಅಭಿಮಾನಿಗಳು ಭಾಗವಹಿಸಿ ಕ್ರಿಕೆಟ್ ಆಡಿದರು. ಈ ಪೈಕಿ ಕೆಂಗೇರಿ ಟೀಮ್ನವರು ಕಪ್ ಗೆದ್ದುಕೊಂಡರು.
ಈ ಸಂದರ್ಭದಲ್ಲಿ ದರ್ಶನ್ ಮತ್ತು ದಿನಕರ್ ಸಹ ಕ್ರಿಕೆಟ್ ಆಡಿದ್ದು ವಿಶೇಷವಾಗಿತ್ತು. ಅವರ ಜೊತೆಗೆ ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ಅರ್ಜುನ್ ಮುಂತಾದವರು ಈ ಟೂರ್ನಿಯಲ್ಲಿ ಭಾಗವಹಿಸಿ, ಅಭಿಮಾನಿಗಳನ್ನು ಖುಷಿಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ