ಇಂದು ದರ್ಶನ್ ಹುಟ್ಟುಹಬ್ಬ
ಸಂಭ್ರಮದ ಆಚರಣೆಗೆ ಅಭಿಮಾನಿಗಳು ಸಜ್ಜು
Team Udayavani, Feb 16, 2020, 7:01 AM IST
ಇಂದು ದರ್ಶನ್ ಅಭಿಮಾನಿಗಳ ಪಾಲಿಗೆ ಹಬ್ಬ. ಅದಕ್ಕೆ ಕಾರಣ ಏನೆಂದು ಹೊಸದಾಗಿ ಹೇಳುವ ಅಗತ್ಯವಿಲ್ಲ. ಹೌದು, ಇಂದು ದರ್ಶನ್ ಹುಟ್ಟುಹಬ್ಬ. ತಮ್ಮ ಪ್ರೀತಿಯ ಡಿ ಬಾಸ್ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಅದೇ ಕಾರಣದಿಂದ ದೂರದ ಊರುಗಳಿಂದಲೂ ಅಭಿಮಾನಿಗಳು ಬಂದು ದರ್ಶನ್ ಅವರಿಗೆ ಶುಭಾಶಯ ಕೋರುತ್ತಾರೆ. ದರ್ಶನ್ ಕೂಡಾ ಅಷ್ಟೇ ಫೆ.16 ರಂದು ಇಡೀ ದಿನ ತಮ್ಮ ಅಭಿಮಾನಿಗಳ ಜೊತೆ ಕಳೆಯುತ್ತಾರೆ.
ಒಂಥರಾ ಅಭಿಮಾನಿಗಳ ದಿನ ಎನ್ನಬಹುದು. ಈ ಬಾರಿಯೂ ದರ್ಶನ್ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ಅದು ಅಭಿಮಾನಿಗಳ ಆಸೆ ಕೂಡಾ. ಆದರೆ, ದರ್ಶನ್ ಮಾತ್ರ ಹಾರ-ಕೇಕ್ ಬದಲು ದವಸ-ಧಾನ್ಯ ನೀಡಿ ಎಂದು ಕಳೆದ ಬಾರಿಯಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಅಭಿಮಾನಿಗಳು ದವಸ-ಧಾನ್ಯಗಳ ಜೊತೆಗೆ ಕೇಕ್-ಹಾರವನ್ನು ತಂದು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನು, ದರ್ಶನ್ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ ಇರುವ ಅವರ ಅಭಿಮಾನಿ ಸಂಘಗಳು ರಕ್ತದಾನ, ಅನ್ನದಾನ ಸೇರಿದಂತೆ ಹಲವು ಸಮಾಜಮುಖೀ ಕಾರ್ಯಗಳನ್ನು ಹಮ್ಮಿಕೊಂಡಿವೆ. ಇದು ಅಭಿಮಾನಿಗಳ ಸಂಭ್ರಮವಾದರೆ, ಚಿತ್ರರಂಗದ ಮಂದಿ ಕೂಡಾ ದರ್ಶನ್ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಜೊತೆ ಸಿನಿಮಾ ಮಾಡಬೇಕೆಂದು ಕಾಯುವ ಸಿನಿಮಾ ಮಂದಿಯ ಸಂಖ್ಯೆಯೇನೂ ಕಮ್ಮಿಯಿಲ್ಲ.
ಈಗಾಗಲೇ ಅನೇಕರು ದರ್ಶನ್ ಜೊತೆ ಸಿನಿಮಾ ಮಾಡುವ ಕುರಿತು ಮಾತುಕತೆಯಾಡಿದ್ದು, ಅವರೆಲ್ಲ ಜಾಹೀರಾತು ಮೂಲಕ ತಮ್ಮ ಹೀರೋಗೆ ಶುಭ ಕೋರಿದ್ದಾರೆ. ಸಾಕಷ್ಟು ಸಿನಿಮಾಗಳು ಕೂಡಾ ಹುಟ್ಟುಹಬ್ಬ ಸಮಯದಲ್ಲಿ ಅನೌನ್ಸ್ ಆಗಿವೆ. ದರ್ಶನ್ ಕೂಡಾ ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಮಾಡಲಿದ್ದಾರೆ. ಸದ್ಯ ದರ್ಶನ್ “ರಾಜವೀರ ಮದಕರಿ ನಾಯಕ’ ಚಿತ್ರೀಕರಣದಲ್ಲಿದ್ದಾರೆ. ಈಗ ಆ ಚಿತ್ರೀಕರಣದಿಂದ ಬ್ರೇಕ್ ಪಡೆದು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ರಾಬರ್ಟ್ ಟೀಸರ್: ದರ್ಶನ್ ನಾಯಕರಾಗಿರುವ “ರಾಬರ್ಟ್’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಏಪ್ರಿಲ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಂದು ದರ್ಶನ್ ಹುಟ್ಟುಹಬ್ಬ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Kannada Cinema: ತೆರೆಗೆ ಬಂತು ಯುವ, ತಾರಿಣಿ
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ