ಎಲ್ಲೆಡೆ ಹರಿದಾಡುತ್ತಿರುವ ವದಂತಿಗೆ ತೆರೆ ಎಳೆದ ದರ್ಶನ್ ಪತ್ನಿ; ಟ್ವೀಟ್ ನಲ್ಲಿ ಏನಿದೆ?
Team Udayavani, Aug 12, 2019, 1:02 PM IST
ಬೆಂಗಳೂರು:ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡುತ್ತಿರುವ ನಡುವೆಯೇ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವಿನ ಸಂಬಂಧದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ ಎಂದು ಹರಿದಾಡುತ್ತಿರುವ ಸುದ್ದಿ ಬಗ್ಗೆ ಸ್ವತಃ ವಿಜಯಲಕ್ಷ್ಮಿ ಟ್ವೀಟ್ ಮೂಲಕ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
All the rumours doing rounds are baseless…
— Vijayalakshmi (@vijayaananth2) August 11, 2019
ಒಂದೇ ಸಾಲಿನ ಟ್ವೀಟ್ ಮೂಲಕ ಸ್ಪಷ್ಟನೆ:
ನಮ್ಮ ಬಗ್ಗೆ ಎಲ್ಲೆಡೆ ಹರಿದಾಡುತ್ತಿರುವ ಎಲ್ಲಾ ಊಹಾಪೋಹಗಳು ಸತ್ಯಕ್ಕೆ ದೂರವಾದದ್ದು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿದ್ದಾರೆ.