ರಚ್ಚುಗೆ ಧ್ರುವ ಸರ್ಜಾ ಸಾಥ್: ಇಂದು ಲವ್ ಯು ರಚ್ಚು ಟ್ರೈಲರ್
Team Udayavani, Dec 16, 2021, 11:05 AM IST
ಅಜೇಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ “ಲವ್ ಯು ರಚ್ಚು’ ಚಿತ್ರದ ಪ್ರಮೋಶನ್ಸ್ ಕೆಲಸಗಳನ್ನು ಭರ್ಜರಿಯಾಗಿ ನಡೆಸುತ್ತಿರುವ ಚಿತ್ರತಂಡ, ಈಗಾಗಲೇ ಚಿತ್ರದ ಹಾಡುಗಳ ಮೂಲಕ ಕೇಳುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದೀಗ “ಲವ್ ಯು ರಚ್ಚು’ ಚಿತ್ರದ ಟ್ರೇಲರ್ ಹೊರತರಲು ಸಿದ್ಧತೆ ಮಾಡಿಕೊಂಡಿರುವ ಚಿತ್ರತಂಡ, ಇಂದು ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡುತ್ತಿದೆ. ಇನ್ನೊಂದು ವಿಶೇಷವೆಂದರೆ, ಹನುಮ ಜಯಂತಿಯ ದಿನದಂದೇ”ಲವ್ ಯು ರಚ್ಚು’ ಚಿತ್ರದ ಟ್ರೇಲರ್ ಹೊರಬರುತ್ತಿದ್ದು, ಅದೂ ಸ್ಯಾಂಡಲ್ವುಡ್ನಲ್ಲಿ ಹನುಮನ ಪರಮ ಭಕ್ತ ಎಂದೇ ಗುರುತಿಸಿಕೊಂಡಿರುವ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕೈಯಿಂದ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ.
ಈಗಾಗಲೇ”ಲವ್ ಯು ರಚ್ಚು’ ಚಿತ್ರದ ಫಸ್ಟ್ಲುಕ್ ಮತ್ತು ಹಾಡುಗಳನ್ನು ನೋಡಿ ಮೆಚ್ಚಿಕೊಂಡಿರುವ ನಟ ಧ್ರುವ ಸರ್ಜಾ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ “ಲವ್ ಯು ರಚ್ಚು’ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ‘ಪುಷ್ಪ’ ಪ್ರಚಾರ: ಪುನೀತ್ ಮನೆಗೆ ಭೇಟಿ ನೀಡುತ್ತೇನೆಂದ ಅಲ್ಲು ಅರ್ಜುನ್
“ಜಿ ಸಿನಿಮಾಸ್’ ಬ್ಯಾನರ್ನಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿರುವ “ಲವ್ ಯು ರಚ್ಚು’ ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನವಿದೆ. “ಕೃಷ್ಣನ್ ಲವ್ಸ್ಟೋರಿ’, “ಕೃಷ್ಣಲೀಲಾ’ ಸಿನಿಮಾಗಳ ಸಕ್ಸಸ್ ನಂತರ ನಿರ್ದೇಶಕ ಶಶಾಂಕ್, ನಟ ಅಜೇಯ್ ರಾವ್ ಅವರಿಗಾಗಿಯೇ ಮಾಡಿಕೊಂಡಿದ್ದಕಥೆ ಇದಾಗಿದ್ದು, “ಲವ್ ಯು ರಚ್ಚು’ ಚಿತ್ರಕ್ಕೆ ಶಶಾಂಕ್ ಕಥೆಯ ಜೊತೆಗೆ ಚಿತ್ರಕಥೆ, ಸಂಭಾಷಣೆಯ ಹೊಣೆಯನೂ ಹೊತ್ತುಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಶ್ರೀಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನವಿದೆ.
ಸದ್ಯ ಪ್ರಮೋಶನ್ಸ್ನಲ್ಲಿ ಬಿಝಿ ಯಾಗಿರುವ “ಲವ್ ಯು ರಚ್ಚು’ ಬಗ್ಗೆ ಮಾತನಾಡುವ ನಿರ್ಮಾಪಕ ಗುರು ದೇಶಪಾಂಡೆ, “ಈಗಾಗಲೇ ರಿಲೀಸ್ ಆಗಿರುವ ಫಸ್ಟ್ಲುಕ್, ಸಾಂಗ್ಸ್ ಎಲ್ಲದಕ್ಕೂ ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಸಿನಿಮಾದ ರೈಟ್ಸ್ ಗಳಿಗೂ ಎಲ್ಲ ಕಡೆಗಳಿಂದ ಒಳ್ಳೆಯ ಡಿಮ್ಯಾಂಡ್ ಬರುತ್ತಿದೆ. “ರಚ್ಚು’ ಎಲ್ಲ ಥರದ ಆಡಿಯನ್ಸ್ಗೂ ಇಷ್ಟವಾಗುತ್ತಿದೆ. ಒಂದೊಳ್ಳೆ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಸಪೋರ್ಟ್ ಸಿಗುತ್ತಿರುವುದು ನೋಡಿದಾಗಖುಷಿಯಾ ಗುತ್ತದೆ’ ಎನ್ನುತ್ತಾರೆ. ಅಂದಹಾಗೆ, “ಲವ್ ಯು ರಚ್ಚು’ ಚಿತ್ರ ಇದೇ ಡಿ.31ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ