ಹೊಸ ಚಿತ್ರದ ಶೂಟಿಂಗ್ನಲ್ಲಿ ಹರಿಪ್ರಿಯಾ ದಿಗಂತ್ ಬಿಝಿ
ಹೈದರಾಬಾದ್ನಲ್ಲಿ ನಡೆಯುತ್ತಿದೆ ಭರದ ಚಿತ್ರೀಕರಣ
Team Udayavani, Nov 9, 2020, 2:06 PM IST
ತೆಲುಗಿನ ಸೂಪರ್ ಹಿಟ್ “ಎವರು’ ಚಿತ್ರದ ಕನ್ನಡ ರಿಮೇಕ್ನಲ್ಲಿ ನಟಿ ಹರಿಪ್ರಿಯಾ, ದಿಗಂತ್ ಮುಖ್ಯ ಭೂಮಿಕೆಯಲ್ಲಿಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಕೆಲ ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಅದಾದ ಬಳಿಕ “ಎವರು’ಕನ್ನಡ ಅವತರಣಿಕೆಯ ಮುಹೂರ್ತ ಸಮಾರಂಭಕೂಡ ಅದ್ಧೂರಿಯಾಗಿ ನೆರವೇರಿತ್ತು.
ಮುಹೂರ್ತದ ಬಳಿಕ ಚಿತ್ರ ತಂಡ ಕೊಂಚವೂ ತಡಮಾಡದೆ, ಚಿತ್ರೀಕರಣವನ್ನು ಆರಂಭಿಸಿದೆ. ಸದ್ಯ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದ್ದು, ಚಿತ್ರತಂಡಕೆಲ ದಿನಗಳಿಂದ ಹೈದರಾಬಾದ್ನಲ್ಲಿಯೇ ಬೀಡು ಬಿಟ್ಟಿದೆ. ಇನ್ನು ಈ ಚಿತ್ರದ ಮೊದಲ ಹಂತದ ಚಿತ್ರೀಕರಣದಲ್ಲಿ ನಾಯಕ ನಟಿ ಹರಿಪ್ರಿಯಾ, ನಟ ದಿಗಂತ್ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಬರುವ ಹರಿಪ್ರಿಯಾ ಮತ್ತು ದಿಗಂತ್ ಅವರ ನಟನೆಯ ಪ್ರಮುಖ ದೃಶ್ಯಗಳನ್ನು ಈ ಹಂತದ ಚಿತ್ರೀಕರಣದಲ್ಲಿ ಸೆರೆಹಿಡಿಯಲಾಗುತ್ತಿದ್ದು, ಈಗಾಗಲೇ ಒಂದು ವಾರದಿಂದ ಈ ಚಿತ್ರೀಕರಣ ಭರದಿಂದ ನಡೆಯುತ್ತಿದೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ಚಿತ್ರೀಕರಣದ ಬಗ್ಗೆ ಟ್ಟಿಟ್ಟರ್ನಲ್ಲಿ ಮಾಹಿತಿ ನೀಡಿರುವ ಹರಿಪ್ರಿಯಾ, “ದಿಗಂತ್ ಅವರೊಂದಿಗೆ ಹೊಸ ಚಿತ್ರದ ಶೂಟಿಂಗ್ ಹೈದರಾಬಾದ್ನಲ್ಲಿ ಒಂದು ವಾರದ ಹಿಂದೆ ಆರಂಭವಾಗಿದೆ. ಚಿತ್ರತಂಡ ತುಂಬ ಉತ್ಸಾಹದಿಂದ ಇದ್ದು, ನಾನು ಖುಷಿಯಾಗಿದ್ದೇನೆ’ ಎಂದಿದ್ದಾರೆ. ಅಲ್ಲದೆ ದಿಗಂತ್ ಜೊತೆಗಿರುವ ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ತೆಲುಗು ನಿರ್ದೇಶಕ ಅಶೋಕ್ ತೇಜ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ, ದಿಗಂತ್ ಅವರೊಂದಿಗೆ ವಸಿಷ್ಟ ಸಿಂಹ, ಪ್ರಭು ಮುಂದ್ಕೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ತೆಲುಗಿನ “ಎವರು’ ಸ್ಪಾನಿಷ್ ಭಾಷೆಯ “ದಿ ಇನ್ವಿಸಿಬಲ್ ಗೆಸ್ಟ್’ ಸಿನಿಮಾದ ರಿಮೇಕ್ ಆಗಿತ್ತು. ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಈ ಚಿತ್ರವನ್ನು ತೆರೆಗೆ ತರಲಾಗಿತ್ತು. ಅತ್ಯಾಚಾರಿಯೊಬ್ಬನನ್ನುಕೊಲ್ಲುವಕಥೆಯಸುತ್ತ ಚಿತ್ರ ನಡೆಯುತ್ತದೆ. ಸಸ್ಪೆನ್ಸ್ಕಂಕ್ರೈಂ – ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಇದೇ ಚಿತ್ರವನ್ನುಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ತರಲು ಹೊರಟಿದೆ ಚಿತ್ರತಂಡ. ಹೈದರಾಬಾದ್ ಮೂಲದ ರಾಜೇಶ್ ಅಗರವಾಲ್ ಹಾಗೂ ಡಿ. ಜಯಪ್ರಕಾಶ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ಟೈಟಲ್ ಇನ್ನೂ ಅಂತಿಮವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ