ಅದೃಷ್ಟದ ಹಿಂದೆ ಬಿದ್ದ ದಿಗಂತ್
Team Udayavani, Nov 28, 2017, 11:07 AM IST
ದಿಗಂತ್ ಅವರ “ಕಥೆಯೊಂದು ಶುರುವಾಗಿದೆ’ ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತವಾಗಿದೆ. ಸದ್ಯ ಆ ಚಿತ್ರ ಚಿತ್ರೀಕರಣದಲ್ಲಿದೆ. ಈಗ ದಿಗಂತ್ ಅವರ ಹೊಸ ಸಿನಿಮಾದ ಸುದ್ದಿಯೊಂದು ಹೊರ ಬಂದಿದೆ. ಅದು “ಫಾರ್ಚೂನರ್’. ಹೌದು, ದಿಗಂತ್ “ಫಾರ್ಚೂನರ್’ ಸಿನಿಮಾವನ್ನು ಒಪ್ಪಿದ್ದಾರೆ. ಕೇವಲ ಒಪ್ಪಿದ್ದಷ್ಟೇ ಅಲ್ಲ, ಸದ್ದಿಲ್ಲದೇ ಶೇ 70 ರಷ್ಟು ಚಿತ್ರೀಕರಣ ಕೂಡಾ ಮುಗಿಸಿದ್ದಾರೆ.
ಹಾಗಾಗಿ, ಇದು ದಿಗಂತ್ “ಕಥೆಯೊಂದು ಶುರುವಾಗಿದೆ’ ಚಿತ್ರಕ್ಕೆ ಮುಂಚೆ ಒಪ್ಪಿಕೊಂಡ ಸಿನಿಮಾ. ಫಾರ್ಚೂನರ್ ಎಂದರೆ ಏನು, ಸದ್ಯ ಬೇಡಿಕೆಯಲ್ಲಿರುವ ಫಾರ್ಚೂನರ್ ಕಾರಿನ ಬಗ್ಗೆ ಸಿನಿಮಾ ಮಾಡುತ್ತಿದ್ದಾರಾ ಎಂದು ಲೆಕ್ಕಾಚಾರ ಹಾಕುವಂತಿಲ್ಲ. ಏಕೆಂದರೆ ಈ ಚಿತ್ರದಲ್ಲಿ ಅದೃಷ್ಟವೇ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಒಬ್ಬ ಶ್ರೀಮಂತ ಹುಡುಗನ ಜೀವನದಲ್ಲಿ ಅದೃಷ್ಟ ಯಾವ ರೀತಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ.
ಈ ಚಿತ್ರವನ್ನು ಮಂಜುನಾಥ್ ಎನ್ನುವವರು ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಚಿತ್ರ. ಯೂತ್ ಎಂಟರ್ಟೈನರ್ ಆಗಿರುವ ಈ ಚಿತ್ರದಲ್ಲಿ ಮನುಷ್ಯನ ಜೀವನದಲ್ಲಿ ಅದೃಷ್ಟ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ದಿಗಂತ್ಗೆ ಇಬ್ಬರು ನಾಯಕಿಯರು. ಸೋನು ಗೌಡ ಹಾಗೂ ಸ್ವಾತಿ ಶರ್ಮಾ. ಒಬ್ಬರು ಗ್ಲಾಮರಸ್ ಆದರೆ, ಇನ್ನೊಬ್ಬರು ಹೋಮ್ಲಿ ಪಾತ್ರ. ನಿರ್ದೇಶಕ ಮಹೇಶ್ ಬಂದು ದಿಗಂತ್ಗೆ ಕಥೆ ಹೇಳುವಾಗ ದಿಗಂತ್ಗೆ ಸ್ವಲ್ಪ ಟೆನ್ಷನ್ ಇತ್ತಂತೆ.
ಏಕೆಂದರೆ ಕೆಲವು ನಿರ್ದೇಶಕರು ತುಂಬಾ ಚೆನ್ನಾಗಿ ಕತೆ ಹೇಳುತ್ತಾರೆ, ಆದರೆ, ಚೆನ್ನಾಗಿ ಸಿನಿಮಾ ಮಾಡಲ್ಲ. ಇನ್ನು ಕೆಲವರು ಕಥೆ ಹೇಳಿದಂತೆ ಸಿನಿಮಾ ಮಾಡುತ್ತಾರೆ. ಇದರಲ್ಲಿ ಮಹೇಶ್ ಹೇಗೋ ಎಂಬ ಅನುಮಾನವಿತ್ತಂತೆ. ಆದರೆ, ಶೂಟಿಂಗ್ನಲ್ಲಿ ಇವರು ಕಥೆ ಹೇಳಿದಂತೆ ಸಿನಿಮಾ ಮಾಡುವ ನಿರ್ದೇಶಕ ಎಂದು ಗೊತ್ತಾಯಿತಂತೆ. ಈ ಚಿತ್ರವನ್ನು ಗುಲೇಚಾ ಬ್ರದರ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಎಂ.ಎಸ್.ನರಸಿಂಹಮೂರ್ತಿಯವರ ಸಂಭಾಷಣೆ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ