ಏಕ್ ಲವ್ಯನ ಸ್ವಚ್ಛತಾ ಅಭಿಯಾನ
Team Udayavani, Jan 6, 2020, 12:35 PM IST
ಪ್ರೇಮ್ ನಿರ್ದೇಶನದ “ಏಕ್ಲವ್ಯ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿರುವ ಚಿತ್ರತಂಡ, ಊಟಿಗೆ ತೆರಳಿ ಅಲ್ಲಿನ ಸುಂದರ ಲೊಕೇಶನ್ಗಳಲ್ಲಿ ಚಿತ್ರೀಕರಣ ನಡೆಸಿದೆ. ಸುಂದರ ಲೊಕೇಶನ್ ಎಂದಾಕ್ಷಣ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಿರುತ್ತದೆ. ಹಾಗೆ ಬರುವ ಪ್ರವಾಸಿಗರು ಹೋಗುವಾಗ ಆ ಸುಂದರ ಪರಿಸರಕ್ಕೆ ಖಾಲಿ ಬಾಟಲಿ, ಕಸ, ತಿಂಡಿ ಪೊಟ್ಟಣ್ಣ ವನ್ನು ಅಲ್ಲೇ ಬಿಸಾಕಿ ಏನಾದರೊಂದು ಕೊಡುಗೆ ಕೊಟ್ಟು ಹೋಗುತ್ತಾರೆ. ಪ್ರೇಮ್ ಅವರ “ಏಕ್ಲವ್ಯ’ ಚಿತ್ರೀಕರಣವಾದ ಜಾಗದಲ್ಲೂ ಈ ತರಹದ ಸಾಕಷ್ಟು ಕಸ ಬಿದ್ದಿದ್ದವು. ಆದರೆ, ಚಿತ್ರತಂಡ ಮಾತ್ರ ಅವುಗಳನ್ನು ಹಾಗೆ ಬಿಟ್ಟು ಬಂದಿಲ್ಲ. ಬದಲಾಗಿ ಇಡೀ ಚಿತ್ರತಂಡ ಒಟ್ಟಾಗಿ ಆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದೆ. ಈ ಮೂಲಕ ಆ ಸುಂದರ ಪರಿಸರವನ್ನು ಸುಂದರವಾಗಿಡಲು ಪ್ರಯತ್ನಿಸಿದ್ದಾರೆ.
“ಏಕ್ಲವ್ಯ’ ಸಿನಿಮಾ ಮೂಲಕ ರಕ್ಷಿತಾ ಅವರ ಸಹೋದರ ರಾಣಾ ನಾಯಕರಾಗಿ ಎಂಟ್ರಿಯಾಗುತ್ತಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಯಕಿಯಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ನಡೆದಿದೆ. ಇದೊಂದು ಪಕ್ಕಾ ಲವ್ ಕಂ ಆ್ಯಕ್ಷನ್ ಸಿನಿಮಾವಾಗಿದ್ದು, “ದಿ ವಿಲನ್’ ನಂತರ ಪ್ರೇಮ್ ನಿರ್ದೇಶಿಸುತ್ತಿರುವ ಚಿತ್ರ