ಮದ್ವೆ ನಂತರವೂ ಸಿನ್ಮಾ ಬಿಡಲ್ಲ

ಒಳ್ಳೇ ಅವಕಾಶ ಎದುರು ನೋಡುತ್ತಿದ್ದೇನೆ- ನೇಹಾಪಾಟೀಲ್‌

Team Udayavani, Jun 17, 2019, 3:00 AM IST

neha-patil

ಕನ್ನಡದ ಅನೇಕ ನಟಿಯರು ತಮ್ಮ ಮದುವೆ ಬಳಿಕವೂ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿರುವುದು ಹೊಸದೇನಲ್ಲ. ಈಗಾಗಲೇ ಮೇಘನಾರಾಜ್‌, ಸಿಂಧುಲೋಕನಾಥ್‌ ಸೇರಿದಂತೆ ಹಲವು ನಟಿಯರು ಚಿತ್ರಗಳಲ್ಲಿ ನಟಿಸುವ ಮೂಲಕ ಆ್ಯಕ್ಟೀವ್‌ ಆಗಿದ್ದಾರೆ. ಆ ಸಾಲಿಗೆ ಈಗ ಮತ್ತೊಬ್ಬ ನಟಿ ರೀ ಎಂಟ್ರಿಯಾಗಿದ್ದಾರೆ. ಹೌದು, ಅದು ಬೇರಾರೂ ಅಲ್ಲ, ನೇಹಾಪಾಟೀಲ್‌.

ಇತ್ತೀಚೆಗಷ್ಟೇ ಮದುವೆಯಾದ ನೇಹಾಪಾಟೀಲ್‌, ಕ್ರಮೇಣ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ನೇಹಾಪಾಟೀಲ್‌ ಮಾತ್ರ, ಮದುವೆ ನಂತರವೂ ನಾನು ಸಿನಿಮಾಗಳಲ್ಲಿ ನಟಿಸಲು ಸಿದ್ಧ ಎಂದು ಸಾರಿದ್ದಾರೆ. ಬಹುತೇಕ ನಟಿಯರು ಮದುವೆ ನಂತರ ಬಣ್ಣದ ಬದುಕಿನಿಂದ ದೂರ ಸರಿಯುವುದು ಸಾಮಾನ್ಯ.

ಆದರೆ, ಈಗಿನ ನಟಿಯರು ಪುನಃ ಬಣ್ಣ ಹಚ್ಚುವ ಮೂಲಕ ತಮ್ಮ ಕಲಾಪ್ರೀತಿ ಮೆರೆಯತ್ತಿದ್ದಾರೆ. ಆ ಕುರಿತು ಸಿನಿ ಜರ್ನಿ ಮುಂದುವರೆಸುವ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ನೇಹಾಪಾಟೀಲ್‌ ಅವರೇ “ಉದಯವಾಣಿ’ ಜೊತೆ ತಮ್ಮ ಮುಂದಿನ ಸಿನಿಕನಸಿನ ಬಗ್ಗೆ ಮಾತನಾಡಿದ್ದಾರೆ. “ನನ್ನ ಮದುವೆಯ ನಂತರ “ಗರ’ ಚಿತ್ರ ಬಿಡುಗಡೆಯಾಗಿತ್ತು.

ಅದಾದ ಮೇಲೆ ಈಗ “ನ್ಯೂರಾನ್‌’ ಚಿತ್ರ ಬಿಡುಗಡೆಗೆ ತಯಾರಾಗುತ್ತಿದೆ. ಅದಾದ ಮೇಲೆ ದರ್ಶನ್‌ ಅಭಿನಯದ “ಒಡೆಯ’ ಚಿತ್ರ ಬರಲಿದೆ. ನಾನು “ಒಡೆಯ’ ಚಿತ್ರದಲ್ಲಿ ಪಂಕಜ್‌ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದೇನೆ. ದರ್ಶನ್‌ ಅವರ ನಾಲ್ವರು ಸಹೋದರರ ಪೈಕಿ ಪಂಕಜ್‌ ಕೂಡ ಒಬ್ಬರಾಗಿದ್ದು, ಅವರಿಗೆ ನಾನು ನಾಯಕಿಯಾಗಿದ್ದೇನೆ.

ಆ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ. ಇನ್ನು, ಸಾಮಾನ್ಯವಾಗಿ ಮದುವೆ ಬಳಿಕ ನಟಿಯರು ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತಿದೆ. ಆದರೆ, ನಾನು ಮದುವೆಯ ಬಳಿಕವೂ ಸಿನಿಮಾಗಳಲ್ಲಿ ನಟಿಸುತ್ತೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಮದುವೆ ನಂತರ ನನಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಾಕಷ್ಟು ಬಂದಿದ್ದು ನಿಜ.

ಆದರೆ, ನಾನೇ ಕೆಲ ಅವಕಾಶಗಳನ್ನು ಕೈ ಬಿಟ್ಟೆ. ಕಾರಣ, ಮದುವೆ ಆಗಿದ್ದರಿಂದ ಸ್ವಲ್ಪ ಬ್ರೇಕ್‌ ಬೇಕಿತ್ತು. ಹಾಗಾಗಿ ಆಮೇಲೆ ಅವಕಾಶ ಬಂದೇ ಬರುತ್ತವೆ. ಆಗ ನೋಡೋಣ ಅಂದುಕೊಂಡಿದ್ದೆ. ಈಗ ಸಿನಿಮಾ ಅವಕಾಶಗಳು ಬರುತ್ತಿವೆ. ಒಳ್ಳೆಯ ಅವಕಾಶ ಬಂದರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ನಾನು ಈಗಾಗಲೇ ಮರುಸುತ್ತುವ ಪಾತ್ರಗಳನ್ನು ಮಾಡಿದ್ದಾಗಿದೆ. ಪುನಃ ಅದೇ ರೀತಿಯ ಪಾತ್ರಗಳು ನನಗೆ ಇಷ್ಟವಿಲ್ಲ.

ನಾನೀಗ ಚಾಲೆಂಜ್‌ ಎನಿಸುವ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ. ನಿತ್ಯಾಮೆನನ್‌ ಅವರು ಈ ಹಿಂದೆ “ಮೈನಾ’ ಚಿತ್ರದಲ್ಲಿ ಮಾಡಿದ್ದ ಪಾತ್ರಗಳು ನನಗಿಷ್ಟ. ವಿಕಲಚೇತನ ಪಾತ್ರಗಳಲ್ಲಿ ಮುಗ್ಧತೆ ಇರುತ್ತೆ. ಎಲ್ಲರಿಗೂ ಬಹುಬೇಗ ರೀಚ್‌ ಆಗುತ್ತೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಚಾಲೆಂಜಿಂಗ್‌ ಅಂಶಗಳೂ ಇರುತ್ತವೆ. ಹಾಗಾಗಿ, ನಾನು ಮುಂದಿನ ದಿನಗಳಲ್ಲಿ ಆ ರೀತಿಯ ಪಾತ್ರ ನಿರೀಕ್ಷಿಸುತ್ತಿದ್ದೇನೆ. ಸದ್ಯಕ್ಕೆ ಅಂತಹ ಕಥೆ, ಪಾತ್ರ ಬಂದಿಲ್ಲ.

ಬಂದರೆ ಖಂಡಿತವಾಗಿಯೂ ಮಾಡ್ತೀನಿ’ ಎನ್ನುತ್ತಾರೆ ನೇಹಾ. ಹಾಗಾದರೆ, ಮನೆಯಲ್ಲಿ ಪ್ರೋತ್ಸಾಹ, ಸಹಕಾರಕ್ಕೇನೂ ಕೊರತೆ ಇಲ್ಲವೆನ್ನಿ? ಈ ಪ್ರಶ್ನೆಗೆ ಉತ್ತರವಾಗುವ ನೇಹಾ, “ಖಂಡಿತವಾಗಿಯೂ ಮನೆಯಲ್ಲಿ ಸಹಕಾರ ಇದೆ. ಮದುವೆ ನಂತರವೂ ನಿನಗೆ ಯಾವಾಗ ಬೇಕಾದರೂ ಸಿನಿಮಾ ಮಾಡು, ನಿನಗೆ ಕಂಫ‌ರ್ಟ್‌ ಎನಿಸಿದರೆ ಬಿಡಬೇಡ ಎಂಬ ಸಪೋರ್ಟ್‌ ಇದೆ. ಹಾಗಾಗಿ ನಾನೀನ ಸ್ವಲ್ಪ ಡಿಫ‌ರೆಂಟ್‌ ಆಗಿರುವ ಪಾತ್ರಗಳನ್ನು ಎದುರುನೋಡುತ್ತಿದ್ದೇನೆ’ ಎಂದಷ್ಟೇ ಹೇಳುತ್ತಾರೆ ನೇಹಾ.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.