ಹಾಡಿನ ಸಂಭ್ರಮದಲ್ಲಿ ನೇತ್ರದಾನ!
Team Udayavani, Nov 22, 2017, 10:53 AM IST
ಒಂದು ಚಿತ್ರದ ಆಡಿಯೋ ಸಿಡಿ ಬಿಡುಗಡೆ ಹೇಗಿರಬೇಕು? ಮನರಂಜನೆ ಹೊರತು ಇನ್ನೇನಿದ್ದರೆ ಚಂದ ಹೇಳಿ? ಆದರೆ, ಇಲ್ಲೊಂದು ಹೊಸಬರ ತಂಡ ವಿಶೇಷವಾಗಿ ಆ ಆಡಿಯೋ ಬಿಡುಗಡೆಗೆ ಸಾಕ್ಷಿಯಾಗಿದೆ. ಅದು ‘ಸಿಹಿರ್’. ಹೌದು, ಮೈಸೂರಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಒಂದು ವಿಶೇಷ ವಿಷಯಕ್ಕೆ ಕಾರಣವಾಯಿತು.
ಅಂದು ಅಂಧರ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದು ಒಂದು ವಿಷಯವಾದರೆ, ಇನ್ನೊಂದು ವಿಶೇಷ, ಚಿತ್ರತಂಡದ ಸದಸ್ಯರು ನೇತ್ರದಾನ ಮಾಡುವ ಮೂಲಕ ಆ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅರುಣ್ ಬಿ.ಎಂ.ಗೌಡ ನಿರ್ಮಾಣದ ಈ ಚಿತ್ರಕ್ಕೆ ವಿ.ಮೋ.ಮಿಥುನ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಕಿಣಿ ವಿನೋದ್, ನಿರಂಜನ್ ದೇಶಪಾಂಡೆ, ನೇಹಾ, ನೀನಾಸಂ ಅಶ್ವತ್ಥ್, ಸುಚೇಂದ್ರ ಪ್ರಸಾದ್, ಮಿತ್ರ ಇತರರು ನಟಿಸಿದ್ದಾರೆ. ಅಂದಹಾಗೆ, ಆನಂದ್ ಆಡಿಯೋ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಅಂದು ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಿಣಿ ವಿನೋದ್, ನಿರಂಜನ್ ದೇಶಪಾಂಡೆ, ನೇಹಾ, ನಿರ್ದೇಶಕ ಮಿಥುನ್, ನಿರ್ಮಾಪಕ ಅರುಣ್ ಬಿ.ಎಂ.ಗೌಡ ಹಾಗೂ ಸಂಗೀತ ನಿರ್ದೇಶಕಿ ಚೈತ್ರ ಇತರರು ಹಾಜರಿದ್ದರು.
ಚಿತ್ರದಲ್ಲಿ ಐದು ಹಾಡುಗಳಿದ್ದು, ವಿ. ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಕೀರ್ತಿ ಶ್ರೀನಿವಾಸ್ ಗೀತೆಗಳನ್ನು ರಚಿಸಿದ್ದಾರೆ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ಸತ್ಯ ಕ್ಯಾಮೆರಾ ಹಿಡಿದರೆ, ಸುರೇಶ್ ಅವರ ಸಂಕಲನವಿದೆ. ಅಲ್ಟಿಮೆಟ್ ಶಿವು ಸಾಹಸ ಮಾಡಿದ್ದಾರೆ. ಎನ್. ಹನುಮಂತರಾವ್ ಅವರ ಸಹ ನಿರ್ಮಾಣವಿದೆ. ಕಿರಣ್ ಹಿನ್ನಲೆ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ