ದರ್ಶನ್‌ ಹುಟ್ಟುಹಬ್ಬದಲ್ಲಿ “ಅಭಿಮಾನದ ಜಾತ್ರೆ’

ಹರಿದು ಬಂತು ಕ್ವಿಂಟಾಲ್‌ಗ‌ಟ್ಟಲೇ ದವಸ-ಧಾನ್ಯ

Team Udayavani, Feb 17, 2020, 7:02 AM IST

Darshan-Birthday

ನಟ ದರ್ಶನ್‌ ಅವರ ಹುಟ್ಟುಹಬ್ಬ ಕಳೆದ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ವಾಗಿ ನಡೆದಿದೆ. ಕೇಕ್‌, ಹಾರಗಳ ಅಬ್ಬರ ವಿಲ್ಲದೇ, ದವಸ-ಧಾನ್ಯಗಳ ಉಡುಗೊರೆಯೊಂದಿಗೆ ಅಭಿಮಾನಿಗಳ ಪಾಲಿನ “ಡಿ ಬಾಸ್‌’ ದರ್ಶನ್‌ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್‌ ಕಟ್‌ ಮಾಡದೇ, ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳ ಜೊತೆ ಬೆರೆಯುವ ಮೂಲಕ ದರ್ಶನ್‌ ಹುಟ್ಟುಹಬ್ಬ ಆಚರಿಸಿಕೊಂಡರು.

ಸರತಿ ಸಾಲಿನಲ್ಲಿ ಬಂದ ಅಭಿಮಾನಿಗಳ ಕೈ ಕುಲುಕುವ ಮೂಲಕ ಅವರ ಖುಷಿಗೆ ಕಾರಣವಾದ ದರ್ಶನ್‌ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಟ್ಟಿದ್ದರು. ಸಾಮಾನ್ಯವಾಗಿ ಸ್ಟಾರ್‌ ನಟರ ಬರ್ತ್‌ಡೇ ಅಂದರೆ ಕೇಕ್‌, ಹಾರಗಳ ರಾಶಿ ಬಿದ್ದಿರುತ್ತದೆ. ಆದರೆ, ದರ್ಶನ್‌ ಅಭಿಮಾನಿಗಳಿಗೆ ಕೇಕ್‌, ಹಾರ ತರಬಾರದು ಎಂದು ಹೇಳಿದ್ದರಿಂದ ದರ್ಶನ್‌ ಮನೆ ಸುತ್ತಮುತ್ತ ಕೇಕ್‌, ಹಾರವಿರ ಲಿಲ್ಲ. ಇದು ದರ್ಶನ್‌ಗೆ ಖುಷಿ ಕೊಟ್ಟಿದೆ.

“ಕೇಕ್‌, ಹಾರವಿಲ್ಲದೇ ಇಡೀ ವಠಾರ ಕ್ಲೀನ್‌ ಇದೆ. ಇಲ್ಲಾಂದ್ರೆ ರಾಶಿ ರಾಶಿ ಬಿದ್ದಿರುತ್ತಿತ್ತು. ಕಳೆದ ವರ್ಷಕ್ಕಿಂತಲೂ ಹೆಚ್ಚು ದವಸ-ಧಾನ್ಯ ಗಳು ಬಂದಿವೆ. ಒಂದಷ್ಟು ವೃದ್ಧಾಶ್ರಮ, ಅನಾಥಶ್ರಮಗಳು ತುಂಬುತ್ತವೆ. ಅದೇ ಖುಷಿ. ಇದು ಅಭಿಮಾನಿಗಳ ದಿನ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು’ ಎನ್ನುವ ಮೂಲಕ ಅಭಿಮಾನಿಗಳ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಅಭಿಮಾನಿಗಳಿಂದ ಗಿಫ್ಟ್: ದವಸ- ಧಾನ್ಯಗಳ ಜೊತೆಗೆ ಒಂದಷ್ಟು ಅಭಿಮಾನಿಗಳು ದರ್ಶನ್‌ಗೆ ಮೊಲ, ಬಾತುಕೋಳಿ, ಕರುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ದಾಸನ ಪ್ರಾಣಿ ಪ್ರೀತಿಗೆ ಅಭಿಮಾನಿಗಳು ಸಾಥ್‌ ನೀಡಿದ್ದಾರೆ. ದರ್ಶನ್‌ ಇದನ್ನು ಮೈಸೂರಿನ ಲ್ಲಿರುವ ತೋಟಕ್ಕೆ ಸಾಗಿಸಲಿದ್ದಾರೆ. ದರ್ಶನ್‌ ಅವರ ಕೆಲವು ಅಭಿಮಾನಿ ಸಂಘಗಳು ವೀಲ್‌ಚೇರ್‌ ಕೂಡಾ ವಿತರಿಸಿದೆ.

ಇನ್ನು, ದರ್ಶನ್‌ ಹುಟ್ಟುಹಬ್ಬ ದಿನ ಅಭಿಮಾನಿಗಳೊಂದಿಗೆ ಬೆರೆಯುವ ಜೊತೆಗೆ ಸಿನಿಮಾ ಕೆಲಸದಲ್ಲೂ ನಿರತರಾಗಿರುತ್ತಾರೆ. ಈ ಬಾರಿಯೂ ಕೊಂಚ ಬಿಡುವು ಮಾಡಿಕೊಂಡು “ರಾಬರ್ಟ್‌’ ಚಿತ್ರದ ಡಬ್ಬಿಂಗ್‌ ಮಾಡಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡುವ ದರ್ಶನ್‌, “ಟೀಸರ್‌ನಲ್ಲಿ ನೋಡಿರೋದು ಬರೀ ಶೇ 10. ಸಿನಿಮಾ ಬೇರೇನೇ ಇದೆ. ತರುಣ್‌ ಏನು ಅಂದುಕೊಂಡಿದ್ದರೋ ಅದನ್ನು ಮಾಡಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ’ ಎನ್ನುತ್ತಾರೆ.

ಕಳೆದ ವರ್ಷಕ್ಕಿಂತಲೂ ಹೆಚ್ಚು ದವಸ-ಧಾನ್ಯಗಳು ಬಂದಿವೆ. ಒಂದಷ್ಟು ವೃದ್ಧಾಶ್ರಮ, ಅನಾಥಶ್ರಮಗಳು ತುಂಬುತ್ತವೆ. ಅದೇ ಖುಷಿ. ಇದು ಅಭಿಮಾನಿಗಳ ದಿನ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು.
-ದರ್ಶನ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.