“ಪೈಲ್ವಾನ್’ಗೆ ಗಣೇಶ್ ಮಾಸ್ಟರ್ ಸ್ಟೆಪ್
Team Udayavani, Feb 6, 2019, 5:53 AM IST
ನಟ ಸುದೀಪ್ ಮತ್ತು ನಿರ್ದೇಶಕ ಎಸ್. ಕೃಷ್ಣ ಕಾಂಬಿನೇಷನ್ನ “ಪೈಲ್ವಾನ್’ ಚಿತ್ರದ ಅಖಾಡದಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಸದ್ಯ “ಪೈಲ್ವಾನ್’ ಚಿತ್ರದ ಬಾಕಿ ಇರುವ ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಹಾಡಿಗೆ ಬಾಲಿವುಡ್ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನೃತ್ಯ ಸಂಯೋಜಿಸಲಿದ್ದಾರೆ.
ಬಾಲಿವುಡ್ನಲ್ಲಿ “ಬಾಜಿರಾವ್ ಮಸ್ತಾನಿ’, “ಅಗ್ನಿಪಥ್’, “ಸಂಜು’, “ಜೀರೋ’, ಇತ್ತೀಚೆಗೆ ತೆರೆಕಂಡ “ಕೆಜಿಎಫ್’ ಹಿಂದಿ ವರ್ಷನ್ನ “ಗಲಿ ಗಲಿ… ಹೂ’ಮೊದಲಾದ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಗಣೇಶ್ ಆಚಾರ್ಯ, ಕಳೆದ ಮೂರು ದಶಕಗಳಿಂದ ಅತ್ಯಂತ ಜನಪ್ರಿಯ ಕೊರಿಯೋಗ್ರಫರ್ ಎಂದೇ ಬಾಲಿವುಡ್ ಅಂಗಳದಲ್ಲಿ ಕರೆಸಿಕೊಳ್ಳುತ್ತಿದ್ದಾರೆ.
ಹಿಂದಿಯ ಬಹುತೇಕ ಸ್ಟಾರ್ ನಟ ಚಿತ್ರಗಳಿಗೆ ಕೊರಿಯೋಗ್ರಫಿ ಮಾಡಿದ ಹೆಗ್ಗಳಿಕೆ ಕೂಡ ಗಣೇಶ್ ಆಚಾರ್ಯ ಅವರಿಗಿದೆ. ಒಟ್ಟಾರೆ, ಮೊದಲ ಬಾರಿಗೆ ಕುಸ್ತಿ ಅಖಾಡಕ್ಕೆ ಇಳಿದಿರುವ “ಪೈಲ್ವಾನ್’ ಸುದೀಪ್ ಹಾಗೂ ಸುನೀಲ್ ಅವರಿಗೆ ಅದ್ಧೂರಿ ಸೆಟ್ನಲ್ಲಿ ಗಣೇಶ್ ಆಚಾರ್ಯ ಭರ್ಜರಿ ಸ್ಟೆಪ್ಸ್ಗಳನ್ನು ಹೇಳಿಕೊಡುತ್ತಿದ್ದು, ನಿರ್ದೇಶಕ ಕೃಷ್ಣ, ಗಣೇಶ್ ಆಚಾರ್ಯ ಅವರೊಂದಿಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಸದ್ಯ ಟೀಸರ್ ಮೂಲಕ ಅಖಾಡಕ್ಕೆ ಎಂಟ್ರಿ ಕೊಟ್ಟು “ಪೈಲ್ವಾನ್’ನ ತಾಕತ್ತಿನ ಬಗ್ಗೆ ಸಣ್ಣ ಝಲಕ್ ತೋರಿಸಿದ್ದ ಸುದೀಪ್, ಈಗ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆಯಲ್ಲಿ ಹೇಗೆ ಸ್ಟೆಪ್ಸ್ ಹಾಕಲಿದ್ದಾರೆ ಅನ್ನೋ ಕುತೂಹಲ ಹೆಚ್ಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ