ರಜನಿಕಾಂತ್ ಮನೆಯಲ್ಲಿ ಗೋವಿಂದು
Team Udayavani, Jan 24, 2018, 7:00 PM IST
ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಂಗಳವಾರ ಹಿರಿಯ ನಟ ರಜನಿಕಾಂತ್ ಅವರನ್ನು ಚೆನ್ನೈನ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಗೋವಿಂದು ಯಾಕೆ ರಜನಿಕಾಂತ್ ಅವರನ್ನು ಭೇಟಿ ಮಾಡಿದರು ಎಂಬ ಪ್ರಶ್ನೆ ಸಹಜ. ಮುಂದಿನ ತಿಂಗಳು ನಡೆಯಲಿರುವ ತಮ್ಮ ಮಗ ಅನೂಪ್ ಅವರ ಮದುವೆಗೆ ಆಹ್ವಾನ ನೀಡುವ ಸಲುವಾಗಿ ರಜನಿಕಾಂತ್ ಅವರನ್ನು ಗೋವಿಂದು ಭೇಟಿ ಮಾಡಿ, ಮದುವೆಗೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಗೋವಿಂದು ಅವರ ಮಗ ಅನೂಪ್ ಮತ್ತು ಮೇಘನ ಅವರ ಮದುವೆ ಫೆಬ್ರವರಿ ತಿಂಗಳ 19ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿದೆ. ಈ ಮದುವೆಗೆ ಆಹ್ವಾನಿಸುವ ಸಲುವಾಗಿ ಗೋವಿಂದು ಅವರು ಚೆನ್ನೈನಲ್ಲಿ ಬೀಡುಬಿಟ್ಟಿದ್ದು, ತಮಿಳಿನ ಜನಪ್ರಿಯ ಕಲಾವಿದರನ್ನು ಮಂಗಳವಾರ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.
ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಥಾಮಸ್ ಡಿ’ಸೋಜಾ ಮುಂತಾದವರ ಜೊತೆಗೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಗೋವಿಂದು, ಮಗನ ಮದುವೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ. ರಜನಿಕಾಂತ್ ಅಲ್ಲದೆ ಅರ್ಜುನ್ ಸರ್ಜಾ, ಸೋನಿಯಾ ಅಗರವಾಲ್, ಶರತ್ ಕುಮಾರ್ ಮುಂತಾದವರನ್ನು ಸಹ ಭೇಟಿ ಮಾಡಿ ಮದುವೆಗೆ ಆಹ್ವಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು