ಹಳ್ಳಿ ಸೊಗಡಿನ “ಗುಡುಮನ ಅವಾಂತರ’
ಬಿಡುಗಡೆಗೆ ಸಿದ್ಧತೆ
Team Udayavani, Dec 19, 2019, 7:01 AM IST
ಕನ್ನಡ ಚಿತ್ರರಂಗದಲ್ಲಿ ಈಗ ಚಿತ್ರವಿಚಿತ್ರ ಶೀರ್ಷಿಕೆಗಳ ಮೂಲಕ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದು ಹೊಸಬರಿಂದ ಹಿಡಿದು ಚಿತ್ರರಂಗದಲ್ಲಿ ಗುರುತಿಸಿಕೊಂಡವರೂ ಕೂಡಾ ಈ ತರಹದ ಟೈಟಲ್ ಮೊರೆ ಹೋಗುತ್ತಿದ್ದಾರೆ. ಈಗ ಹೊಸಬರ ತಂಡವೊಂದು “ಗುಡುಮನ ಅವಾಂತರ’ ಎಂಬ ಸಿನಿಮಾವೊಂದು ತಯಾರಾಗಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಸುಮಾರು 15 ವರ್ಷಗಳಿಂದ ಸಹ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮುನಿರಾಜು ಈ ಚಿತ್ರದ ನಿರ್ದೇಶಕರು. ಅಂದಹಾಗೆ, ಇದೊಂದು ಹಳ್ಳಿ ಸೊಗಡಿನ ಚಿತ್ರ. ನಿರ್ದೇಶಕ ಮುನಿರಾಜು ಹೇಳುವಂತೆ, ಚಿತ್ರದ ಕಥೆಗೆ ಹೊಂದಿಕೊಳ್ಳುವಂತಹ ಕಲಾವಿದರನ್ನೇ ಆಯ್ಕೆ ಮಾಡಿರುವುದರಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆಯಂತೆ. ಸದ್ಯದಲ್ಲೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಿ ನಡೆಸಿದೆ.
ಚಿತ್ರದಲ್ಲಿ ಯುವ ಕಲಾವಿದರಾದ ರಾಜ್ ಗೌತಮ್ ಹಾಗೂ ಸನ್ನಿಧಿ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮೀದೇವಿ, ಉಮೇಶ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜು, ಮೂಗ್ ಸುರೇಶ್, ಮೈಸೂರು ರಮಾನಂದ್, ಲಯ ಕೋಕಿಲ ಸೇರಿದಂತೆ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ನಟಿಸಿದ್ದಾರೆ. ಈ ಚಿತ್ರ ಶ್ರೀ ಭರಣಿ ಮೂವಿ ಮೇಕರ್ ಬ್ಯಾನರ್ನಡಿಯಲ್ಲಿ ತಯಾರಾಗಿದೆ. ಚಿತ್ರಕ್ಕೆ ಕೆ.ಎಂ ಇಂದ್ರ ಹಾಗೂ ಧನಶೀಲನ್ ಸಂಗೀತವಿದೆ.