ಹಂಸಲೇಖ ಕುಚ್ಚಿಕು ಪ್ರೀತಿ


Team Udayavani, Jun 25, 2018, 10:56 AM IST

kuchiku-kuchiku.jpg

“ಕುಚ್ಚಿಕೂ ಕುಚ್ಚಿಕು’ ಎಂಬ ಸಿನಿಮಾವೊಂದು ಆರಂಭವಾಗಿರುವ ಬಗ್ಗೆ ನೆನಪಿರಬಹುದು. ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಕನಸಿನ ಸಿನಿಮಾವದು. ಈ ಸಿನಿಮಾ ಮೂಲಕ ಅವರ ಪುತ್ರಿ ನಕ್ಷತ್ರ (ದೀಪ್ತಿ) ಅವರನ್ನು ಕನ್ನಡ ಪರಿಚಯಿಸುವ ಉದ್ದೇಶವೂ ಇತ್ತು. ಸಿನಿಮಾವೆಲ್ಲ ಮುಗಿಸಿ ಬಿಡುಗಡೆಯ ಕನಸು ಕಾಣುತ್ತಿದ್ದರು. ಆದರೆ ಬಾಬು ಅವರ ಅಗಲಿಕೆಯಿಂದ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿತ್ತು.

ಈಗ “ಕುಚ್ಚಿಕೂ ಕುಚ್ಚಿಕು’ ಚಿತ್ರ ಬಿಡುಗಡೆಗೆ ಬಂದಿದೆ. ಜುಲೈ 6 ರಂದು ಬಿಡುಗಡೆಯಾಗುತ್ತಿದ್ದು, ಸುಮಾರು ಆರು ವರ್ಷಗಳ ಹಿಂದೆ ಆರಂಭವಾದ ಚಿತ್ರ ಈಗ ಬಿಡುಗಡೆಯ ಹಂತಕೆ ಬಂದ ಸಂಭ್ರಮ ಚಿತ್ರತಂಡದ್ದು. ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಸಂಗೀತ ನೀಡಿದ್ದಾರೆ. ಈ ಸಿನಿಮಾ ಮೇಲೆ ಅವರಿಗೊಂದು ವಿಶೇಷವಾದ ಪ್ರೀತಿ ಇದೆ.

ಅದಕ್ಕೆ ಎರಡು ಕಾರಣ ಮೊದಲನೇಯದು ನಿರ್ದೇಶಕ ಡಿ.ಬಾಬು ಅವರ ಜೊತೆಗಿನ ಆತ್ಮೀಯತೆಯಾದರೆ, ಮತ್ತೂಂದು ಕಾರಣ ಈ ಸಿನಿಮಾದ ಸಂಭಾವನೆಯಿಂದ ಅವರ ಮಗಳ ಮದುವೆಯ ಸಭಾಂಗಣ ಬುಕ್ಕಿಂಗ್‌ಗೆ ಅಡ್ವಾನ್ಸ್‌ ಮಾಡಿದ್ದು. ಇತ್ತೀಚೆಗೆ ನಡೆದ “ಕುಚ್ಚಿಕೂ ಕುಚ್ಚಿಕು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ಹಂಸಲೇಖ ಬಿಚ್ಚಿಟ್ಟರು. 

“ನನಗೆ ಯಜಮಾನವರು (ರವಿಚಂದ್ರನ್‌) ಅವಕಾಶ ಕೊಟ್ಟರೆ, ಸಿನಿಮಾದ ಕೋಚ್‌ ಆಗಿ ಕೆಲಸ ಮಾಡಿದವರು ಬಾಬು ಅವರು. ಸಿನಿಮಾದ ಪರಿಭಾಷೆ ಸೇರಿದಂತೆ ಹಲವು ವಿಷಯವನ್ನು ಕಲಿಸಿಕೊಟ್ಟವರು ಬಾಬು ಅವರು. ಈಗ ಅವರ “ಕುಚ್ಚಿಕೂ ಕುಚ್ಚಿಕು’ ಚಿತ್ರ ಬಿಡುಗಡೆಯಾಗುತ್ತಿದೆ. ಇದು ಅವರ ಕನಸಿನ ಚಿತ್ರ ಕೂಡಾ. ಇನ್ನು ಈ ಚಿತ್ರ ಮೇಲೆ ನನಗೆ ಮತ್ತೂಂದು ಸೆಂಟಿಮೆಂಟ್‌ ಇದೆ.

ಅದೇನೆಂದರೆ ನನ್ನ ಮಗಳ ಮದುವೆಗೆ ಹಾಲ್‌ ಬುಕ್‌ ಮಾಡಲು ಬ್ಯಾಂಕ್‌ನಿಂದ ಎರಡು ಲಕ್ಷ ಡ್ರಾ ಮಾಡಿ ಅಡ್ವಾನ್ಸ್‌ ಕೊಡಲು ಮ್ಯಾನೇಜರ್‌ಗೆ ಹೇಳಿದ್ದೆ. ಅಷ್ಟೊತ್ತಿಗೆ ಈ ಸಿನಿಮಾದ ನಿರ್ಮಾಪಕ ಕೃಷ್ಣಮೂರ್ತಿ ಬಂದು, ಐದು ಲಕ್ಷ ಕೊಟ್ಟು ನಮ್ಮ ಸಿನಿಮಾಕ್ಕೆ ನೀವು ಸಂಗೀತ ನೀಡಬೇಕು ಎಂದರು. ಕಟ್‌ ಮಾಡಿದರೆ, ಮ್ಯಾನೇಜರ್‌ಗೆ ಬ್ಯಾಂಕ್‌ನಿಂದ ಡ್ರಾ ಮಾಡಬೇಡ.

ಇದನ್ನೇ ಅಡ್ವಾನ್ಸ್‌ ಮಾಡಿ ಎಂದು ಕೃಷ್ಣಮೂರ್ತಿಯವರು ಕೊಟ್ಟ ಹಣವನ್ನು ಹಾಲ್‌ಗೆ ಕೊಟ್ಟೆ. ಅಂದು ನನ್ನ ಮಗಳ ಮದುವೆಯ ಹಾಲ್‌ಗೆ ಅಡ್ವಾನ್ಸ್‌ ಮಾಡಿದ್ದು “ಕುಚ್ಚಿಕ್ಕು ಕುಚ್ಚಿಕು’ ನಿರ್ಮಾಪಕರ ದುಡ್ಡನ್ನು. ನನ್ನ ಮಗಳು-ಅಳಿಯ ಚೆನ್ನಾಗಿದ್ದಾರೆ. ಅದೇ ರೀತಿ ಈ ಸಿನಿಮಾ ಕೂಡಾ ಚೆನ್ನಾಗಿ ಆಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಸಿನಿಮಾಕ್ಕೆ ಶುಭಕೋರಿದರು. 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.