ಹರಿಪ್ರಿಯ ಸೆಲ್ಫೀ ಮಾತು


Team Udayavani, Aug 16, 2018, 11:55 AM IST

haripriya.jpg

ನಟಿ ಹರಿಪ್ರಿಯಾ ಈಗ ಫ‌ುಲ್‌ ಹ್ಯಾಪಿ ಮೂಡ್‌ನ‌ಲ್ಲಿದ್ದಾರೆ. ಅದಕ್ಕೆ ಕಾರಣ, “ಲೈಫ್ ಜೊತೆ ಒಂದ್‌ ಸೆಲ್ಫೀ.’ ಈ ವರ್ಷ ಬಿಡುಗಡೆಯಾಗುತ್ತಿರುವ ಹರಿಪ್ರಿಯಾ ಅಭಿನಯದ ನಾಲ್ಕನೇ ಚಿತ್ರವಿದು. ವರ್ಷದ ಆರಂಭದಲ್ಲಿ ತೆಲುಗು ನಟ ಬಾಲಕೃಷ್ಣ ಅವರೊಂದಿಗೆ ನಟಿಸಿದ “ಜೈ ಸಿಂಹ’ ಬಿಡುಗಡೆಯಾದ ಮೊದಲ ಚಿತ್ರ. ಆ ಬಳಿಕ “ಕನಕ’, “ಸಂಹಾರ’ ಚಿತ್ರಗಳು ತೆರೆಕಂಡವು. ಈಗ “ಲೈಫ್ ಜೊತೆ ಒಂದ್‌ ಸೆಲ್ಫೀ’ ಆಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಅಲ್ಲಿಗೆ ಹರಿಪ್ರಿಯಾ ಅಭಿನಯಿಸಿರುವ ನಾಲ್ಕು ಚಿತ್ರಗಳು ಈ ಎಂಟು ತಿಂಗಳಲ್ಲಿ ತೆರೆಗೆ ಬಂದಿವೆ. ಈ ವರ್ಷ ಮುಗಿಯುವ ಹೊತ್ತಿಗೆ ಇನ್ನೂ ಎರಡ್ಮೂರು ಚಿತ್ರಗಳು ಬಿಡುಗಡೆಯಾದರೂ ಅಚ್ಚರಿ ಇಲ್ಲ. ಅಂದಹಾಗೆ, ಹರಿಪ್ರಿಯಾ “ಲೈಫ್ ಜೊತೆ ಒಂದ್‌ ಸೆಲ್ಫೀ’ ಚಿತ್ರದ ಬಗ್ಗೆ ಸಾಕಷ್ಟು ಎಕ್ಸೆಟ್‌ ಆಗಿದ್ದಾರೆ. ಯಾಕೆ ಎಂಬ ಪ್ರಶ್ನೆಗೆ, ಇಷ್ಟು ದಿನ ಹರಿಪ್ರಿಯ ತನ್ನ ಗುಣದ ವಿರುದ್ಧ ಇರುವ ಪಾತ್ರ ನಿರ್ವಹಿಸುತ್ತಿದ್ದರು.

ಬಹುತೇಕ ಚಿತ್ರಗಳಲ್ಲಿ ಗಂಭೀರವಾಗಿಯೋ ಅಥವಾ ಸಿಂಪಲ್‌ ಹುಡುಗಿಯಾಗಿಯೋ ಕಾಣಿಸಿಕೊಳ್ಳುತ್ತಿದ್ದರು. ಆದರೆ, “ಲೈಫ್ ಜೊತೆ ಒಂದ್‌ ಸೆಲ್ಫೀ’ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಿಯಲ್‌ನಲ್ಲಿ ಹೇಗಿರುತ್ತಾರೋ, ಅದೇ ರೀತಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರಂತೆ. ಹಾಗಂತ ಖುಷಿಯಿಂದ ಹೇಳಿಕೊಳ್ಳುವ ಹರಿಪ್ರಿಯಾ, “ನಾನು ಹೇಗೆ ಅನ್ನೋದು ನನ್ನ ಕ್ಲೋಸ್‌ ಫ್ರೆಂಡ್ಸ್‌ಗಷ್ಟೇ ಗೊತ್ತು ಸದಾ ಜಾಲಿಯಾಗಿ, ಖುಷಿ ಖುಷಿಯಾಗಿರುತ್ತೇನೆ.

ರಿಯಲ್‌ನಲ್ಲಿ ಜಾಲಿಯಾಗಿರುವಂತೆ, ಈ ಚಿತ್ರದಲ್ಲೂ ಹಾಗೇ ಇದ್ದೇನೆ. ನನ್ನ ಗುಣದಂತೆಯೇ ಚಿತ್ರದ ಪಾತ್ರವೂ ಇದೆ.  ಹಾಗಾಗಿ ನನಗೆ ಈ ಚಿತ್ರದಲ್ಲಿ ಕೆಲಸ ಮಾಡೋಕೆ ಯಾವುದೂ ಕಷ್ಟ ಎನಿಸಲಿಲ್ಲ’ ಎಂದು ಜೋರು ನಗೆ ಬೀರುತ್ತಾರೆ. ಇನ್ನು, ದಿನಕರ್‌ ತೂಗುದೀಪ ಅವರು ಹರಿಪ್ರಿಯ ಪಾಲಿಗೆ ಲಕ್ಕಿ ಅಂತೆ. ಅದಕ್ಕೆ ಕಾರಣ ಹೇಳುವ ಹರಿಪ್ರಿಯಾ, ನನ್ನ ಅಭಿನಯದ “ಉಗ್ರಂ’ ಮತ್ತು “ನೀರ್‌ದೋಸೆ’ ಚಿತ್ರದ ವಿತರಣೆಯನ್ನೂ ದಿನಕರ್‌ ತೂಗುದೀಪ ಮಾಡಿದ್ದರು. ಆ ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಈಗ ಅವರ ನಿರ್ದೇಶನದಲ್ಲೇ ಅಭಿನಯಿಸಿದ್ದೇನೆ.

ಅದೊಂಥರ ಅದೃಷ್ಟ. ಇದೂ ಹಿಟ್‌ ಆಗುತ್ತೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಹರಿಪ್ರಿಯಾ. ಈ ಚಿತ್ರದಲ್ಲಿ ಅವರದು ಸ್ವತಂತ್ರವಾಗಿ ಓಡಾಡಿಕೊಂಡು, ಹ್ಯಾಪಿಯಾಗಿರುವ ಪಾತ್ರವಂತೆ. ಸದ್ಯಕ್ಕೆ ಈ ಚಿತ್ರದ ಬಿಡುಗಡೆ ಎದುರು ನೋಡುತ್ತಿರುವ ಹರಿಪ್ರಿಯಾ, ಸದ್ಯದಲ್ಲೇ ಹೊಸ ಸಿನಿಮಾ ಬಗ್ಗೆ ಅನೌನ್ಸ್‌ ಮಾಡಲಿದ್ದಾರೆ. ಅವರ ಅಭಿನಯದ “ಸೂಜಿದಾರ’ ಬಿಡುಗಡೆಗೆ ರೆಡಿಯಾಗುತ್ತಿದೆ. “ಕಥಾಸಂಗಮ’, “ಬೆಲ್‌ಬಾಟಮ್‌’ ಚಿತ್ರದಲ್ಲೂ ನಟಿಸಿದ್ದಾರೆ. “ಕುರುಕ್ಷೇತ್ರ’ ಚಿತ್ರದ ಹಾಡಲ್ಲೂ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಈ ವರ್ಷ ಬ್ಯಾಕ್‌ ಟು ಬ್ಯಾಕ್‌ ಅವರ ನಟನೆಯ ಚಿತ್ರಗಳು ಬಿಡುಗಡೆಯಾಗಲಿವೆ.

ಟಾಪ್ ನ್ಯೂಸ್

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.