ಹೀಗೊಂದು ದಿನ ಸಿಂಧುಲೋಕನಾಥ್‌!ಹೊಸಬರ ಕೈಯಲ್ಲಿ  ಅನ್ಕಟ್‌ ಚಿತ್ರ


Team Udayavani, Aug 17, 2017, 5:43 PM IST

Heegondu-Dina-3.jpg

ನಟಿ ಸಿಂಧು ಲೋಕನಾಥ್‌ “ಲವ್‌ ಇನ್‌ ಮಂಡ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಬೇರೆಲ್ಲೂ ಸುದ್ದಿಯಾಗಿರಲಿಲ್ಲ. ಬಹಳ ದಿನಗಳ ಬಳಿಕ ಸುದ್ದಿಯಾಗಿದ್ದು, “ಲೂಸ್‌ ಕನೆಕ್ಷನ್‌’ ಎಂಬ ವೆಬ್‌ಸೀರಿಸ್‌ನಲ್ಲಿ. ಅದು ಬಿಟ್ಟರೆ, ಈಗ ಮತ್ತೂಂದು ಹೊಸ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ ಸಿಂಧುಲೋಕನಾಥ್‌. ಹೌದು, “ಹೀಗೊಂದು ದಿನ’ ಎಂಬ ಹೊಸಬರ ಚಿತ್ರದಲ್ಲಿ ನಟಿಸಿದ್ದಾರೆ ಸಿಂಧು. ಈ ಸಿನಿಮಾ ಮೂಲಕ ವಿಕ್ರಮ್‌ ಯೋಗಾನಂದ್‌ ನಿರ್ದೇಶಕರಾಗಿದ್ದಾರೆ. ವಿಕಾಸ್‌ ಕಥೆ ಬರೆದಿದ್ದಾರೆ. ಚಂದ್ರಶೇಖರ್‌ ಎಂಬುವವರು ನಿರ್ಮಾಪಕರು. ಸಿಂಧು ಲೋಕನಾಥ್‌ ಹೇಳುವಂತೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಅದರಲ್ಲೂ ಅನ್‌ಕಟ್‌ ಫಿಲ್ಮ್ ಎಂಬುದು ಅವರ ಮಾತು.

 ಚಿತ್ರದ ಕಥೆ ಎರಡು ಗಂಟೆಯಲ್ಲಿ ನಡೆಯುವಂಥದ್ದು. ಸಿನಿಮಾ ಕೂಡ ಎರಡು ಗಂಟೆ ಅವಧಿಯಲ್ಲೇ ಇರುವಂಥದ್ದು. ಒಬ್ಬ ಹುಡುಗಿ ಒಂದು ಗುರಿ ಇಟ್ಟುಕೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ, ಆ ಮಧ್ಯೆ ಅವಳಿಗೆ ಏನೆಲ್ಲಾ ಎದುರಾಗುತ್ತೆ, ಅವಳ ಕೆಲಸ ಆಗುತ್ತೋ, ಇಲ್ಲವೋ, ಅಲ್ಲಿ ಆಕೆ ಏನೇನು ಕಲಿಯುತ್ತಾಳೆ ಅನ್ನೋದೇ ಕಥೆ’ ಎಂದು ವಿವರ ಕೊಡುತ್ತಾರೆ ಸಿಂಧುಲೋಕನಾಥ್‌.

ಇಲ್ಲಿ “ಅನ್‌ಕಟ್‌ ಮೂವಿ’ ಅಂದರೆ, ಒಂದು ಸೀನ್‌ ಅನ್ನು ಒಂದೇ ಶಾಟ್‌ನಲ್ಲಿ ತೆಗೆದಿರೋದು. ಹಾಗಂತ ಇಡೀ ಸಿನಿಮಾವನ್ನು ಒಂದೇ ಶಾಟ್‌ನಲ್ಲಿ ತೆಗೆಯಲಾಗಿದೆ ಅಂದುಕೊಳ್ಳುವಂತಿಲ್ಲ. ಆ ಸೀನ್‌ನಲ್ಲಿ ಬರುವ ಕಲಾವಿದರಾಗಲಿ, ಕ್ಯಾಮೆರಾ ಆಗಲಿ, ಎಲ್ಲೂ ಆ್ಯಂಗಲ್‌ ಚೇಂಜ್‌ ಆಗೊದಿಲ್ಲ. ಕ್ಯಾಮೆರಾ ಕಟ್‌ ಆಗಲ್ಲ, ಡೈಲಾಗ್‌ ಕಟ್‌ ಆಗಲ್ಲ. ಸಿನಿಮಾ ನೋಡಿದರೆ, ಇಡೀ ಸಿನಿಮಾನೇ ಒಂದೇ ಶಾಟ್‌ನಲ್ಲಿ ತೆಗೆದಂತೆ ಭಾಸವಾಗುತ್ತೆ. ಅನ್‌ಕಟ್‌ ಮೂವಿ ಅಂತ ಉದಾಹರಿಸುವುದಾದರೆ, ಮನೆಯಿಂದ ರೆಡಿಯಾಗಿ ಅಪ್ಪ,ಅಮ್ಮನ ಮಾತನಾಡಿಸಿ ಹೊರಗೆ ಬಂದು, ಅಲ್ಲೆಲ್ಲಾ ಸುತ್ತಾಡಿ, ಬಸ್‌ ಸ್ಟಾಪ್‌ಗೆ ಹೋಗಿ, ಬಸ್‌ ಹತ್ತೋದು, ಇಳಿಯೋದು, ಮಾತಾಡೋದು ಇವೆಲ್ಲವನ್ನೂ ಒಂದೇ ಶಾಟ್‌ನಲ್ಲಿ ತೆಗೆಯೋದು. ಇದಕ್ಕಾಗಿ ಸಾಕಷ್ಟು ರಿಹರ್ಸಲ್‌ ಮಾಡಲಾಗಿದೆ.

ಅಂದಹಾಗೆ, ಚಿತ್ರ ಕಥೆ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ನಡೆಯಲಿದೆ. ಹಾಗಾಗಿ  ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಶೂಟಿಂಗ್‌ ನಡೆಯುತ್ತಿತ್ತು. ಕಥೆ ಕೂಡ ಆ ವಾತಾವರಣ ಬಯಸುತ್ತಿತ್ತು. ಆ ಟ್ರಾಫಿಕ್‌, ಆ ಲೈಟ್ಸ್‌ ಎಲ್ಲವೂ ಪೂರಕವಾಗಿರುತ್ತಿತ್ತು. ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಗಿರಿಜಾ ಲೋಕೇಶ್‌, ಪದ್ಮಜಾ ರಾವ್‌, ಮಿತ್ರ, ಗುರುಪ್ರಸಾದ್‌ ಮತ್ತು “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ’ ಪ್ರವೀಣ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಾಯಕ, ನಾಯಕಿ ಅಂತೇನಿಲ್ಲ. ಕಥೆಯೇ ಎಲ್ಲವೂ ಆಗಿದೆ ಎನ್ನುವ ಸಿಂಧುಲೋಕನಾಥ್‌, ಚಿತ್ರಕ್ಕೆ ಅಭಿಲಾಶ್‌ ಗುಪ್ತ ಸಂಗೀತ ನೀಡಿದ್ದಾರೆ. ಮೂರು ಮಾಂಟೇಜ್‌ ಸಾಂಗ್ಸ್‌ ಇದೆ. ನಿರ್ದೇಶಕರೇ ಇಲ್ಲಿ ಕ್ಯಾಮೆರಾ ಹಿಡಿದಿದ್ದಾರೆ ಎನ್ನುತ್ತಾರೆ.

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.