- Saturday 07 Dec 2019
ಹಿಂದಿ “ಬೆಲ್ ಬಾಟಮ್’
ಕನ್ನಡದ ರೀಮೇಕ್ ಅಲ್ಲ ಎಂದ ಅಕ್ಷಯ್ ಕುಮಾರ್
Team Udayavani, Nov 12, 2019, 6:05 AM IST
ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿದ “ಬೆಲ್ ಬಾಟಮ್’ ಚಿತ್ರ ಹಿಟ್ಲಿಸ್ಟ್ ಸೇರಿದ್ದು ನಿಮಗೆ ಗೊತ್ತೇ ಇದೆ. ಇದರ ಜೊತೆಗೆ ಚಿತ್ರದ ಡಬ್ಬಿಂಗ್, ರೀಮೇಕ್ ರೈಟ್ಸ್ ಬೇರೆ ಬೇರೆ ಭಾಷೆಗಳಿಗೂ ಮಾರಾಟವಾಗುವ ಮೂಲಕ ಚಿತ್ರತಂಡ ಖುಷಿಯಾಗಿತ್ತು. ಇನ್ನು, ಚಿತ್ರ ಹಿಂದಿಗೂ ರೀಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆಂಬ ಸುದ್ದಿ ಜೋರಾಗಿ ಹಬ್ಬಿತ್ತು. ಅದಕ್ಕೆ ಕಾರಣ ಅಕ್ಷಯ್ ಕುಮಾರ್ ಮಾಡುತ್ತಿರುವ “ಬೆಲ್ ಬಾಟಮ್’ ಚಿತ್ರ.
ಹೌದು, ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ, ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳನ್ನು ಕೊಡುತ್ತಿರುವ ಅಕ್ಷಯ್ ಕುಮಾರ್ “ಬೆಲ್ ಬಾಟಮ್’ ಎಂಬ ಚಿತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಅನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದರು. ಇದನ್ನು ನೋಡಿದ ಅನೇಕರು ಇದು ಕನ್ನಡ ರೀಮೇಕ್ ಎಂದೇ ಭಾವಿಸಿದ್ದರು. ಈಗ ಈ ಗೊಂದಲಕ್ಕೆ ಸ್ವತಃ ಅಕ್ಷಯ್ ಕುಮಾರ್ ತೆರೆ ಎಳೆದಿದ್ದಾರೆ.
ಪೋಸ್ಟರ್ ನೋಡಿ ಸಾಕಷ್ಟು ಮಂದಿ ಅಕ್ಷಯ್ ಕುಮಾರ್ ಕಾಮೆಂಟ್ ಮಾಡಿದ್ದು, ಅದರಲ್ಲೊಬ್ಬರು, “ಇದು ಕನ್ನಡ ಚಿತ್ರ ಬೆಲ್ ಬಾಟಮ್ನ ರೀಮೇಕಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅಕ್ಷಯ್ ಕುಮಾರ್, “ಇದು ಯಾವುದೇ ಚಿತ್ರದ ರೀಮೇಕ್ ಅಲ್ಲ. ಪಕ್ಕಾ ಸ್ವಮೇಕ್ ಸಿನಿಮಾ. ನೈಜ ಘಟನೆಯನ್ನಾಧರಿಸಿದ ಸಿನಿಮಾ’ ಎನ್ನುವ ಮೂಲಕ ಕನ್ನಡ ಬೆಲ್ ಬಾಟಮ್ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಅಂದಹಾಗೆ, ಅಕ್ಷಯ್ ಕುಮಾರ್ ನಟನೆಯ “ಬೆಲ್ ಬಾಟಮ್’ ಚಿತ್ರ ಕೂಡಾ 80ರ ದಶಕದ ಕಥೆಯನ್ನು ಹೊಂದಿದ್ದು, ಹೊಸ ಬಗೆಯ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳುತ್ತಿದ್ದಾರಂತೆ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಆಪರೇಶನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕ ನಟನಾಗಿ ಅಭಿನಯಿಸಿರುವ “ಸಾರ್ವಜನಿಕರಿಗೆ ಸುವರ್ಣಾವಕಾಶ” ಸಿನಿಮಾದ ಟ್ರೇಲರ್ ಬಿಡುಗಡೆಗೊಂಡ ಎರಡು ದಿನಗದಲ್ಲಿಯೇ...
-
ಹೊಸ ವರ್ಷ ಶುರುವಾಗಲು ಇನ್ನೇನು ಮೂರು ವಾರಗಳು ಬಾಕಿ ಉಳಿದಿವೆ. ಹೀಗಾಗಿ, ಈ ವರ್ಷವೇ ತಮ್ಮ ಚಿತ್ರಗಳನ್ನು ಬಿಡಗುಡೆ ಮಾಡಬೇಕು ಎಂಬ ಕಾರಣಕ್ಕೆ ಈಗಾಗಲೇ ಹಲವು ಕನ್ನಡ...
-
ನಟ ಪ್ರಜ್ವಲ್ ದೇವರಾಜ್ ಅಭಿನಯದ ಮುಂಬರುವ ಚಿತ್ರ "ಅರ್ಜುನ್ ಗೌಡ'ದ ಕೆಲಸಗಳು ಭರದಿಂದ ಸಾಗಿದೆ. ಇನ್ನು "ಅರ್ಜುನ್ ಗೌಡ' ಚಿತ್ರತಂಡಕ್ಕೆ ಖಡಕ್ ವಿಲನ್ ಆಗಿ...
-
ಪಯಣದಲ್ಲಿ ಸಾಗೋ ಕಥೆಗಳೆಂದರೆ ಪ್ರೇಕ್ಷಕರಲ್ಲೊಂದು ಆಕರ್ಷಣೆ ಸದಾ ಇದ್ದೇ ಇರುತ್ತದೆ. ಬದುಕೂ ಒಂದು ಪಯಣದ ಸಾಮ್ಯತೆ ಹೊಂದಿರೋ ಅಚ್ಚರಿಯಾಗಿರುವ ಕಾರಣದಿಂದ ಇಂಥಾ...
-
ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಬ್ರೂ ಚಿತ್ರ ಇದೇ ಡಿಸೆಂಬರ್ ೬ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸುಮನ್ ನಗರ್ಕರ್ ನಿರ್ಮಾಣ ಮಾಡಿ ಪ್ರಧಾನ...
ಹೊಸ ಸೇರ್ಪಡೆ
-
ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ...
-
ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ)...
-
ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ...
-
ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನ ಸಹಿತ ಇತರೇ ನಾಲವರು ದುಷ್ಕರ್ಮಿಗಳಿಂದ ಗುರುವಾರದಂದು ಹಲ್ಲೆಗೊಳಗಾಗಿ ಬಳಿಕ ಬೆಂಕಿ ಹಚ್ಚಲ್ಪಟ್ಟಿದ್ದ...
-
ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ...