ಮಾನವೀಯ “ದರ್ಶನ’
ಕಿಡ್ನಿ ವೈಫಲ್ಯಗೊಂಡ ಪುಟ್ಟ ಅಭಿಮಾನಿ ಭೇಟಿ ಮಾಡಿದ ದಾಸ
Team Udayavani, Jan 13, 2020, 7:00 AM IST
ದರ್ಶನ್ ಅವರ ಸಹಾಯ ಗುಣ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಬಲಗೈಯಲ್ಲಿ ಕೊಟ್ಟಿದ್ದು ತಮ್ಮ ಎಡಗೈಗೂ ಗೊತ್ತಿರದ ಹಾಗೆ ಸಹಾಯ ಮಾಡುತ್ತ ಬಂದವರು. ಅವರೆಂದೂ ತಾವು ಮಾಡಿದ ಸಹಾಯದ ಬಗ್ಗೆ ಹೇಳಿಕೊಂಡವರಲ್ಲ. ಬದಲಾಗಿ, ಅವರಿಂದ ಸಹಾಯ ಪಡೆದ ಅದೆಷ್ಟೋ ಮಂದಿ, ಅವರನ್ನು ಗುಣಗಾನ ಮಾಡಿದ ಉದಾಹರಣೆ ಸಾಕಷ್ಟಿದೆ. ತಾವು ಎಷ್ಟೇ ಬಿಝಿ ಇದ್ದರೂ, ಕೆಲಸದ ಒತ್ತಡದಲ್ಲಿದ್ದರೂ, ದರ್ಶನ್ ಮಾತ್ರ ತಮ್ಮನ್ನು ನೋಡಲು ಬರುವ ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡಿದವರಲ್ಲ.
ಅದರಲ್ಲೂ, ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ಅಭಿಮಾನಿಗಳು ತಮ್ಮನ್ನು ನೋಡಲು ಬಯಸಿದರೆ, ಖಂಡಿತ ದರ್ಶನ್ ಅವರು ಹಾಜರಾಗುತ್ತಾರೆ ಅಥವಾ ಅವರನ್ನು ತಮ್ಮ ಬಳಿಯೇ ಕರೆಸಿಕೊಳ್ಳುತ್ತಾರೆ. ಈಗ ಅಂತಹ ಮಾನವೀಯ ಗುಣದ ಮತ್ತೂಂದು ಮುಖ ಇಲ್ಲಿದೆ. ಕಿಡ್ನಿ ವೈಫಲ್ಯದಿಂದ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಬಾಲಕ ರತನ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಆ ಪುಟ್ಟ ಅಭಿಮಾನಿ, ದರ್ಶನ್ ಅವರನ್ನೊಮ್ಮೆ ನೋಡಿ ಮಾತನಾಡಿಸಬೇಕು, ಥ್ಯಾಂಕ್ಸ್ ಕೊಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾನೆ.
ಆ ಪುಟ್ಟ ಅಭಿಮಾನಿಯ ಆಸೆಯ ವಿಷಯ ದರ್ಶನ್ ಅವರಿಗೂ ತಲುಪಿದೆ. ತಡಮಾಡದೆ, ದರ್ಶನ್ ಅವರು, ಆ ಪುಟ್ಟ ಅಭಿಮಾನಿ ರತನ್ ಅವರನ್ನು ಕರೆಸಿ, ಭೇಟಿ ಮಾಡುವ ಮೂಲಕ ಆ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಒಂದಷ್ಟು ಮಾತನಾಡಿ, ಅವನನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದಲ್ಲದೆ, ಕೆಲ ಹೊತ್ತು ಹರಟಿದ್ದಾರೆ. ಆ ಹುಡುಗನ ಮೊಗದಲ್ಲಿ ಮಂದಹಾಸ ಮೂಡಿಸಿ, ಶುಭಹಾರೈಸಿದ್ದಾರೆ ದರ್ಶನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ