ತಲೆಲಿ ಬುದ್ಧಿ ಇಲ್ಲ ಅಂತ ಅಂದ್ಕೊಂಡ್ರ: Watch
Team Udayavani, Sep 4, 2018, 3:47 PM IST
“ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಎಲ್ಲರ ಹೊಟ್ಟೆ ಹುಣ್ಣಾಗಿಸಿದ್ದ ರಾಜೇಶ್ ಬಿ ಶೆಟ್ಟಿ ಅಭಿನಯದ “ಮಹಿರಾ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪೋಲೀಸ್ ತನಿಖಾಧಿಕಾರಿಯಾಗಿ ರಾಜೇಶ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಅಲ್ಲದೇ ತಮ್ಮ ಮೊದಲ ಲುಕ್ಗೆ ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಮೊದಲ ಚಿತ್ರ “ಒಂದು ಮೊಟ್ಟೆಯ ಕಥೆ’ಯಲ್ಲಿ ಹೆಣ್ಣು ಸಿಗದೆ ಪರದಾಡೋ ಹಾಸ್ಯ ಪಾತ್ರದಿಂದ ಪೂರ್ತಿ ತಮ್ಮ ಮ್ಯಾನರಿಸಂನೇ ಬದಲಾಯಿಸಿ “ಮಹಿರಾ’ ಸಿನಿಮಾಲ್ಲಿ ವಿಭಿನ್ನ ಲುಕ್ನಲ್ಲಿ ಬುದ್ಧಿವಂತ ಪೋಲೀಸ್ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
“ಮಹಿರಾ’ ಸಂಸ್ಕೃತ ಮೂಲದ ಪದವಾಗಿದ್ದು ಗಟ್ಟಿ ಮಹಿಳೆ ಅಥವಾ ಬಲಿಷ್ಠ ಮಹಿಳೆ ಅಂತಾ ಅರ್ಥ. ಶಾಂತಿಯುತ ಜೀವನ ನಡೆಸುವ ತಾಯಿ-ಮಗಳ ಜೀವನದಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಶಾಂತಿ ಭಂಗವಾಗುತ್ತದೆ. ಹಾಗೂ ಅನಪೇಕ್ಷಿತ ಬೆದರಿಕೆಗಳ ಸರಣಿ ಬರಲು ಪ್ರಾರಂಭವಾದಾಗ ತಾಯಿ ಅದೆಲ್ಲವನ್ನೂ ಮೀರಿ ತನ್ನ ಮಗಳ ರಕ್ಷಣೆಗೆ ಹೇಗೆ ಹೋರಾಡುತ್ತಾಳೆ ಎನ್ನುವ ಕಥಾಹಂದರ ಚಿತ್ರದಲ್ಲಿದೆ.
ತಮ್ಮ ಮೊದಲ ನಿರ್ದೇಶನದಲ್ಲಿ ಮಹೇಶ್ ಗೌಡ ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದ್ದು, ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ವರ್ಜಿನಿಯಾ ರೊಡ್ರಿಗಸ್ ಮತ್ತು ಚೈತ್ರ ಆಚಾರ್ ತಾಯಿ ಮತ್ತು ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನೀಲೀಮಾ ರಾವ್ ಮತ್ತು ರಾಕೇಶ್ ಯುಪಿ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ, ಆಶಿಕ್ ಕುಸುಗೊಟ್ಟಿ ಸಂಕಲನ, ರಜಾಕ್, ಮಹೇಶ್ ಗೌಡ, ಸಂದೀಪ ಸುಂಕದ ಸಂಭಾಷಣೆ ಸೇರಿದಂತೆ ಜಾಕ್ಪಾಟ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯಕ್ಕೆ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್ ಕನಸು: ಇಂದು ತೆರೆಗೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್ ಅಂತ್ಯಕ್ರಿಯೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!