ನಾನು ಕನ್ನಡದ ಹುಡುಗಿ


Team Udayavani, Jul 11, 2018, 11:05 AM IST

sanam.jpg

ಅದೆಷ್ಟೋ ಮಂದಿ ಕನ್ನಡ ಹುಡುಗಿಯರು ಬೇರೆ ಭಾಷೆಗಳಲ್ಲಿ ನಾಯಕಿಯರಾಗಿದ್ದಾರೆ. ಅದಕ್ಕೆ ಕಾರಣ ಹಲವು. ಅನೇಕರು ಕನ್ನಡದಲ್ಲಿ ಪ್ರಯತ್ನಿಸಿ, ಅವಕಾಶ ಸಿಗದೇ ಪರಭಾಷೆಗೆ ಹೋಗಿರಬಹುದು. ಇನ್ನು ಕೆಲವರು ಪರಭಾಷೆಯಲ್ಲಿ ಮಿಂಚಿ ಕನ್ನಡಕ್ಕೆ ಬರಬೇಕೆಂಬ ಲೆಕ್ಕಾಚಾರ ಹಾಕಿರುತ್ತಾರೆ. ಈಗ ಕನ್ನಡದ ಹುಡುಗಿಯಾಗಿ ಪರಭಾಷೆಯಲ್ಲಿ ಕೆರಿಯರ್‌ ಆರಂಭಿಸಿದ ನಾಯಕಿಯೊಬ್ಬಳಿಗೆ ಈಗ ಕನ್ನಡದಲ್ಲಿ ಅವಕಾಶ ಸಿಕ್ಕಿದೆ.

ಈ ವಾರ ಆಕೆ ನಟಿಸಿದ ಸಿನಿಮಾ ಬಿಡುಗಡೆಯಾಗುತ್ತಿದೆ. ಅಷ್ಟಕ್ಕೂ ಯಾರು ಆ ನಾಯಕಿ ಎಂದರೆ ಸನಮ್‌ ಶೆಟ್ಟಿ ಹೆಸರು ಹೇಳಬೇಕಾಗುತ್ತದೆ. ಸನಮ್‌ ಶೆಟ್ಟಿ ನಾಯಕಿಯಾಗಿ ನಟಿಸಿರುವ ಚೊಚ್ಚಲ ಕನ್ನಡ ಚಿತ್ರ “ಅಥರ್ವ’ ಈ ವಾರ ತೆರೆಕಾಣುತ್ತಿದೆ. ಸಹಜವಾಗಿಯೇ ಸನಮ್‌ ಖುಷಿಯಾಗಿದ್ದಾರೆ. “ನಾನು ಮೂಲತಃ ಕನ್ನಡದ ಹುಡುಗಿ. ಬೆಂಗಳೂರಿನವಳು. ಆದರೆ, ಬಹಳಷ್ಟು ಮಂದಿ ನಾನು ಪರಭಾಷಾ ಹುಡುಗಿ ಎಂದು ಭಾವಿಸಿದ್ದಾರೆ.

ನಾನು ಕೆರಿಯರ್‌ ಆರಂಭಿಸಿದ್ದು ಚೆನ್ನೈನಲ್ಲಿ. ಆದರೆ, ಕನ್ನಡದ ಹುಡುಗಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ನನಗಿತ್ತು. ಆದರೆ, ಇಲ್ಲಿ ನನ್ನ ಯಾರನ್ನು ಸಂಪರ್ಕಿಸಬೇಕೆಂಬ ಬಗ್ಗೆ ಗೊತ್ತಿರಲಿಲ್ಲ. ಹೀಗಿರುವಾಗ ಸಿಕ್ಕಿದ್ದು “ಅಥರ್ವ’. ನಿರ್ದೇಶಕ ಅರುಣ್‌ ಹೇಳಿದ ಕಥೆ ಇಷ್ಟವಾಗಿ ಈ ಸಿನಿಮಾ ಒಪ್ಪಿಕೊಂಡೆ. ಅರ್ಜುನ್‌ ಸರ್ಜಾ ಅವರ ಸಂಬಂಧಿ ಲಾಂಚ್‌ ಆಗುತ್ತಿರುವ ಸಿನಿಮಾವಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಒಳ್ಳೆಯ ಸಿನಿಮಾ ಮೂಲಕ ಲಾಂಚ್‌ ಆಗುತ್ತಿರುವ ಖುಷಿ ಇದೆ’ ಎನ್ನುತ್ತಾರೆ ಸನಮ್‌. ಸನಮ್‌ “ಅಥರ್ವ’ ಒಪ್ಪಿಕೊಳ್ಳಲು ಕಾರಣ, ಕಥೆ ಹಾಗೂ ನಿರ್ದೇಶಕರು ಮೊದಲು ತೋರಿಸಿದ ಫ‌ಸ್ಟ್‌ಲುಕ್‌ ಟೀಸರ್‌ ಅಂತೆ. ಅವೆರಡರಿಂದ ಇಂಪ್ರಸ್‌ ಆಸ ಸನಮ್‌ ಖುಷಿಯಿಂದಲೇ ಸಿನಿಮಾಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟರಂತೆ. “ಅಥರ್ವ’ ಚಿತ್ರವನ್ನು ಜನ ಯಾಕೆ ನೋಡಬೇಕು ಎಂಬ  ಪ್ರಶ್ನೆಗೂ ಸನಮ್‌ ಉತ್ತರಿಸುತ್ತಾರೆ.

“ಸಂಪೂರ್ಣ ಹೊಸಬರು ತುಂಬಾ ಶ್ರದ್ಧೆಯಿಂದ ಮಾಡಿರುವ ಸಿನಿಮಾವಿದು. ಯಾವುದೇ ವಿಷಯಕ್ಕೂ ರಾಜಿಯಾಗದೇ ನೀಟಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇನ್ನು, ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದೆ. ಜೊತೆಗೆ ಚಿತ್ರದ ಹಾಡುಗಳು ಸೊಗಸಾಗಿವೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಸನಮ್‌ ಈಗಾಗಲೇ ಕನ್ನಡದಲ್ಲಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ನಾಯಕಿ ಹಾಗೂ ವಿಲನ್‌ ಮಧ್ಯೆ ನಡೆಯುವ ಕಥೆಯಂತೆ.

ಈ ಚಿತ್ರಕ್ಕೆ ಆಯ್ಕೆಯಾಗಲು ಕಾರಣ ವಿಲನ್‌ ಪಾತ್ರಧಾರಿ ಯಶವಂತ್‌ ಶೆಟ್ಟಿಯಂತೆ. “ಅಥರ್ವ’ ಚಿತ್ರದಲ್ಲಿ ಯಶವಂತ್‌ ವಿಲನ್‌ ಆಗಿ ನಟಿಸಿದ್ದು, ತಮ್ಮ ಹೊಸ ಚಿತ್ರಕ್ಕೂ ಅವರು ಸನಮ್‌ ಅವರನ್ನು ರೆಫ‌ರ್‌ ಮಾಡಿದರಂತೆ. ಇದರ ಹೊರತಾಗಿ ಸನಮ್‌ ತಮಿಳಿನಲ್ಲಿ “ಮ್ಯಾಗಿ’ ಎಂಬ ನಾಯಕಿ ಪ್ರಧಾನ ಚಿತ್ರ ಮಾಡುತ್ತಿದ್ದಾರೆ. 

ಟಾಪ್ ನ್ಯೂಸ್

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.