ನಾನು ಹೀರೋ ಮೆಟಿರೀಯಲ್‌ ಅಲ್ಲ


Team Udayavani, Jun 12, 2018, 10:59 AM IST

danish-sait.jpg

ದಾನಿಶ್‌ ಸೇಠ್ ಮತ್ತೆ ಬಂದಿದ್ದಾರೆ!  ಹೌದು, “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಬಳಿಕ ದಾನಿಶ್‌ ಸೇಠ್ ಸೀದಾ ವಿದೇಶಕ್ಕೆ ಹಾರಿದ್ದರು. ಅಲ್ಲಿಗೆ ಹೋಗಿದ್ದು ಒಂದಷ್ಟು ಕಲಿಕೆಗಾಗಿ. ಈಗ ಪುನಃ ಹಿಂದಿರುಗಿರುವ ದಾನಿಶ್‌ ಸೇಠ್, ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಸೋಲ್ಡ್‌’ ಎಂದು ಹೆಸರಿಡಲಾಗಿದೆ. ಪ್ರೇರಣ ಈ ಚಿತ್ರದ ನಿರ್ದೇಶಕರು. ಇನ್ನು, ಅಗರ್‌ವಾಲ್‌ ಮತ್ತು ದೀಪಂ ಕೋಯ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದು ಇವರ ಮೊದಲ ಚಿತ್ರ.

ನ್ಯೂಯಾರ್ಕ್‌ನಲ್ಲಿ ಓದಿದ್ದ ಇವರು ಕನ್ನಡದಲ್ಲಿ ಒಂದೊಳ್ಳೆಯ ಚಿತ್ರ ಮಾಡಬೇಕು ಎಂಬ ಉತ್ಸಾಹದಿಂದ “ಸೋಲ್ಡ್‌’ ಚಿತ್ರಕ್ಕೆ ಅಣಿಯಾಗಿದ್ದಾರೆ. ದಾನಿಶ್‌ ಸೇಠ್ ಅವರ ಪ್ರಕಾರ, ಇದೊಂದು ತುಂಬಾ ಗಂಭೀರವಾಗಿರುವ ಸಿನಿಮಾವಂತೆ. ಅವರೇ ಹೇಳುವಂತೆ, “ನಾನು ನನ್ನ ಲೈಫ‌ಲ್ಲಿ ಸದಾ ಹಾಸ್ಯಪ್ರಜ್ಜೆ ಇಟ್ಟುಕೊಂಡವನು. ಆದರೆ, ಈ ಚಿತ್ರದಲ್ಲಿ ತುಂಬಾನೇ ಗಂಭೀರವಾಗಿರುವಂತಹ ಪಾತ್ರವಿದೆ. ನನಗೆ ಇದೊಂದು ಅನುಭವ ಅಂದುಕೊಂಡಿದ್ದೇನೆ.

ಮೊದಲ ಚಿತ್ರ ಬೇರೆ ಜಾನರ್‌ನಲ್ಲಿತ್ತು. ಅಲ್ಲಿ ಕಾಮಿಡಿಯಾಗಿ ವಕೌìಟ್‌ ಆಗಿತ್ತು. ಆದರೆ, ಇದು ಬೇರೆ ರೀತಿಯ ಚಿತ್ರವಾದ್ದರಿಂದ ನನಗೊಂದು ಹೊಸ ಪ್ರಯೋಗ ಅಂದುಕೊಂಡು ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ಅವರು. ಈ ಚಿತ್ರಕ್ಕೆ ಕಾವ್ಯಾಶೆಟ್ಟಿ ನಾಯಕಿ. ಎಲ್ಲವೂ ಹೊಸದಾಗಿರಲಿದೆ ಎಂದು ವಿವರ ಕೊಡುವ ದಾನಿಶ್‌ ಸೇಠ್, “ಕಳೆದ ನಾಲ್ಕು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡದಲ್ಲಿ ಹೊಸಬಗೆಯ ಚಿತ್ರಗಳು ಬರುತ್ತಿವೆ.

ಆದರೆ, ಎಲ್ಲವೂ ಕಮರ್ಷಿಯಲ್‌ ಚಿತ್ರಗಳಾಗಿಯೇ ಇರಬೇಕೆಂದಿಲ್ಲ. ಆ ನಿಟ್ಟಿನಲ್ಲಿ ಸಾಗುವ ಚಿತ್ರವಿದು. ಇಲ್ಲಿ ಥ್ರಿಲ್ಲಿಂಗ್‌ ಅಂಶಗಳು ಇರಲಿವೆ. ಇಲ್ಲಿ ಎಲ್ಲವೂ ಕಾವ್ಯಾ ಶೆಟ್ಟಿಯದ್ದೇ. ನಾನು ಕೇವಲ ಅವರೊಂದಿಗಿರುತ್ತೇನಷ್ಟೇ. ಹಾಗಂತ ನಾನಿಲ್ಲಿ ಹೀರೋ ಅಲ್ಲ. ಹೀರೋ ಮೆಟಿರೀಯಲ್‌ ಕೂಡ ಅಲ್ಲ. ಆ ಕ್ವಾಲಿಟಿ ನನ್ನಲಿದೆಯೋ ಗೊತ್ತಿಲ್ಲ. ರೆಗ್ಯುಲರ್‌ ಸಿನಿಮಾಗಿಂತ ಕೊಂಚ ವಿಭಿನ್ನವಾಗಿರುವ “ಸೋಲ್ಡ್‌’ ಚಿತ್ರ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ’ ಎನ್ನುತ್ತಾರೆ ದಾನಿಶ್‌.

ಹಾಗೆ ನೋಡಿದರೆ, “ಹಂಬಲ್‌…’ ಚಿತ್ರದ ನಂತರ ಸಾಕಷ್ಟು ಕಾಮಿಡಿ ಕಥೆಗಳು ಬಂದವಂತೆ. ಆದರೆ, ದಾನಿಶ್‌ ಮಾತ್ರ ಹೊಸದೇನನ್ನೋ ಬಯಸುತ್ತಿದ್ದರಂತೆ. “ಸೋಲ್ಡ್‌’ ಅಂಥದ್ದೊಂದು ಹೊಸತನ ಹೊಂದಿದೆ. ಇನ್ನು, ಪನ್ನಗಭರಣ ಜೊತೆಗೊಂದು ಮಾತುಕತೆ ನಡೆಯುತ್ತಿದೆ. ನನ್ನ ಚಿತ್ರ ಬಂದು ಒಂದು ವರ್ಷವೂ ಆಗಿಲ್ಲ. ಆಗಲೇ, ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ.

ನನಗೆ ಹೀರೋ ಆಗಬೇಕು, ಸೆಲೆಬ್ರೆಟಿ ಅನಿಸಿಕೊಳ್ಳಬೇಕೆಂಬ ಆಸೆ ಇಲ್ಲ. ಈ ರೀತಿಯ ಕಥೆ ಇದ್ದರೆ ಮಾತ್ರ ಆಯ್ಕೆ ಮಾಡಿಕೊಳ್ತೀನಿ. ಆದರೂ, ಇಲ್ಲಿ ಗಂಭೀರವಾದ ಕಥೆ, ಪಾತ್ರ ಇದೆ. ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಬಗ್ಗೆ ಕುತೂಹಲವೂ ಇದೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ಕೊಡುತ್ತಾರೆ ದಾನಿಶ್‌ ಸೇಠ್.

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.