ತಾಯಿಗೆ ತಕ್ಕ ಮಗನ ನಿರ್ದೇಶಕ ಬದಲು


Team Udayavani, Jan 31, 2018, 8:00 PM IST

Thayige-Takka-Maga-(2).jpg

ಅಜೇಯ್‌ ರಾವ್‌ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ನಿರ್ದೇಶಕ ಮತ್ತೂಮ್ಮೆ ಬದಲಾಗಿದ್ದಾರೆ. ಮುಂಚೆ ರಘು ಕೋವಿ ಎನ್ನುವವರು ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಆ ನಂತರ ನಿರ್ದೇಶಕರು ಕಾರಣಾಂತರಗಳಿಂದ ಬದಲಾಗಿ, ಆ ಜಾಗಕ್ಕೆ ವೇದ್‌ ಗುರು ಎನ್ನುವವರು ಬಂದರು. ಈಗ ಮತ್ತೂಮ್ಮೆ ನಿರ್ದೇಶಕರು ಬದಲಾಗಿದ್ದು, ಈಗ ಶಶಾಂಕ್‌ ಅವರೇ ಚಿತ್ರದ ನಿರ್ದೇಶನವನ್ನು ಮಾಡಲಿದ್ದಾರೆ.

ಹೌದು, ಇದಕ್ಕೂ ಮುನ್ನ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಶಶಾಂಕ್‌ ಬರೀ ನಿರ್ಮಾಪಕರಾಗಿದ್ದರು. ಈಗ ಅವರೇ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನಡೆದಿದೆ. ಇನ್ನು ಚಿತ್ರೀಕರಣವಾಗುವುದಷ್ಟೇ ಬಾಕಿ ಇದ್ದು, ಫೆಬ್ರವರಿ ಆರರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇಷ್ಟಕ್ಕೂ ನಿರ್ದೇಶಕರು ಬದಲಾಗಿದ್ದು ಏಕೆ ಎಂಬ ಪ್ರಶ್ನೆ ಬರಬಹುದು.

ಈ ಕುರಿತು ಉತ್ತರಿಸುವ ಶಶಾಂಕ್‌, “ಆರೋಗ್ಯದ ಸಮಸ್ಯೆಯಿಂದ ವೇದ್‌ಗುರು ಅವರಿಗೆ ಚಿತ್ರದ ಬಗ್ಗೆ ಗಮನ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಬೇರೆ ಯಾರಿಂದ ಚಿತ್ರ ಮುಂದುವರೆಸುವುದು ಎಂದು ಯೋಚಿಸುತ್ತಿದ್ದಾಗ, ಪುನೀತ್‌ ಅಭಿನಯದಲ್ಲಿ ನಾನು ನಿರ್ದೇಶಿಸಬೇಕಿದ್ದ ಚಿತ್ರ ಸ್ವಲ್ಪ ಮುಂದಕ್ಕೆ ಹೋಯಿತು. ಹಾಗಾಗಿ ನಾನೇ ಈ ಚಿತ್ರವನ್ನು ಕೈಗೆತ್ತಿಕೊಂಡೆ. ಈ ಚಿತ್ರವನ್ನು ಮುಗಿಸಿದ ನಂತರ, ಪುನೀತ್‌ ರಾಜಕುಮಾರ್‌ ಅಭಿನಯದ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇನೆ’ ಎನ್ನುತ್ತಾರೆ ಶಶಾಂಕ್‌.

ಈ ಚಿತ್ರವನ್ನು ನಿರ್ದೇಶಿಸಬೇಕಾಗಿ ಬಂದಿದ್ದು ಅನಿವಾರ್ಯ ಎನ್ನುತ್ತಾರೆ ಶಶಾಂಕ್‌. “ನನ್ನ ನಿರ್ಮಾಣದ ಮೊದಲ ಚಿತ್ರ ಇದು. ನೀವೇ ಏಕೆ ನಿರ್ದೇಶಿಸಬಾರದು ಎಂದು ನನ್ನ ಸ್ನೇಹಿತರು ಮುಂಚಿನಿಂದ ಹೇಳುತ್ತಿದ್ದರು. ಆದರೆ, ಆ ಸಂದರ್ಭದಲ್ಲಿ ಆ ಯೋಚನೆ ಇರಲಿಲ್ಲ. ಈಗ ಆ ಚಿತ್ರಕ್ಕೂ ನಿರ್ದೇಶಕರಿರಲಿಲ್ಲ, ಹಾಗೆಯೇ ನನ್ನ ಚಿತ್ರವೂ ಮುಂದಕ್ಕೆ ಹೋಯಿತು. ಹಾಗಾಗಿ ಅನಿರೀಕ್ಷಿತವಾಗಿ ನಾನೇ ನಿರ್ದೇಶಕನಾಗಬೇಕಾಯಿತು.

ಇದೊಂದು ಕಾಕತಾಳೀಯ ಅಷ್ಟೇ’ ಎನ್ನುತ್ತಾರೆ ಶಶಾಂಕ್‌. ಚಿತ್ರದಲ್ಲಿ ಅಜೇಯ್‌ ರಾವ್‌, ಆಶಿಕಾ ಮತ್ತು ಸುಮಲತಾ ಅಂಬರೀಶ್‌ ಅವರ ಜೊತೆಗೆ ಲೋಕಿ, ಕೃಷ್ಣ ಹೆಬ್ಟಾಳ್‌, ಅಚ್ಯುತ್‌ ಕುಮಾರ್‌ ಮತ್ತು ಜಹಾಂಗೀರ್‌ ನಟಿಸುತ್ತಿದ್ದಾರೆ. ಈ ಪೈಕಿ “ಭಜರಂಗಿ’ ಲೋಕಿ ಮತ್ತು ಕೃಷ್ಣ ಹೆಬ್ಟಾಳ್‌ ಅವರದ್ದು ನೆಗೆಟಿವ್‌ ಪಾತ್ರಂತಗಳಂತೆ. ಚಿತ್ರಕ್ಕೆ ಶೇಖರ್‌ ಚಂದ್ರು ಅವರ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಅವರ ಸಂಗೀತವಿದೆ.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.