ಬದುಕು ಬದಲಿಸಿದ ಕಾಂತಾರ; ಮೂಗುತಿ ಸುಂದರಿಯ ಮನದ ಮಾತು


Team Udayavani, Oct 21, 2022, 2:38 PM IST

ಬದುಕು ಬದಲಿಸಿದ ಕಾಂತಾರ; ಮೂಗುತಿ ಸುಂದರಿಯ ಮನದ ಮಾತು

ಸದ್ಯ ದಕ್ಷಿಣದಿಂದ ಉತ್ತರದವರೆಗೂ ಎಲ್ಲರ ಬಾಯಲ್ಲೂ ಇರುವ ಹೆಸರು “ಕಾಂತಾರ’. ಕನ್ನಡ ಚಿತ್ರವೊಂದು ತನ್ನ ಕಂಟೆಂಟ್‌ನಿಂದ ಇಡೀ ದೇಶದ ಜನರ ಮನ ಗೆದ್ದಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಭರವಸೆಯ ನಟಿಯೂ ದೊರೆತಿದ್ದಾರೆ. ಅವರು ಸಪ್ತಮಿ ಗೌಡ. “ಕಾಂತಾರ’ ಮೂಲಕ ಪ್ರೇಕ್ಷಕರ ಮನ ಕದ್ದ ಮೂಗುತಿ ಸುಂದರಿ ಸಪ್ತಮಿ ಗೌಡ ಚಿತ್ರದ ಯಶಸ್ಸು, ಮುಂದಿನ ಕನಸು, ಆಫ‌ರ್ ಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

“ಕಾಂತಾರ’ದ ದೊಡ್ಡ ಯಶಸ್ಸಿನ ಬಗ್ಗೆ ಏನು ಹೇಳುತ್ತೀರಿ?

ಈ ಚಿತ್ರದ ಸಕ್ಸಸ್‌ ಗೆ ಕಾರಣ ಕರ್ನಾಟಕದ ಜನ. ಕನ್ನಡ ಜನತೆ ಇತರ ಭಾಷೆ ಗೆಳೆಯರಿಗೆ ಚಿತ್ರವನ್ನು ತೋರಿಸಲು ಆರಂಭಿಸಿದ ಮೇಲೆ ಸಿನಿಮಾ ಅವರ ಭಾಷೆಗೆ ಡಬ್‌ ಮಾಡಲು ಡಿಮ್ಯಾಂಡ್‌ ಮತ್ತಷ್ಟು ಜಾಸ್ತಿಯಾಯಿತು. ಈ ಮೊದಲು ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಅನ್ನುವ ಯೋಚನೆ ಇರಲಿಲ್ಲ. ಅಷ್ಟು ಪ್ರೀತಿ, ಅಭಿಮಾನ ಬೇರೆ ರಾಜ್ಯಗಳಿಂದ ಬಂದ ಮೇಲೆ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಿದ್ದು.

ಈಗ ನೀವು ಪ್ಯಾನ್‌ ಇಂಡಿಯಾ ಹೀರೋಯಿನ್‌?

ನನ್ನ ಕೆರಿಯರ್‌ನಲ್ಲಿ ಇಷ್ಟು ಬೇಗ ಇಂತಹ ಚಿತ್ರ ಸಿಗುತ್ತೆ ಎಂದು ಭಾವಿಸಿರಲಿಲ್ಲ. ಕನ್ನಡದಲ್ಲೇ ಇಂತಹ ದೊಡ್ಡ ಸಿನಿಮಾ ಸಿಗುತ್ತೆ ಅಂತಲೂ ಅಂದು ಕೊಂಡಿರಲಿಲ್ಲ. ಅದರಲ್ಲೂ ಪ್ಯಾನ್‌ ಇಂಡಿಯಾ ಹೀರೋಯಿನ್‌ ಆಗಿರೋದು ನನ್ನ ಅದೃಷ್ಟ ಹಾಗೂ ದೇವರ ಆಶೀರ್ವಾದ. ಸಿನಿಮಾ ಹೇಗೆ ತೆಗೆದುಕೊಂಡು ಹೋಗುತ್ತಿದೆಯೋ ಹಾಗೆ ನಾವು ಹೋಗುತ್ತಿದ್ದೇವೆ ಅಷ್ಟೆ. ತುಂಬಾ ಖುಷಿ ಇದೆ. ಜನರ ಪ್ರೀತಿ, ಅಭಿಮಾನವೇ ಎಲ್ಲದಕ್ಕೂ ಕಾರಣ.

ನಿಮ್ಮ ಪಾತ್ರಕ್ಕೆ ಸಿಕ್ಕ ಪ್ರಶಂಸೆ?

ಸಾಕಷ್ಟು ಜನ ಲೀಲಾ ಅನ್ನುವ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ನಾನು ಚಿತ್ರದಲ್ಲಿ ಮಂಗಳೂರು ಕನ್ನಡ ಮಾತನಾಡಿರುವ ಕುರಿತು ಸಾಕಷ್ಟು ಜನರಿಂದ ಪ್ರಸಂಶೆ ಸಿಕ್ಕಿದೆ. “ನೀವು ಬೆಂಗಳೂರಿಗರು ಅಂತ ಅನಿಸೋದಿಲ್ಲ. ಅಲ್ಲೇ ಹುಟ್ಟಿ ಬೆಳದವರ ರೀತಿ ಮಾತನಾಡಿದ್ದೀರಿ’ ಎಂಬ ಮಾತುಗಳು ಕೇಳಿಬಂತು. ನಾನು ಕೂಡಾ ಚಿತ್ರದಲ್ಲಿ ಭಾಷೆ ಎಲ್ಲೂ ಮಿಸ್‌ ಆಗಬಾರದು, ನಾನು ಮಂಗಳೂರು ಹುಡುಗಿಯಾಗಿಯೇ ಕಾಣಿಸಿಕೊಳ್ಳಬೇಕು ಎಂದು ನಡೆಸಿದ ತಯಾರಿ ಸಾರ್ಥಕವಾಯಿತು ಎನಿಸಿತ್ತು.

ಸಾಕಷ್ಟು ಆಫ‌ರ್ ಬಂದಿರಬೇಕಲ್ಲ?

ಸದ್ಯ ಸಾಕಷ್ಟು ಆಫ‌ರ್ ನನ್ನೆದುರಿಗೆ ಇದೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ನನಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾನು ಕೆಲವೊಬ್ಬರ ಬಳಿ ಮಾತನಾಡಿ ಅವರ ಸಲಹೆ ಪಡೆಯಬೇಕಿದೆ. ಅವರೆಲ್ಲಾ ನನಗೆ ಹೇಳಿದ್ದು, ಒಂದು ಸ್ವಲ್ಪ ಸಮಯ ಕಾಯಿ, ನಂತರ ನಿರ್ಧಾರ ತಗೋ ಅಂತ. ಹಾಗಾಗಿ ಯೋಚಿಸಿ ಹೆಜ್ಜೆ ಇಡಬೇಕು ಎಂದು ನಿರ್ಧರಿಸಿದ್ದೇನೆ. ಬಂದ ಸ್ಕ್ರಿಪ್ಟ್, ಅವಕಾಶಗಳ ಕುರಿತು ಆಲೋಚಿಸಿ ಮುಂದುವರೆಯುವ ನಿರ್ಧಾರ ಮಾಡಿದ್ದೇನೆ. ಗಡಿಬಿಡಿಯಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ಕಾಂತಾರದ ಪಾತ್ರಕ್ಕಾಗಿ ಒಂದೂವರೆ ವರ್ಷ ಕಾದೆ ಮುಂದಿನ ಪಾತ್ರಕ್ಕೆ ದಿನಗಳು, ವಾರ, ತಿಂಗಳು ಆಗುತ್ತೋ ಗೊತ್ತಿಲ್ಲ. ಒಳ್ಳೆಯದಕ್ಕಾಗಿ ಕಾಯುತ್ತೇನೆ.

ಅನ್ಯ ಭಾಷೆಗಳಿಂದ ಆಫ‌ರ್‌ ಬಂದಿದೆಯಾ?

ಬೇರೆ ಭಾಷೆಗಳಿಂದಲೂ ಆಫ‌ರ್‌ಗಳು ಬಂದಿವೆ. ಆದರೆ ನನಗೆ ಒಂದು ಚಿಕ್ಕ ಸ್ವಾರ್ಥ ಕನ್ನಡದಲ್ಲೇ ಅತಿ ಹೆಚ್ಚು ಚಿತ್ರ ಮಾಡಬೇಕು ಎಂಬುದು. ಕನ್ನಡದಲ್ಲೇ ಭಿನ್ನ ಭಿನ್ನ ಪಾತ್ರಗಳನ್ನು ಮಾಡಬೇಕು ಅನ್ನುವ ಆಸೆ. ಹಾಗೇ ನನಗೆ ಕನ್ನಡ, ಇಂಗ್ಲೀಷ್‌ ಬಿಟ್ಟರೆ ಮತ್ಯಾವ ಭಾಷೆಯೂ ಕೂಡಾ ಅಷ್ಟು ಚೆನ್ನಾಗಿ ಬರೋದಿಲ್ಲ. ಬೇರೆ ಭಾಷೆ ಮೇಲೆ ಹಿಡಿತಾ ಇಲ್ಲ. ಬೇರೆ ಭಾಷೆಗಳಲ್ಲಿ ತುಂಬಾ ಒಳ್ಳೆಯ ಆಫ‌ರ್‌ ಬಂದರೆ ಯೋಚನೆ ಮಾಡ್ತಿನಿ.

ವಾಣಿ ಭಟ್ಟ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.