ಜಗತ್‌ ಕಿಲಾಡಿಗೆ ಹಣವೇ ಎಲ್ಲ … ಕಿಲಾಡಿ ಹುಡುಗಿಗೆ ಪ್ರೀತಿಯೇ ಎಲ್ಲ .


Team Udayavani, Jun 8, 2018, 1:38 PM IST

jagath-kiladi135.jpg

“ಜಗತ್‌ ಕಿಲಾಡಿ’ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಜಗ್ಗೇಶ್‌. ಯಾಕೆಂದರೆ, ಈ ಹಿಂದೆ ಜಗ್ಗೇಶ್‌ “ಜಗತ್‌ ಕಿಲಾಡಿ’ ಚಿತ್ರದಲ್ಲಿ ನಟಿಸಿದ್ದರು. ಚಾರುಲತಾ ಇತರರು ಅಭಿನಯಿಸಿದ್ದ ಈ ಚಿತ್ರವು ಯಶಸ್ವಿಯಾಗಿತ್ತು. ಈಗ ಅದೇ ಶೀರ್ಷಿಕೆ ಇಟ್ಟುಕೊಂಡು ಸದ್ದಿಲ್ಲದೆ ಸಿನಿಮಾ ಮುಗಿಸಿದೆ ಹೊಸಬರ ತಂಡ. ಈ “ಜಗತ್‌ ಕಿಲಾಡಿ’ ಚಿತ್ರಕ್ಕೆ ನಿರಂಜನ್‌ಶೆಟ್ಟಿ ಹೀರೋ. ಹಾಗಂತ ಇದು ಸ್ವಮೇಕ್‌ ಚಿತ್ರವಲ್ಲ.

ತಮಿಳಿನ “ಸತುರಂಗ ವೆಟ್ಟೈ’ ಚಿತ್ರದ ಅವತರಣಿಕೆ. ಆದರೂ, ಕನ್ನಡತನಕ್ಕೆ ಮೋಸ ಆಗದಂತೆ ಚಿತ್ರ ಮಾಡಿದ್ದಾರೆ ನಿರ್ದೇಶಕ ಆರವ್‌ ಬಿ.ಧೀರೇಂದ್ರ. ಇವರಿಗಿದು ಮೊದಲ ಚಿತ್ರ. ಇನ್ನು, ಈ ಹಿಂದೆ “ಧ್ವನಿ’ ಚಿತ್ರ ನಿರ್ಮಿಸಿದ್ದ ಲಯನ್‌. ಆರ್‌.ರಮೇಶ್‌ ಬಾಬು ಅವರಿಗೆ ಇದು ಎರಡನೇ ನಿರ್ಮಾಣದ ಚಿತ್ರ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದೆ.

 ಒಂದು ಹಾಡನ್ನು ಮಾತ್ರ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ, ಈಗಾಗಲೇ ಬೆಂಗಳೂರು, ಬಳ್ಳಾರಿ, ಕೊಳ್ಳೆಗಾಲ ಸೇರಿದಂತೆ ಇತರೆಡೆ ಚಿತ್ರೀಕರಣ ಮುಗಿಸಿದೆ ಇದೊಂದು ಮನರಂಜನೆಯ ಚಿತ್ರ. ಜೊತೆಗೆ ಸೆಂಟಿಮೆಂಟ್‌ಗೆ ಹೆಚ್ಚು ಜಾಗ ಕಲ್ಪಿಸಲಾಗಿದೆ. ತಾಯಿ ಹಾರೈಕೆಗೆ ಹಣವಿಲ್ಲದೆ ಅಮ್ಮನನ್ನು ಕೆಳದುಕೊಂಡಾಗ, ನಾಯಕ ಬದುಕು ಹೇಗಿರುತ್ತೆ ಎಂಬುದನ್ನು ಅರ್ಥ ಮಾಡಿಕೊಂಡು,

ಕಷ್ಟಪಟ್ಟು ದುಡಿದ ಹಣಕ್ಕಿಂತ ಶ್ರೀಮಂತರ ಹಣ ಕದ್ದು, ಹೇಗೆ ತನ್ನ ಬದುಕಿನ ಶೈಲಿ ಬದಲಿಸಿಕೊಳ್ಳುತ್ತಾನೆ ಅನೋ°ದು ಕಥೆ. ಆ ಬಳಿಕ ಅವನ ಲೈಫ‌ಲ್ಲಿ ಎಂಟ್ರಿಯಾಗುವ ಹುಡುಗಿ, ಜೀವನದಲ್ಲಿ ಹಣಕ್ಕಿಂತ ಪ್ರೀತಿ, ಸಂಬಂಧ, ಬಾಂಧವ್ಯ ಮುಖ್ಯ ಎಂಬುದನ್ನು ತಿಳಿಹೇಳಿ ಹೇಗೆ ಅವನನ್ನು ಅಡ್ಡದಾರಿಯಿಂದ ಸರಿದಾರಿಗೆ ತರುತ್ತಾಳೆಂಬುದನ್ನು ಕುತೂಹಲವಾಗಿ ತೋರಿಸುವ ಪ್ರಯತ್ನ ಮಾಡಿದ್ದಾಗಿ ಹೇಳುತ್ತಾರೆ ನಿರ್ದೇಶಕರು.

ನಾಯಕ ನಿರಂಜನ್‌ ಶೆಟ್ಟಿ ಅವರಿಗೆ ಇಲ್ಲಿ ಸಾಕಷ್ಟು ಚಾಲೆಂಜಿಂಗ್‌ ಪಾತ್ರ ಸಿಕ್ಕಿದೆಯಂತೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇಲ್ಲಿ ಹೊಸತನ್ನು ಕಲಿತು, ಒಂದಷ್ಟು ಹೊಸ ಅನುಭವವೂ ಆಗಿದೆ ಎಂಬುದು ಅವರ ಮಾತು. ಅವರಿಲ್ಲಿ ಹದಿಮೂರು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಂತೆ. ಇಲ್ಲಿ ಗೆಳೆತನಕ್ಕೆ ಒಂದು ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲೇ ಕಾಣಬೇಕೆಂಬುದು ಅವರ ಮಾತು.

ಅಮಿತಾ ಕುಲಾಲ್‌ ಇಲ್ಲಿ ಮುಗ್ಧ ಹುಡುಗಿಯಾಗಿ, ಅಡ್ಡದಾರಿಯಲ್ಲಿ ಸಾಗುವ ನಾಯಕನಿಗೆ ಬುದ್ಧಿ ಮಾತು ಹೇಳಿ, ಸರಿಪಡಿಸುವಂತಹ ಹುಡುಗಿಯಾಗಿ ನಟಿಸಿದ್ದಾರಂತೆ. ಉಳಿದಂತೆ ಇಲ್ಲಿ ಮೈತ್ರಿ ಜಗದೀಶ್‌, ಮಹೇಶ್‌, ಸುಚೇಂದ್ರ ಪ್ರಸಾದ್‌, ರಂಗಾಯಣ ರಘು, ಜೈ ಜಗದೀಶ್‌, ಮೈಕೋ ನಾಗರಾಜ್‌, ಕಡ್ಡಿ ವಿಶ್ವ, ಪವನ್‌ಕುಮಾರ್‌, ಸುನೇತ್ರಾ ಪಂಡಿತ್‌, ವಿಜಯ್‌ ಕೌಂಡಿನ್ಯ ಇತರರು ನಟಿಸಿದ್ದಾರೆ.

ಗಿರಿಧರ್‌ ದಿವಾನ್‌ ಇಲ್ಲಿ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅವರಿಗೆ ಇದು 13 ನೇ ಚಿತ್ರ ಎಂಬುದು ವಿಶೇಷ. ಸಿನಿಟೆಕ್‌ ಸೂರಿ ಛಾಯಾಗ್ರಹಣವಿದೆ. ವಿನಾಯಕರಾಮ್‌ ಕಲಗಾರು ಹಾಗು ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ತ್ರಿಭುವನ್‌ ನೃತ್ಯ ಸಂಯೋಜಿಸಿದ್ದಾರೆ.  ಶ್ಯಾಡ್ರಕ್‌ ಸಾಲೋಮನ್‌ ಹಿನ್ನೆಲೆ ಸಂಗೀತವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ನಲ್ಲಿ “ಜಗತ್‌ ಕಿಲಾಡಿ’ ದರ್ಶನ ಮಾಡಬಹುದು.

ಟಾಪ್ ನ್ಯೂಸ್

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.