“8 ಎಂಎಂ’ ಯಶಸ್ಸಿಗೆ ಜಪಹೋಮ ಮಾಡಿಸಿದ ಜಗ್ಗೇಶ್
Team Udayavani, Nov 16, 2018, 3:22 PM IST
ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ “8 ಎಂಎಂ’ ಚಿತ್ರ ಇಂದು ರಾಜ್ಯಾದ್ಯಂದ ತೆರೆಕಂಡಿದ್ದು, ಚಿತ್ರದ ಗೆಲುವಿಗಾಗಿ ಜಗ್ಗೇಶ್ ದೇವರ ಮೊರೆ ಹೋಗಿದ್ದಾರೆ. ಹೌದು! ಶ್ರೀ ಗುರು ರಾಘವೇಂದ್ರಸ್ವಾಮಿಯ ಪರಮ ಭಕ್ತರಾದ ನಟ ಜಗ್ಗೇಶ್ ಕೆ.ಜಿ. ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಇಂದು ಮುಂಜಾನೆ 5 ಘಂಟೆಗೆ ಶ್ರೀ ಲಕ್ಷೀ ನಾರಾಯಣ ಪ್ರೀತ್ಯರ್ಥ ಜಪಹೋಮ ಮಾಡಿಸಿದ್ದಾರೆ.
“8 ಎಂಎಂ’ ಚಿತ್ರದ ಯಶಸ್ಸಿಗಾಗಿ ಚಿತ್ರಮಂದಿರದಲ್ಲೇ ಪೂಜೆ ಮಾಡಿಸಿದ್ದು, ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಸರ್ವೆಜನಃ ಸುಖಿನೋಭವಂತು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.
ಶುಭೋದಯ ಕರುನಾಡು…
ಇಂದು ಬೆಳಿಗ್ಗೆ 5ಘಂಟೆಗೆ ತ್ರಿವೇಣಿ ಚಿತ್ರಮಂದಿರದಲ್ಲಿ #8mm ಶುಭ ಆರಂಭಕ್ಕೆ ಶ್ರೀಲಕ್ಷ್ಮಿನಾರಾಯಣ ಪ್ರೀತ್ಯರ್ಥ ಜಪಹೋಮ..
ಸರ್ವೆಜನಃಸುಖಿನೋಭವಂತು.. pic.twitter.com/Te4tGe5Ub1— ನವರಸನಾಯಕ ಜಗ್ಗೇಶ್ (@Jaggesh2) November 16, 2018
ಇನ್ನು “ನೀರ್ ದೋಸೆ’ ನಂತರ ನವರಸ ನಾಯಕ ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “8 ಎಂಎಂ’ ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದಾರೆ. ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್ಲೈನ್ ವೆಂಕಟೇಶ್, ಮಯೂರಿ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!