ಮರ್ಡರ್‌ ಮಿಸ್ಟರಿ ವೆನಿಲ್ಲಾ; ಕ್ಯಾಪ್ನೋಫೋಬಿಯಾ ಕುರಿತು ಸಿನಿಮಾ


Team Udayavani, Feb 15, 2018, 1:20 PM IST

Vanilla_(118).jpg

ಜಯತೀರ್ಥ ಅವರಿಗೆ “ವೆನಿಲ್ಲಾ’ ಚಿತ್ರದ ಅವಕಾಶ ಬಂದಾಗ ಅವರು ಯೋಚಿಸಿದ್ದು ಒಂದೇ ವಿಚಾರವಂತೆ. ಅದು ಹೊಸ ನಾಯಕನನ್ನು ಇಟ್ಟುಕೊಂಡು ಯಾವ ತರಹದ ಸಿನಿಮಾ ಮಾಡೋದೆಂದು. ಆರಂಭದಲ್ಲಿ ಸಾಕಷ್ಟು ಗೊಂದಲದಲ್ಲಿದ್ದ ಜಯತೀರ್ಥ ಅವರು ಕೊನೆಗೂ ಒಂದು ಕಥೆ ಫೈನಲ್‌ ಮಾಡಿ, ಈಗ ಸಿನಿಮಾ ಮಾಡಿ ಮುಗಿಸಿಬಿಟ್ಟಿದ್ದಾರೆ. ಅದು ಮರ್ಡರ್‌ ಮಿಸ್ಟ್ರಿ. ಇಡೀ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತದೆಯಂತೆ. ಜೊತೆಗೆ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ ಎಂಬುದು ಜಯತೀರ್ಥ ಅವರ ಮಾತು. 

“ಹೊಸ ನಾಯಕ ಬಂದಾಗ ಆತನಿಗೆ ಯಾವ ತರಹದ ಸಿನಿಮಾ ಮಾಡೋದು ಎಂಬ ಗೊಂದಲವಿತ್ತು. ಈಗ ಮರ್ಡರ್‌ ಮಿಸ್ಟ್ರಿ ಮಾಡಿದ್ದೇನೆ. ಕ್ಯಾಪ್ನೋಫೋಬಿಯಾ ಎಂಬ ಕಾಯಿಲೆಗೂ ಇದಕ್ಕೂ ಸಂಬಂಧವಿದೆ. ಕ್ಯಾಪ್ನೋಫೋಬಿಯಾ ಇರುವವರಿಗೆ ಹೊಗೆ ನೋಡಿದರೆ ಭಯ ಆಗುತ್ತದೆ. ಈ ಚಿತ್ರಕ್ಕೂ ಆ ಫೋಬಿಯಾಗೂ ಸಂಬಂಧವಿದೆ’ ಎಂದು ಚಿತ್ರದ ಬಗ್ಗೆ ಹೇಳಿದರು. ಜೊತೆಗೆ ಈ ಚಿತ್ರದಲ್ಲಿ ಹೊಸ ಸಂಶೋಧನೆ ಸಂಶೋಧಕನ ಸಾವಿಗೆ ಹೇಗೆ ಕಾರಣವಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎಂಬುದು ಜಯತೀರ್ಥ ಮಾತು. “ನಾನು ಇದನ್ನು ನೈಜ ಘಟನೆಯಾಧರಿತ ಚಿತ್ರವೆಂದು ಹಾಕಿಕೊಂಡರೂ ತಪ್ಪಿಲ್ಲ. ಏಕೆಂದರೆ, ಕೆಲವು ದೇಶಗಳಲ್ಲಿ ಹೊಸ ಸಂಶೋಧನೆ ಮಾಡಿದ ಸಂಶೋಧಕರನ್ನು ಸಾಯಿಸಿದ ಉದಾಹರಣೆ ಇದೆ’ ಎನ್ನಲು ಜಯತೀರ್ಥ ಮರೆಯಲಿಲ್ಲ. 

ಚಿತ್ರದಲ್ಲಿ ಅವಿನಾಶ್‌ ನಾಯಕರಾಗಿ ನಟಿಸಿದ್ದಾರೆ. ಎಂಬಿಎ ಓದಿರುವ ಅವಿನಾಶ್‌ಗೆ ನಟನೆಯ ಮೇಲೆ ಆಸಕ್ತಿ ಇತ್ತಂತೆ. ಮಂಡ್ಯ ರಮೇಶ್‌ ಅವರ ನಟನಾಗೆ ಸೇರಿಕೊಂಡು ಅನೇಕ ಶೋಗಳನ್ನು ಕೊಟ್ಟರಂತೆ. ಅದೊಂದು ದಿನ ಇವರ ಶೋ, ಅದರಲ್ಲಿ ಅವಿನಾಶ್‌ ತೊಡಗಿಸಿಕೊಂಡ ರೀತಿಯಿಂದ ಖುಷಿಯಾದ ಇವರ ತಂದೆ ಇವರಿಗೆ ಹೇಳದೆಯೇ ನಿರ್ದೇಶಕ ಜಯತೀರ್ಥ ಅವರನ್ನು ಸಂಪರ್ಕಿಸಿ ಸಿನಿಮಾ ಮಾಡಲು ಮುಂದಾದರಂತೆ. “ನನಗೆ ಹೀರೋಯಿಂಸ, ಬಿಲ್ಡಪ್‌ಗ್ಳೆಂದರೆ ಇಷ್ಟವಿಲ್ಲ. ತುಂಬಾ ಕೂಲ್‌ ಆಗಿ ಸಾಗುವ, ಕಥೆಗೆ ಒತ್ತು ನೀಡುವ ಸಿನಿಮಾ, ಪಾತ್ರ ಇಷ್ಟ. ಅದು ಈ ಸಿನಿಮಾದಲ್ಲಿ ಸಿಕ್ಕಿದೆ’ ಎನ್ನುವುದು ಅವಿನಾಶ್‌ ಮಾತು. 

ಚಿತ್ರದಲ್ಲಿ ಸ್ವಾತಿ ಕೊಂಡೆ ನಾಯಕಿ. ಈ ಹಿಂದೆ ಜಯತೀರ್ಥ ಅವರ “ಬ್ಯೂಟಿಫ‌ುಲ್‌ ಮನಸುಗಳು’ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದ ಸ್ವಾತಿಗೆ “ವೆನಿಲ್ಲಾ’ದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಹಾಗಾಗಿಯೇ ಅವರು ಜಯತೀರ್ಥ ಅವರನ್ನು ಗಾಢ್‌ ಫಾದರ್‌ ಎಂದು ಕರೆದರು. ಚಿತ್ರದಲ್ಲಿ ರವಿಶಂಕರ್‌ ಗೌಡ ಕೂಡಾ ನಟಿಸಿದ್ದಾರೆ. 

ಆರಂಭದಲ್ಲಿ ಈ ಅವಕಾಶ ಬಂದಾಗ, ಹೊಸ ಹೀರೋ ಹೇಗೆ ಮಾಡುತ್ತಾರೋ ಎಂಬ ಭಾವನೆ ಮನಸ್ಸಲ್ಲಿ ಬಂತಂತೆ. ಆದರೆ ಅವಿನಾಶ್‌ ನಟನೆ ನೋಡಿದ ನಂತರ ರವಿಶಂಕರ್‌ ಅವರಿಗೆ ಭರವಸೆಯ ನಟ ಎನಿಸಿತಂತೆ. ಸಾಮಾನ್ಯವಾಗಿ ಕಾಮಿಡಿ ಪಾತ್ರಗಳಿಗೆ ರವಿಶಂಕರ್‌ ಅವರನ್ನು ಕರೆದರೆ, ಜಯತೀರ್ಥ ಅವರು ಸೀರಿಯಸ್‌ ಪಾತ್ರ ಕೊಟ್ಟಿದ್ದಾರೆ. ಇಲ್ಲಿ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೆಹಮಾನ್‌ ಕೂಡಾ ನಟಿಸಿದ್ದು, ಅವರದ್ದು ನೆಗೆಟಿವ್‌ ಶೇಡ್‌ನ‌ ಪಾತ್ರವಂತೆ. ಚಿತ್ರಕ್ಕೆ ಭರತ್‌ ಬಿ.ಜೆ ಸಂಗೀತ ನೀಡಿದ್ದಾರೆ. ಮದನ್‌ ಬೆಳ್ಳಿಸಾಲು ಒಂದು ಹಾಡು ಬರೆದಿದ್ದಾರೆ. 

ಟಾಪ್ ನ್ಯೂಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

sanju weds geetha 2 song shooting

Sanju Weds Geetha 2; ಕಲರ್’ಫುಟ್ ಸೆಟ್ ನಲ್ಲಿ ಸಂಜು ಹಾಡು

arjun kapikad kaljiga movie

Arjun Kapikad; ತುಳುನಾಡಿನ ಕಲ್ಜಿಗದ ಕಥೆ: ಕರಾವಳಿ ಮಂದಿಯ ಮತ್ತೊಂದು ಸಾಹಸ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.