ಅದೃಷ್ಟದ ಚೆಕ್‌ ಪೋಸ್ಟ್‌; ನಾಲ್ಕು ಗೆಟಪ್ ನಲ್ಲಿ ಉತ್ಪಲ್


Team Udayavani, May 28, 2019, 10:15 AM IST

cini-3

ಕನ್ನಡದಲ್ಲೀಗ ಯುವ ನಟರು ಮೆಲ್ಲನೆ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಯುವ ನಟರು ಹಲವು ಚಿತ್ರಗಳ ಮೂಲಕ ಹೊಸ ಪ್ರಯೋಗದ ಜೊತೆಗೆ ಗುರುತಿಸಿಕೊಂಡಿರುವುದಲ್ಲದೆ, ಗಾಂಧಿನಗರದಲ್ಲಿ ಒಂದಷ್ಟು ಜಾಗ ಮಾಡಿಕೊಳ್ಳುತ್ತಿದ್ದಾರೆ. ಈಗ ಯುವ ನಟ ಉತ್ಪಲ್‌ ಕೂಡ ಅದೇ ಹಾದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಈಗ ಬಿಡುಗಡೆಗೆ ಸಜ್ಜಾಗಿರುವ “ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರ. ಹೌದು, ಈಗಾಗಲೇ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ “ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರದಲ್ಲಿ ಉತ್ಪಲ್‌ ಹೀರೋ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ನಟ ಉತ್ಪಲ್‌ ಅವರ ಪಾತ್ರದಲ್ಲೂ ಅಷ್ಟೇ ವಿಶೇಷವಿದೆ.

ಆ ಬಗ್ಗೆ ಉತ್ಪಲ್‌ ಹೇಳುವುದಿಷ್ಟು. “ಈ ಚಿತ್ರದ ಪಾತ್ರ ಸಾಕಷ್ಟು ಚಾಲೆಂಜ್‌ ಆಗಿತ್ತು. ಅದಕ್ಕಾಗಿ ಮೊದಲೇ ರಿಹರ್ಸಲ್‌ ಕೂಡ ನಡೆಸಲಾಗಿತ್ತು. ಚಿತ್ರದ ಕ್ಲೈಮ್ಯಾಕ್ಸ್‌ ಮುನ್ನ ಬರುವ ದೃಶ್ಯ ಇಡೀ ಚಿತ್ರದ ಜೀವಾಳ. ಆ ದೃಶ್ಯದಲ್ಲಿನ ನಟನೆ ನನಗಷ್ಟೇ ಅಲ್ಲ, ಚಿತ್ರ ನೋಡುವ ಪ್ರತಿಯೊಬ್ಬರ ಮನದಲ್ಲೂ ಉಳಿಯುತ್ತೆ. ಅದಕ್ಕೆ ಕಾರಣ, ನಿರ್ದೇಶಕರು ಸೃಷ್ಟಿಸಿರುವ ಮೂರ್‍ನಾಲ್ಕು ವಿಭಿನ್ನ ಗೆಟಪ್‌.

ಒಂದೇ ಪಾತ್ರದಲ್ಲಿ ನಾಲ್ಕು ಬದಲಾವಣೆಗಳಿವೆ. ಅದು ನಿಜಕ್ಕೂ ಕಷ್ಟದ ಕೆಲಸ. ಕ್ಲೈಮ್ಯಾಕ್ಸ್‌ ಮುನ್ನ ಕಾಣುವ ಆ ದೃಶ್ಯ ಗಮನಿಸಿದವರಿಗೆ ಪಾತ್ರಗಳ ವಿಭಿನ್ನತೆ, ಏರಿಳಿತಗಳು ಎಷ್ಟಿವೆ ಅನ್ನೋದು ಸ್ಪಷ್ಟವಾಗುತ್ತೆ. ನಾನು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ, ನಟನೆ ಅಷ್ಟೇನು ಕಷ್ಟ
ಎನಿಸಲಿಲ್ಲ. ಆದರೆ, ಕೊನೆಯ ಇಪ್ಪತ್ತು ನಿಮಿಷದಲ್ಲಿ ಬರುವ ದೃಶ್ಯಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಕುತೂಹಲ.

ಆ ಪಾತ್ರ ಸಾಕಷ್ಟು ಚೇಂಜ್‌ ಓವರ್‌ ಬಯಸಿದ್ದರಿಂದ ರಿಹರ್ಸಲ್‌ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಇನ್ನು, ಮೇಕಪ್‌ ಇಲ್ಲದೆ, ಯಾವುದೇ ಒಂದೇ ಕಾಸ್ಟೂಮ್ಸ್‌ನಲ್ಲಿ, ಕಥೆಗೆ ತಕ್ಕಂತೆ, ನೈಜವಾಗಿಯೇ ಅಭಿನಯಿಸಬೇಕಾದ ಜವಾಬ್ದಾರಿ ಇದ್ದುದರಿಂದ ಇಡೀ ಚಿತ್ರತಂಡ, ನಿರ್ದೇಶಕರು ಕೊಟ್ಟ ಪ್ರೋತ್ಸಾಹ, ಸಹಕಾರ ಆ ಪಾತ್ರದಲ್ಲಿ ಚೆನ್ನಾಗಿ ನಿರ್ವಹಿಸಲು ಸಾಧ್ಯವಾಯ್ತು’ ಎನ್ನುತ್ತಾರೆ ಉತ್ಪಲ್‌.

ಈ ಚಿತ್ರಕ್ಕೂ ಮುನ್ನ “ಸೋಡಾಬುಡ್ಡಿ’ ಚಿತ್ರದಲ್ಲಿ ನಟಿಸಿದ್ದ ಉತ್ಪಲ್‌ಗೆ, ಸಾಕಷ್ಟು ಕಥೆಗಳು ಹುಡುಕಿ ಬಂದಿದ್ದರೂ, ಯಾವೊಂದು ಕಥೆಯೂ ಇಷ್ಟವಾಗಿರಲಿಲ್ಲವಂತೆ. ಕೊನೆಗೆ ನಿರ್ದೇಶಕ ಪರಮೇಶ್‌ ಅವರು, “ಕಮರೊಟ್ಟು ಚೆಕ್‌ಪೊಸ್ಟ್‌’ ಚಿತ್ರದ ಕಥೆಯ ಎಳೆ ಮತ್ತು ಪಾತ್ರ ವಿವರಿಸಿದಾಗ, ಇದರಲ್ಲೇನೋ ವಿಶೇಷತೆ ಇದೆ ಅಂದುಕೊಂಡು ಒಪ್ಪಿದ್ದಾರೆ.

ನಿರ್ದೇಶಕರಿಗೆ ಕೂಡ ಕ್ಲೈಮ್ಯಾಕ್ಸ್‌ಗೆ ಮುಂಚೆ ಬರುವ ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಯಬೇಕು ಎಂಬ ಆಸೆ ಈಡೇರಿದ ತೃಪ್ತ ಭಾವವಿದೆಯಂತೆ. ನಿರ್ದೇಶಕರು ಕೂಡ ಉತ್ಪಲ್‌ ಸೆಟ್‌ನಲ್ಲೇ ಸ್ಪಾಟ್‌ ರಿಹರ್ಸಲ್‌ ಮಾಡಿ, ಮೂರ್‍ನಾಲ್ಕು ರೀತಿಯಲ್ಲಿ ಅಭಿನಯ ಮಾಡಿ ತೋರಿಸುತ್ತಿ ದ್ದೆಲ್ಲವನ್ನೂ ಸೆರೆಹಿಡಿದು, ದಿ ಬೆಸ್ಟ್‌ ಯಾವುದೋ ಅದನ್ನು ಸೆಲೆಕ್ಟ್ ಮಾಡುತ್ತಿದ್ದರು ಎಂಬುದು ಉತ್ಪಲ್‌ ಮಾತು.

“ಕಮರೊಟ್ಟು ಚೆಕ್ ಪೋಸ್ಟ್ ‘ ಚಿತ್ರ ನನ್ನ ಪಾಲಿನ ಅದೃಷ್ಟ ಎನ್ನುವ ಉತ್ಪಲ್‌, ಇಲ್ಲಿ ಎಲ್ಲವನ್ನೂ ಕಲಿಯಲು, ತಾಂತ್ರಿಕತೆ ಅರಿತುಕೊಳ್ಳಲು ಸಹಾಯವಾಯ್ತು. ಮುಖ್ಯವಾಗಿ, ಒಳ್ಳೆಯ ತಂಡವಿದ್ದರೆ, ಒಳ್ಳೆಯ ಸಿನಿಮಾ ಹೇಗೆ ತಯಾರಾಗುತ್ತೆ ಎಂಬುದನೂ ಅರಿತುಕೊಂಡೆ. ಮೇ.31 ರಂದು ಚಿತ್ರ ರಿಲೀಸ್‌ ಆಗುತ್ತಿದ್ದು, ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾಯುತ್ತಿದ್ದೇನೆ’ ಎನ್ನುತ್ತಾರೆ ಉತ್ಪಲ್‌.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.