‘ಕೊರಳಿನಲ್ಲಿ ಹಾವು’: ಈ ದೃಶ್ಯದ ಹಿಂದಿನ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ ಜಗ್ಗೇಶ್
Team Udayavani, Aug 13, 2021, 4:29 PM IST
ಬೆಂಗಳೂರು: ‘ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿಯ ಒಂದು ದೃಶ್ಯದ ಹಿಂದಿರುವ ಕುತೂಹಲಕಾರಿ ವಿಷಯವೊಂದನ್ನು ನಟ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.
ರಾಜ್ ಕಿಶೋರ್ ನಿರ್ದೇಶನದ 1994ರಲ್ಲಿ ತೆರೆ ಕಂಡಿದ್ದ ‘ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿ ಜಗ್ಗೇಶ್ ಅವರು ನಾಯಕ ನಟರಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ದೃಶ್ಯವೊಂದರಲ್ಲಿ ಜಗ್ಗೇಶ್ ಕೊರಳಿನಲ್ಲಿ ಹಾವು ಇರುತ್ತದೆ. ನಾಗರ ಪಂಚಮಿಯ ಸೀನ್ ಗಾಗಿ ಈ ದೃಶ್ಯ ಸೆರೆ ಹಿಡಿಯಲಾಗಿತ್ತು. ಈ ಸೀನ್ ಇಂದೆ ಇರುವ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ.
ಇದು ಅದ್ಭುತ ದೃಶ್ಯ. ಆದರೆ ಅಂದು ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನನ್ನು ಬೈದದ್ದು. ನಂತರ ಡಬ್ಬಿಂಗ್ನಲ್ಲಿ ಈ ಸಂಭಾಷಣೆ ಹೇಳಿದ್ದು. ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಅದ್ಭುತ ದೃಶ್ಯ ಆದರೆ ಅಂದು ಹೃದಯ ಬಾಯಿಗೆ ಬಂದಿತ್ತು ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೆ..ಆಡಿರುವುದು ಸಂಭಾಷಣೆ ಅಲ್ಲ ಬಾಯಿಗೆ ಬಂದಂತೆ ಭಯಕ್ಕೆ ನಿರ್ದೇಶಕನ ಬೈದದ್ದು ನಂತರ ಡಬ್ಬಿಂಗ್ ನಲ್ಲಿ ಈ ಸಂಭಾಷಣೆ ಹೇಳಿದ್ದು!ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್.. ಸತ್ತು 17ವರ್ಷ ಆಯಿತು!
ಅಮರ ಹಳೆ ನೆನಪು!! https://t.co/ARJCKpQ3ql— ನವರಸನಾಯಕ ಜಗ್ಗೇಶ್ (@Jaggesh2) August 13, 2021
ನಾಗರ ಪಂಚಮಿ ದಿನವಾದ ಇಂದು ಅಭಿಮಾನಿಯೋರ್ವ ಜಗ್ಗೇಶ್ ನಟನೆಯ ಬೇಡ ಕೃಷ್ಣ ರಂಗಿನಾಟ ಚಿತ್ರದ ದೃಶ್ಯ ಹಂಚಿಕೊಂಡಿದ್ದರು. ಅದರ ಶೂಟಿಂಗ್ ನೆನಪನ್ನು ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್