ಜೋಗದ ಸಿರಿ ಕಣ್ತುಂಬಿಕೊಂಡು ಸಂಭ್ರಮಿಸಿದ ನಟ ಜಗ್ಗೇಶ್
Team Udayavani, Aug 5, 2021, 9:40 PM IST
ಬೆಂಗಳೂರು : ನವರಸ ನಾಯಕ ಜಗ್ಗೇಶ್ ಅವರು ತಮ್ಮ ಸಿನಿಮಾಗಳ ಶೂಟಿಂಗ್ ಬ್ಯುಝಿ ಶೆಡ್ಯೂಲ್ಡ್ ನಡುವೆಯೂ ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.
ಬುಧವಾರ ಜೋಗಕ್ಕೆ ತೆರಳಿದ್ದ ಜಗ್ಗಣ್ಣ, ಅಲ್ಲಿಯ ಜಲಧಾರೆಯನ್ನು ಕಣ್ತುಂಬಿಕೊಂಡಿದ್ದಾರೆ. ಜೋಗದ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿದ್ದಾರೆ.
“ ಪ್ರಕೃತಿಯಲ್ಲಿ ನನ್ನ ಪ್ರತಿರೂಪ ಪ್ರತಿಬಿಂಬವಿದೆ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ಮಾತನ್ನು ಉಲ್ಲೇಖಿಸಿರುವ ಅವರು, ಪ್ರಕೃತಿಯ ಕಂಡಾಗ ಮನ ಆನಂದ ಮೂಡುವ ಮತ್ತೊಂದು ಸ್ಥಿತಿಯೇ ಭಕ್ತಿ. ಇದೇ ಮಾತನ್ನು ಮನಶಾಸ್ತ್ರಜ್ಞ ಹೇಳುತ್ತಾರೆ. ಮನಸ್ಸಿಗೆ ಶಾಂತಿ ಸಿಗಲು ಪ್ರಕೃತಿಯಲ್ಲಿ ವರ್ಷಕ್ಕೆ ಕೆಲ ದಿನ ಮನ ಮಜ್ಜನ ಮಾಡಿ ಬನ್ನಿ ಮನಸ್ಸಿನ ಆರೋಗ್ಯಕ್ಕೆ ಇದು ಶ್ರೇಷ್ಟ ಚಿಕಿತ್ಸೆ ಎನ್ನುವುದು ಮನಶಾಸ್ತ್ರಜ್ಞರ ಸಲಹೆ ಆಗಿರುತ್ತದೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
ಇನ್ನು ಜಗ್ಗೇಶ್ ಅವರು ನಟಿಸಿರುವ ತೋತಾಪುರಿ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷ ಈ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಇದರ ಜೊತೆ ಮಠ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಅವರ ಜೊತೆ ರಂಗನಾಯಕ ಸಿನಿಮಾದಲ್ಲೂ ಜಗ್ಗೇಶ್ ಅವರು ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಕೂಡ ಶುರುವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ