ಇವ ಕನ್ನಡ ಬಾಹುಬಲಿ!
Team Udayavani, Aug 16, 2018, 11:55 AM IST
ತೆಲುಗಿನ “ಬಾಹುಬಲಿ’ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ” ಶ್ರೀ ಭರತ ಬಾಹುಬಲಿ’ ಬಗ್ಗೆ ಗೊತ್ತಾ? ಈ ಹಿಂದೆ ಮಂಜು ಮಾಂಡವ್ಯ, ” ಶ್ರೀ ಭರತ ಬಾಹುಬಲಿ’ ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರ ಇದೀಗ ಸದ್ದಿಲ್ಲದೆಯೇ ಮೂರನೇ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿಯೂ ಮಂಜು ಮಾಂಡವ್ಯ ಅವರದೇ.
“ಮಾಸ್ಟರ್ ಪೀಸ್’ ಬಳಿಕ ಉಪೇಂದ್ರ ಚಿತ್ರ ಮಾಡುತ್ತಾರೆ ಅಂತ ಸುದ್ದಿಯಾಗಿದ್ದರು ಮಂಜು ಮಾಂಡವ್ಯ. ಆದರೆ, ಕೆಲ ಕಾರಣಗಳಿಂದ ಆ ಸಿನಿಮಾವನ್ನು ಬದಿಗೊತ್ತಿದ ಮಂಜು ಮಾಂಡವ್ಯ, “ಶ್ರೀ ಭರತ ಬಾಹುಬಲಿ’ ಚಿತ್ರವನ್ನು ಕೈಗೆತ್ತಿಕೊಂಡು, ಈಗ ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಅಂದಹಾಗೆ, ಇದು ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ನಡಿ ನಿರ್ಮಾಣವಾಗುತ್ತಿದೆ.
ಮೈಸೂರಿನಲ್ಲಿ ನಡೆದ ಮೂರನೇ ಹಂತದ ಚಿತ್ರೀಕರಣದಲ್ಲಿ ಮಂಜು ಮಾಂಡವ್ಯ, ಭವ್ಯಾ ಮತ್ತು ಚಿಕ್ಕಣ್ಣ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದರು. ಈ ಚಿತ್ರದ ಮೂಲಕ ಸಾ.ರಾ.ಹರೀಶ್ ಕೂಡ ಮಂಜು ಮಾಂಡವ್ಯ ಜೊತೆಗೆ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಿ, ಶ್ರೇಯಾ, ಅಚ್ಯುತ್ಕುಮಾರ, ಶ್ರೀನಿವಾಸಮೂರ್ತಿ, ಅಯ್ಯಪ್ಪ ಇತರರು “ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿದ್ದಾರೆ. ಪರ್ವೀಜ್ ಈ ಚಿತ್ರದ ಛಾಯಾಗ್ರಹಣ ಮಾಡಿದರೆ, ಮಣಿಕಾಂತ್ ಕದ್ರಿ ಸಂಗೀತವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ