“ಕನ್ನಡ ಕಲಿಯೋ ಮುಂಡೆದೆ’ ಅಂದ್ರು ಶಿವಣ್ಣ: Watch
Team Udayavani, Sep 4, 2018, 3:47 PM IST
ನಟ ವೈಭವ್ ಕನ್ನಡ ಚಿತ್ರರಂಗಕ್ಕೆ “ತಾರಕಾಸುರ’ ಚಿತ್ರದ ಮೂಲಕ ಪರಿಚಯವಾಗುತ್ತಿದ್ದು, ಇದೀಗ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಡಿರುವ “ಕನ್ನಡ ಕಲಿಯೋ.. ಕನ್ನಡ ಕಲಿಯೋ…. ಕಲಿಯೋ ಮುಂಡೆದೆ’ ಎಂಬ ಲಿರಿಕಲ್ ಹಾಡನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಡಿಗೆ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ.
ಇದು ನಾಯಕನ ಇಂಟ್ರೋಡಕ್ಷನ್ ಹಾಡಾಗಿದ್ದು, ಸಾಹಿತ್ಯವನ್ನು ಕವಿರಾಜ್ ಬರೆದಿದ್ದಾರೆ. “ರಥಾವರ’ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ “ತಾರಕಾಸುರ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ವೈಭವ್ ತಂದೆ ನರಸಿಂಹಲೂ ಬಂಡವಾಳ ಹೂಡಿದ್ದಾರೆ. ವೈಭವ್ ಜತೆ ಮಾನ್ವಿತಾ ನಾಯಕಿಯಾಗಿ ಹೆಜ್ಜೆ ಹಾಕಿದ್ದಾರೆ.
ಇನ್ನು ಚಿತ್ರಕ್ಕೆ ಧರ್ಮ ವಿಶ್ ಸಂಗೀತ ಸಂಯೋಜನೆಯಿದ್ದು, ಪ್ರದೀಪ್ ಗೌಡ ಕ್ಯಾಮರಾ ವರ್ಕ್, ಕೆ.ಎಂ.ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಮತ್ತು ಜಾಲಿಬಾಸ್ಟಿನ್ ಸಾಹಸ, ಮುರಳಿ ನೃತ್ಯ ನಿರ್ದೇಶನ ಸೇರಿದಂತೆ ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ್ ಭಟ್, ಚೇತನ್ ಕುಮಾರ್ ಹಾಗೂ ಹೊಸ ಹುಡುಗ ವಿನಾಯಕ್ ಸಾಹಿತ್ಯ ಚಿತ್ರಕ್ಕಿದೆ. ಅಲ್ಲದೇ ತಾರಾಗಣದಲ್ಲಿ ವೈಭವ್, ಮಾನ್ವಿತಾ ಹರೀಶ್, ಸಾಧು ಕೋಕಿಲ, ಡ್ಯಾನಿ ಸಪಾನಿ, ಕರಿಸುಬ್ಬು, ಎಂ.ಕೆ. ಮಠ ಮುಂತಾದವರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ