‘ಕನ್ನಡತಿ’ ಹೇಳಿದ ಕಥೆಯ ವೃತ್ತಾಂತ
Team Udayavani, Jul 6, 2021, 9:35 AM IST
“ಪುಟ್ಟಗೌರಿಯ ಮದುವೆ’ ಧಾರಾವಾಹಿಖ್ಯಾತಿಯ ನಟಿ ರಂಜನಿ ರಾಘವನ್, ಈಗ “ಕನ್ನಡತಿ’ ಧಾರಾವಾಹಿಯ ಭುವಿ ಪಾತ್ರದಲ್ಲಿ ಮನೆಮಾತಾಗಿರುವ ನಟಿ. ನಟನೆಯ ಜೊತೆಗೆ ಸಾಹಿತ್ಯದ ಕಡೆಗೂ ಆಸಕ್ತಿ ಬೆಳೆಸಿಕೊಂಡಿರುವ ರಂಜನಿ ರಾಘವನ್, ಈ ಲಾಕ್ಡೌನ್ ಸಮಯದಲ್ಲಿ ವೆಬ್ಸೈಟ್ ಒಂದಕ್ಕೆ ಕಥೆ ಬರೆಯುವ ಕೆಲಸವನ್ನು ಶುರು ಮಾಡಿದ್ದರು. ಈಗಾಗಲೇ ರಂಜನಿ ರಾಘವನ್ ಬರೆದಿರುವ ಸುಮಾರು ಏಳು ಕಥೆಗಳು ಈ ವೆಬ್ಸೈಟ್ನಲ್ಲಿ ಪ್ರಕಟಗೊಂಡಿದ್ದು, ಓದುಗ ರಿಂದ ಬಿಗ್ ರೆಸ್ಪಾನ್ಸ್ ಬರುತ್ತಿದೆಯಂತೆ.
ಈವಿಷಯವನ್ನು ಹೇಳಿಕೊಳ್ಳುವ ಸಲುವಾಗಿ ಇತ್ತೀಚೆಗೆ ರಂಜನಿ ಮೊದಲ ಬಾರಿಗೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ವೇಳೆ “ನನ್ನಕಥೆಯನು ಜನರು ಓದುತ್ತಾರೆ, ಇಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಬರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಬರವಣಿಗೆಯನ್ನು ಸುಧಾರಿಸಿಕೊಳ್ಳಲು ನಾನುಕಥೆ ಬರೆಯಲು ಆರಂಭಿಸಿದೆ. ಆದರೆ ಈಗ ಪ್ರತೀ ವಾರಕಥೆ ಬರೆಯುತ್ತಾ ಹೋದಂತೆ ನನ್ನ ಕಥೆಗಳೇ ನನಗೆ ಸ್ಪರ್ಧೆ ನೀಡಲು ಆರಂಭಿಸಿವೆ. ನನಗೆ ಒಂದು ರೀತಿ ಜವಾಬ್ದಾರಿ ಹೆಚ್ಚಾಗಿ ಭಯ ಆಗುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:ಇಂದು ನಟ ಲೂಸ್ ಮಾದ ಯೋಗಿ ಬರ್ತ್ಡೇ: ’ಲಂಕೆ’ ಚಿತ್ರದಿಂದ ಮೋಶನ್ ಪೋಸ್ಟರ್ ಗಿಫ್ಟ್
ಇನ್ನು ಇನ್ಸ್ಟಾಗ್ರಾಂ ಲೈವ್ನಲ್ಲಿ ಅಭಿಮಾನಿಗಳಿಂದ ಬಂದ ಹತ್ತಾ ರು ಪ್ರಶ್ನೆಗಳಿಗೆ ಉತ್ತರಿಸಿರುವ ರಂಜನಿ ತಮ್ಮ ಕಥೆಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಎಲ್ಲ ಓದುಗರಿಗೆ ಧನ್ಯವಾದ ತಿಳಿಸಿದ್ದಾ. ಅಂದ ಹಾ ಗೆ, ರಂಜನಿ ಮುಂದಿನ ದಿನಗಳಲ್ಲಿ ಈ ಎಲ್ಲ ಕಥೆಗಳ ನ್ನು ಕಥಾಸಂಕಲನದ ರೂಪದಲ್ಲಿ ಹೊರತರುವ ಯೋಚನೆಯಲ್ಲೂ ಇದ್ದಾರಂತೆ.