ಕನ್ನೇರಿ: ನೋಡ ನೋಡುತ್ತಾ ಕಾಡುವ ಚಿತ್ರ


Team Udayavani, Mar 7, 2022, 11:14 AM IST

ಕನ್ನೇರಿ: ನೋಡ ನೋಡುತ್ತಾ ಕಾಡುವ ಚಿತ್ರ

ಹುಡುಗಿ ಮುತ್ತಮ್ಮ. ತಂದೆ-ತಾಯಿಯಿಲ್ಲದ ಈ ಹುಡುಗಿಯನ್ನು ಪ್ರೀತಿಯಿಂದ ಸಲಹುತ್ತಿರುತ್ತಾನೆ ವಯೋವೃದ್ಧ ಬೊಮ್ಮಜ್ಜ. ಕಾಡಿನ ಹಾಡಿಯಲ್ಲಿ ಸ್ವಚ್ಛಂದವಾಗಿ ಆಡಿಕೊಂಡು ಬೆಳೆಯುತ್ತಿದ್ದಮುತ್ತಮ್ಮ, ಸರ್ಕಾರ ಆದಿವಾಸಿಗಳನ್ನುಒಕ್ಕಲೆಬ್ಬಿಸಿದ್ದರಿಂದ ಕಾಡಿನಿಂದ ನಾಡಿಗೆ ಬರುವಂತಾಗುತ್ತಾಳೆ. ಹೀಗೆ ಕಾಡಿನಿಂದ ನಾಡಿಗೆ ಬರುವ ಮುತ್ತಮ್ಮನ ಜೀವನದಲ್ಲಿ ಏನೇನುತಿರುವುಗಳು ಎದುರಾಗುತ್ತವೆ? ಮುತ್ತಮ್ಮಳ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೆ? ಮುಗ್ಧ ಜನಜೀವನದ ಮೇಲೆ ನಗರೀಕರಣ ಮತ್ತು ಆಧುನಿಕತೆ ಬೀರುವ ಪರಿಣಾಮಗಳೇನು ಅನ್ನೋದು “ಕನ್ನೇರಿ’ ಚಿತ್ರದ ಕಥಾಹಂದರ.

ಕೆಲ ವರ್ಷಗಳ ಹಿಂದೆ ಕೊಡಗು ಮತ್ತು ಹಳೇ ಮೈಸೂರು ಭಾಗದಲ್ಲಿ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ, ಅದಕ್ಕೊಂದು ಸಿನಿಮಾ ರೂಪ ಕೊಟ್ಟು ತೆರೆಮೇಲೆ ತಂದಿದ್ದಾರೆ ನಿರ್ದೇಶಕನೀನಾಸಂ ಮಂಜು. ವನವಾಸಿಗಳ ಬದುಕು, ನಗರಜೀವನ ಚಿತ್ರಣ ಎರಡೂ ಎಳೆಯನ್ನೂ ಪೋಣಿಸಿಮನಮುಟ್ಟುವಂತೆ ಚಿತ್ರವನ್ನು ನಿರೂಪಣೆ ಮಾಡಿರುವ ನಿರ್ದೇಶಕರ ಪ್ರಯತ್ನ ಪ್ರಶಂಸನಾರ್ಹ.

ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರಕಥೆ ನಿರೂಪಣೆಗೆ ಇನ್ನಷ್ಟು ಹರಿತವಾಗಿದ್ದರೆ, ಮುತ್ತಮ್ಮನ ಕಥೆ ಇನ್ನಷ್ಟು ವೇಗವಾಗುವುದರ ಜೊತೆಗೆ ಇನ್ನಷ್ಟು ಆಳವಾಗಿ ಪ್ರೇಕ್ಷಕರಮನಮುಟ್ಟುವ ಸಾಧ್ಯತೆಗಳಿದ್ದವು. ಅದನ್ನು ಹೊರತುಪಡಿಸಿದರೆ “ಕನ್ನೇರಿ’ ಥಿಯೇಟರ್‌ನಹೊರಗೂ ನೋಡುಗರನ್ನು ಕಾಡುವ ಅಪರೂಪದಕಾಡಿನ ಕಥೆ ಎನ್ನಲು ಅಡ್ಡಿಯಿಲ್ಲ.ಇನ್ನು “ಕನ್ನೇರಿ’ ಮಹಿಳಾ ಪ್ರಧಾನಚಿತ್ರವಾಗಿದ್ದು, ಇಡೀ ಸಿನಿಮಾ ಮುತ್ತಮ್ಮ ಎಂಬಹರೆಯದ ಹುಡುಗಿಯ ಪಾತ್ರದ ಸುತ್ತ ಸಾಗುತ್ತದೆ.

ಮುತ್ತಮ್ಮನ ಪಾತ್ರದಲ್ಲಿ ಅರ್ಚನಾ ಮಧುಸೂಧನ್‌ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆಕರಿಸುಬ್ಬು, ಎಂ.ಕೆ ಮಠ, ಅನಿತಾ ಭಟ್‌, ಅರುಣ್‌ ಸಾಗರ್‌ ಅವರದ್ದು ಪಾತ್ರಕ್ಕೊಪ್ಪುವ ಅಚ್ಚುಕಟ್ಟು ಅಭಿನಯ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ ಗಮನ ಸೆಳೆಯುವಂತಿದೆ. ಹಸಿರಿನ ಸೌಂದರ್ಯ, ವನವಾಸಿಗಳ ಜೀವನ ಶೈಲಿ ತುಂಬ ಸೊಗಸಾಗಿ ಛಾಯಾಗ್ರಹಣದಲ್ಲಿ ಸೆರೆಹಿಡಿಯಲಾಗಿದೆ.

ಸಂಕಲನ ಕಾರ್ಯ ಮತ್ತು ಕಲರಿಂಗ್‌ ಕೆಲವು ಕಡೆಗೆನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು.ಕೆಲ ಲೋಪಗಳನ್ನು ಬದಿಗಿಟ್ಟರೆ, ನೋಡು ನೋಡುತ್ತಲೇ ನಿಧಾನವಾಗಿ ನೋಡುಗರನ್ನು ಒಂದು ಚಿಂತನೆ ಹಚ್ಚಿಸುವ “ಕನ್ನೇರಿ’ ಥಿಯೇಟರ್‌ನ ಹೊರಗೂ ಕೆಲಹೊತ್ತು ಕಾಡುತ್ತದೆ.

ಚಿತ್ರ: ಕನ್ನೇರಿ

ರೇಟಿಂಗ್‌: ***

ನಿರ್ಮಾಣ: ಬುಡ್ಡಿ ದೀಪ ಸಿನಿಮಾ ಹೌಸ್‌

ನಿರ್ದೇಶನ: ನೀನಾಸಂ ಮಂಜು

ತಾರಾಗಣ: ಅರ್ಚನಾ, ಕರಿಸುಬ್ಬು, ಎಂ.ಕೆ ಮಠ, ಅನಿತಾ ಭಟ್‌, ಅರುಣ್‌ ಸಾಗರ್‌ ಮತ್ತಿತರರು.

 

ಕೆ.ಸುಧನ್

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

sanju weds geetha 2 song shooting

Sanju Weds Geetha 2; ಕಲರ್’ಫುಟ್ ಸೆಟ್ ನಲ್ಲಿ ಸಂಜು ಹಾಡು

arjun kapikad kaljiga movie

Arjun Kapikad; ತುಳುನಾಡಿನ ಕಲ್ಜಿಗದ ಕಥೆ: ಕರಾವಳಿ ಮಂದಿಯ ಮತ್ತೊಂದು ಸಾಹಸ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.